ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯಾರಾದರೂ ಇನ್ಸೂರೆನ್ಸ್ ಮಾಡ್ತಾರೆ ಅಂದ್ರೆ ಯಾರನ್ನು ತಕ್ಷಣ ನಂಬಲೇಹೋಗಬೇಡಿ ಹೋದ್ರೆ ನಿಮಗೆ ನೀವೇ ಮೋಸ ಹೋಗೋದು ಗ್ಯಾರಂಟಿ ..ಅದೇ ರೀತಿ ಇಲ್ಲೊಂದು ನಡೆದಿದೆ ಕಥೆ
ಹೌದು … ಲೈಫ್ ಇನ್ಸುರೆನ್ಸ್ ಪಾಲಿಸಿ ಮಾಡಿಸ್ತೇನೆಂದು ವಂಚಿಸ್ತಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ ನಾಲ್ಕು ಕೋಟಿ ಐವತ್ತೊಂದು ಲಕ್ಷ ಮೌಲ್ಯದ ಹಣ ವಂಚಿಸಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ವ್ಯಾಪಾರ ಕೇಂದ್ರಗಳಾಗುತ್ತಿವೆ ಪೊಲೀಸ್ ಠಾಣೆಗಳು – ಲೋಕಾಯುಕ್ತ ಕೋರ್ಟ್!
ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸುರೆನ್ಸ್ ಹೆಸರಲ್ಲಿ ಕರೆ ಮಾಡಿ ವಂಚಿಸ್ತಿದ್ದ ಇನ್ಸುರೆನ್ಸ್ ಪ್ರೀಮಿಯಂ ಬಾಂಡ್ ಮಾಡಿಸ್ತೀನಿ ಪಾಲಿಸಿ ಪಡೆಯಲು 15 ಲಕ್ಷ ಹಣವನ್ನು ಚೆಕ್ ಮುಖಾಂತರ ಪಡಿತಿದ್ದ ತಿಂಗಳ ನಂತರ ಇನ್ಸುರೆನ್ಸ್ ಕಂಪನಿಗೆ ಹೋಗಿ ವಿಚಾರಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಖಾಸ್ ಗಂಜ್ ನಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನ ಪತ್ತೆ ಮಾಡಿದ್ದ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದು 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಇದುವರೆಗೂ ಸುಮಾರು 4 ಕೋಟಿ 51 ಲಕ್ಷಕ್ಕುಇ ಅಧಿಕ ಹಣ ಅಮಾಯಕರಿಗೆ ಮೋಸ ಮಾಡಿರೋದು ಬೆಳಕಿಗೆ ಇದೇ ರೀತಿಯಾಗಿ ಇನ್ಸುರೆನ್ಸ್ ಪಾಲಿಸಿ ಹೆಸರಲ್ಲಿ ಸುಮಾರು 34 ಕೇಸ್ ನಲ್ಲಿ ಭಾಗಿಯಾಗಿರುವ ಆರೋಪಿ
ಜನರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪೊಟೋ ಚೆಕ್ ಪಡೆಯಲು ಸ್ಥಳೀಯ ವ್ಯಕ್ತಿಯನ್ನ ನೇಮಿಸಿಕೊಂಡಿದ್ದ ಕೋರಿಯರ್ ಮೂಲಕ ಚೆಕ್ ಗಳನ್ನ ಕಲೆಕ್ಟ್ ಮಾಡ್ಕೊಳ್ತಿದ್ದ ಚೆಕ್ ಕ್ಯಾಶ್ ಆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.