ವಿಜಯನಗರ :- ಸಂವಿಧಾನವನ್ನೇ ವಿರೋಧಿಸಿದವರು ಬಿಜೆಪಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಗೆ ಗುಂಡೇಟು..!
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಸರ್ವೇ ಪ್ರಕಾರ 200 – 220 ಗೆಲ್ಲಲಿದ್ದಾರೆ. ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇನಲ್ಲಿ 210 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ಪ್ರಕಟಿಸಿದ್ದರು. ಇದನ್ನು ಮೋದಿ ಆನಂತರ ಡಿಲೇಟ್ ಮಾಡಿಸಿದ್ದಾರೆ. ಈ ವಿಷಯ ಜನರಿಗೆ ಗೊತ್ತಾದರೆ ವೋಟ್ ಹಾಕಲ್ಲ ಅಂತ ಹೀಗೆ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಮತದಾನ ಮಾಡುವ ಮುನ್ನ ಮೋದಿ ಏನು ಕೆಲಸ ಮಾಡಿದ್ದಾರೆ?, ಹತ್ತು ವರ್ಷ ಏನು ಕೆಲಸ ಮಾಡಿದ್ದಾರೆ ಅನ್ನುವುದು ಪರಿಶೀಲನೆ ಮಾಡಿ. ನುಡಿದಂತೆ ನಡೆದಿದ್ದೀರಾ? ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ?, ದೇಶ ರಕ್ಷಣೆ ಮಾಡೋದು ಮೋದಿ ಅಂತೇಳಿ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಅಂತ ಯಾವ ವಿಷಯಗಳಿಲ್ಲ ಎಂದು ಹೇಳಿದರು.
ಅವರು ಎಲ್ಲ ಕಡೆ ಸುಳ್ಳು ಹೇಳುತ್ತಿದಾರೆ. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದ್ದಾರೆ ಅಂತಾರೆ, ಆದರೆ, ಕಾಂಗ್ರೆಸ್ ಈ ಮಹನೀಯರ ಬಗ್ಗೆ ಅವಮಾನ ಮಾಡುವ ಕೆಲಸ ಮಾಡಿಲ್ಲ. ಕಿತ್ತೂರು ರಾಣಿ ಜಯಂತಿ ಆಚರಣೆ ಮಾಡಿದ್ದು ನಾನೆ. ಹಿಂದುಳಿದ, ದಲಿತ ಮೀಸಲಾತಿಯನ್ನು ಮುಸ್ಲಿಂರಿಗೆ ಕೊಡುತ್ತಾರೆ ಅಂತ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಮೀಸಲಾತಿ ಪರವಾಗಿಲ್ಲ, ಎಲ್ಲ ಕಾಲದಲ್ಲಿ ಮೀಸಲಾತಿ ವಿರೋಧಿಸಿದ್ದಾರೆ. ಸಂವಿಧಾನವನ್ನೇ ಬಿಜೆಪಿ ವಿರೋಧಿಸಿದ್ದಾರೆ ಎಂದು ದೂರಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಮೋದಿ ಗ್ಯಾರಂಟಿ ಅಂದ್ರೇ ಏನು? ನಿಮ್ಮ ಹೊಟ್ಟೆ ತುಂಬಲು ಸಿದ್ದರಾಮಯ್ಯ ಗ್ಯಾರಂಟಿ ಕಾರಣ. ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಅದು ನಿನ್ನ ಹಣೆಬರಹದಲ್ಲಿ ಇಲ್ಲ ಎಂದು ಟಾಂಗ್ ನೀಡಿದರು. ಮಾತಿನುದ್ದಕ್ಕೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಕಾಂಗ್ರೆಸ್ ನಾಯಕರಿಂದ ಬಳ್ಳಾರಿಯಲ್ಲಿ ಶಾಂತಿ ನೆಲೆಸಿದೆ. ಗಲಾಟೆ, ದಬ್ಬಾಳಿಕೆ ಬಳ್ಳಾರಿಯಲ್ಲಿ ನಿಂತಿದೆ. ಸುಲಿಗೆ ಮಾಡುವ ಜನರಿಗೆ ಅವಕಾಶ ನೀಡಬೇಡಿ. ಕೃಷ್ಣ ದೇವರಾಯನ ಕಾಲದಿಂದಲೂ ಬಳ್ಳಾರಿಗೆ ದೊಡ್ಡ ಚರಿತ್ರೆ ಇದೆ. ಸರಳತೆ ಮತ್ತೊಂದು ಹೆಸರು ತುಕಾರಾಂ ಎಂದರು.
ಸಮಾವೇಶದಲ್ಲಿ ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಜ್ಜಿಗೆ ವಿತರಣೆ ಮಾಡುತ್ತಿದ್ದ ವೇಳೆ, ಮಜ್ಜಿಗೆ ಪ್ಯಾಕೇಟ್ ಪಡೆಯಲು ಜನರು ಮುಗಿಬಿದ್ದಿದ್ದರು
![](https://ainlivenews.com/wp-content/uploads/2024/01/Ad-Banner-copy-scaled.jpg)