ಬೆಂಗಳೂರು: ಕಾಂಗೆಸ್ನವರ (Congress) ಚೊಂಬು ಜಾಹೀರಾತಿನ ಕುರಿತು ಪ್ರಸ್ತಾಪಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಇಂದು ತಿರುಗೇಟು ಕೊಟ್ಟರು. ಚಿಕ್ಕಬಳ್ಳಾಪುರದಲ್ಲಿ ನಡೆದ ವಿಜಯಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ನಾವು ಇಂದು ಸೇರಿರೋದು ಈ ರಾಜ್ಯದಲ್ಲಿ 28 ಸ್ಥಾನಗಳನ್ನ NDA ಅಭ್ಯರ್ಥಿ ಗಳನ್ನ ಗೆಲ್ಲಿಸಬೇಕು. 10 ವರ್ಷ ಈ ದೇಶವನ್ನ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ನಮ್ಮ ಪ್ರಧಾನಿಗಳು ಹೋಗಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್ ನ ಚೊಂಬು ಜಾಹೀರಾತು ಪ್ರದರ್ಶನವನ್ನು ದೇವೇಗೌಡರು ಮಾಡಿದರು. ರಾಜ್ಯದ ಮುಖ್ಯಮಂತ್ರಿಗಳು ಚೆಂಬನ್ನ ಯಾರಿಗೆ ಕೊಟ್ಟರು? ಈ ಚೊಂಬನ್ನು 10 ವರ್ಷ ಮನಮೋಹನ್ ಸಿಂಗ್ ಕೊಟ್ಟಿದ್ದು . 2004-2014 ಅವಧಿಯಲ್ಲಿ ಈ ರಾಷ್ಟ್ರ ಆಳಿದರು,
ಎಲೆಕೋಸನ್ನ ವಾರಕ್ಕೊಮ್ಮೆ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಸೋನಿಯಾ ಗಾಂಧಿ ಯುಪಿಎ ಚೇರ್ ಮನ್ ಆಗಿದ್ರು. 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಎಷ್ಟು ಭ್ರಷ್ಟಾಚಾರ ಹೀಗೆ ಎಷ್ಟು ಭ್ರಷ್ಟಾಚಾರಗಳು ನಡೆದಿವೆ. ಈ ರಾಷ್ಟ್ರದ ಸಂಪತ್ತನ್ನ ಸೂರೆ ಮಾಡಿ ಚೆಂಬು ಬರಿದಾಗಿತ್ತು. ಆ ಬರೀ ಚೆಂಬನ್ನ ಯಾರ್ ಕೈಗೆ ಕೊಟ್ರು. ಈ ಕಾಂಗ್ರೆಸ್ ಅವರು ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಈ ರಾಷ್ಟ್ರದ ಸಂಪತ್ತು ಲೂಟಿ ಮಾಡಿ ನರೇಂದ್ರ ಮೋದಿಯವರಿಗೆ 2014 ರಲ್ಲಿ ಚೆಂಬು ಕೊಟ್ರು. ಮೋದಿ ಅವರು ಬರೀ ಚೆಂಬನ್ನ 10 ವರ್ಷ ದೇಶವನ್ನ ಆಳಿ ಅಕ್ಷಯ ಪಾತ್ರೆಯನ್ನಾಗಿ ಮಾಡುತ್ತಾರೆ ಎಂದು ಹೇಳುತ್ತಾ ಹೆಚ್ಡಿಡಿಯವರು ಮೋದಿ ಕೈ ಎತ್ತಿ ತೋರಿಸಿದರು.