ಕೆ.ಆರ್.ಪುರ: ಲೋಕಸಭಾ ಚುನಾವಣೆಗೆ ಒಂದು ದಿನ ಮಾತ್ರ ಬಾಕಿ ಇದ್ದು,ಇಂದು ಬಹಿರಂಗ ಪ್ರಚಾರಕ್ಕೆ ಕೊನೆದಿನವಾಗಿದ್ದರಿಂದ ಕೆಆರ್ ಪುರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪ್ರೋ.ರಾಜೀವ್ ಗೌಡ ಭರ್ಜರಿ ಪ್ರಚಾರ ಮಾಡಿ ಕಾಂಗ್ರೆಸ್ ಅನ್ನ ಗೆಲ್ಲಿಸುವಂತೆ ಮನವಿ ಮಾಡಿದರು.
Breaking News: ಬಿಜೆಪಿ ಅಧಿಕೃತ ಎಕ್ಸ್ ಖಾತೆ ಮೇಲೆ ಪ್ರಕರಣ ದಾಖಲು..!
ಕೆಆರ್ ಪುರ,ಬಸವನಪುರ,ರಾಮಮೂರ್ತಿನಗರ ವಾರ್ಡ್ ಗಳಲ್ಲಿ ರ್ಯಾಲಿ ಮಾಡುವ ಮೂಲಕ ಮತಯಾಚನೆ ಮಾಡಿದರು.ಪ್ರಚಾರದಲ್ಲಿ ನೂರಾರು ಯುವಕರು ಬೈಕ್ ರ್ಯಾಲಿ ಮಾಡಿ ಪ್ರೋ.ರಾಜೀವ್ ಗೌಡರ ಪರ ಮತಯಾಚನೆ ಮಾಡಿದರು.
ರಾಮಮೂರ್ತಿನಗರ ವಾರ್ಡ್ ನಲ್ಲಿ ಕಲ್ಕೆರೆ ಮುಖ್ಯ ರಸ್ತೆಯ ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದ ಬೈಕ್ ರ್ಯಾಲಿಯನ್ನು ರಾಮಮೂರ್ತಿನಗರ ವಾರ್ಡ್ ನ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಸುಬ್ಬು ಮುನ್ನಡೆಸಿ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವಿ ಮಾಡಿದರು.
ನಂತರ ಬಸವನಪುರ ವಾರ್ಡ್ ನಲ್ಲಿ ಸ್ವತಂತ್ರ ನಗರದಲ್ಲಿ ಮಾಜಿ ನಗರಸಭ ಸದಸ್ಯ ಬಾಲಕೃಷ್ಣ ಅವರ ನೇತ್ರತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರಿಗೆ ಭವ್ಯ ಸ್ವಾಗತ ಕೋರಿದರು.ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಲೀಡ್ ಬರುವಂತೆ ನಾವೆಲ್ಲರೂ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿಕೆ ಮೋಹನ್ ಬಾಬು, ಡಿಕೆ ರಮೇಶ್,
,ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ಬಾಲಕೃಷ್ಣ, ಚನ್ನಕೇಶವ,ಮೇಡಹಳ್ಳಿ ರಾಕಿ,ಕಲ್ಕೆರೆ ಶ್ರೀನಿವಾಸ್,
ಭೂನ್ಯಾಯಮಂಡಳಿ ಸದಸ್ಯ ಸುನೀಲ್ ಕುಮಾರ್ ಮತ್ತು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಿದ್ದರು.