ಜೈಪುರ: ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿದ ನಂತರ ನಾಯಕ ಸಂಜು ಸ್ಯಾಮ್ಸನ್, ಜೈಸ್ವಾಲ್ ಅತ್ಯಂತ ಕೌಶಲ್ಯಭರಿತ ಆಟಗಾರನಾಗಿದ್ದು ಆತನ ಬ್ಯಾಟಿಂಗ್ ಸುಧಾರಣೆಗೆ ಯಾರ ಸಲಹೆಯೂ ಬೇಕಿಲ್ಲ ಎಂದು ಹೇಳಿದ್ದಾರೆ. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯದಲ್ಲಿ 60 ಎಸೆತಗಳಲ್ಲಿ ಯುವ ಎಡಗೈ ಆಟಗಾರ 104* ರನ್ ಸಿಡಿಸಿ ಆರ್ ಆರ್ ಗೆ 9 ವಿಕೆಟ್ ಗಳ ಗೆಲುವಿಗೆ ಬಲ ತುಂಬಿದ್ದರು.
ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ ಆಯೋಜನೆಗೊಂಡಿರುವ ಟಿ20-ಐ ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವ ಸಮಯದಲ್ಲೇ ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕ ಸಿಡಿಸಿ ಬಿಸಿಸಿಐ ಆಯ್ಕೆ ಮಂಡಳಿಯ ಗಮನ ಸೆಳೆದಿದ್ದಾರೆ. ಕಳೆದ 7 ಪಂದ್ಯಗಳಿಂದ 121ರನ್ ಗಳಿಸಿದ್ದ ಜೈಸ್ವಾಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಜೈಸ್ವಾಲ್ ಆತ್ಮವಿಶ್ವಾಸದ ಆಟಗಾರನಾಗಿದ್ದು ಫಾರ್ಮ್ ಕಂಡುಕೊಳ್ಳಲು ಒಂದು ಪಂದ್ಯ ಸಾಕು ಎಂಬ ಭರವಸೆ ಹೊಂದಿದ್ದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.
DRUMSTICK LEAVES: ನುಗ್ಗೆಕಾಯಿ ಮಾತ್ರ ಅಲ್ಲ, ನುಗ್ಗೆ ಸೊಪ್ಪಲ್ಲೂ ಅಡಗಿದೆ ಆರೋಗ್ಯದ ಗುಟ್ಟು!
ಪಂದ್ಯ ಮುಗಿದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್ ಆರ್ ನಾಯಕ ಸಂಜು ಸ್ಯಾಮ್ಸನ್, “ಯಶಸ್ವಿ ಜೈಸ್ವಾಲ್ ಯಾರಿಂದಲಾದರೂ ಸಲಹೆ ಪಡೆಯಬೇಕೆಂದು ನನಗೆ ಅನಿಸಲಿಲ್ಲ. ಆತ ನಿಜಕ್ಕೂ ಸಾಕಷ್ಟು ಆತ್ಮವಿಶ್ವಾಸ ಹೊಂದಿರುವ ಆಟಗಾರನಾಗಿದ್ದು, ಫಾರ್ಮ್ ಕಂಡುಕೊಳ್ಳಲು ಒಂದು ಪಂದ್ಯ ಸಾಕು” ಎಂದು ಆರ್ ಆರ್ ನಾಯಕ ಹೇಳಿದ್ದಾರೆ.