ಹಾವೇರಿ:- ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.
Siddaramaiah: ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ -ಸಿಎಂ ಸಿದ್ದರಾಮಯ್ಯ
ಈ ಸಂಬಂಧ ಹಾವೇರಿಯಲ್ಲಿ ಮಾತನಾಡಿದ ಅವರು, ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರಕ್ಕೆ ಬಂದಿದ್ದೇವೆ. ಅವರನ್ನ ಗೆಲ್ಲಿಸುವ ಜವಾಬ್ದಾರಿ ಮಂತ್ರಿಗಳು ಶಾಸಕರ ಮೇಲಿದೆ ಎಂದರು.
ಇನ್ನೂ ಪ್ರಜ್ವಲ್ ರೇವಣ್ಣ ಪ್ರಕರಣವನ್ನ ಎಸ್ ಐಟಿ ತನಿಖೆ ಮಾಡುತ್ತಿದ್ದಾರೆ. ಯಾರ ಮೇಲೆ ಏನು ಹೇಳಿ ಪ್ರಯೋಜನ ಇಲ್ಲ. ಖಂಡನೆ ಮಾಡಲೇಬೇಕು, ಅಂತಿಮವಾಗಿ ಸತ್ಯ ಹೊರ ಬರಲು ತನಿಖಾ ವರದಿ ಬರಬೇಕು. ಇದನ್ನು ರಾಜಕೀಯ ಮಾಬಹುದಾಗಿತ್ತು, ನಾವು ಹಿಂದೆನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಹಾಸನ ಪ್ರಕರಣಕ್ಕೆ ಮೋದಿಯವರು ಉತ್ತರ ಕೊಡಬೇಕು. ತನಿಖೆ ಆಗಲಿ ಸತ್ಯಾಂಶ ಹೊರ ಬರುತ್ತದೆ ಎಂದರು.
ಕರಾವಳಿ, ಹುಬ್ಬಳ್ಳಿಯಲ್ಲಿ ಆದ ಪ್ರಕರಣಗಳನ್ನ ಬಿಜೆಪಿಯವರು ರಾಜಕೀಯವಾಗಿ ಲಾಭ ಪಡೆಯಲು ಬಳಸಿಕೊಂಡರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಸರಕಾರ ಬೀಳಿಸುವುದು ಸುಲಭವಲ್ಲ. ಸರಕಾರ ಸುಭದ್ರವಾಗಿ ಇರಲಿದೆ ಎಂದರು.