ವೆಂಕಟೇಶ್ ಅಯ್ಯರ್ ಅವರು ಆರ್ಸಿಬಿ ಬೌಲಿಂಗ್ ದಾಳಿಯನ್ನು ಗೇಲಿ ಮಾಡಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಆರ್ಸಿಬಿ, ಈ ಬಾರಿ ಲೀಗ್ ಹಂತದಲ್ಲೇ ತನ್ನ ಪಯಣ ಮುಗಿಸಿದೆ. ಪ್ರತಿ ಸೀಸನ್ನಂತೆ ಈ ಸೀಸನ್ನಲ್ಲೂ ಆರ್ಸಿಬಿ ತನ್ನ ದುರ್ಬಲ ಬೌಲಿಂಗ್ನಿಂದಾಗಿ ಲೀಗ್ನಿಂದ ಹೊರಬೀಳಬೇಕಾಯಿತು. ಇದೀಗ ಹರಾಜಿನಲ್ಲಿ ಉತ್ತಮ ವೇಗಿಗಳನ್ನು ಖರೀದಿಸಲು ಮುಂದಾಗದ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಇದೆಲ್ಲದರ ನಡುವೆ ಕೆಕೆಆರ್ ತಂಡದ ಆಟಗಾರ ವೆಂಕಟೇಶ್ ಅಯ್ಯರ್, ಆರ್ಸಿಬಿ ಬೌಲಿಂಗ್ ದಾಳಿಯ ಬಗ್ಗೆ ಲೇವಡಿ ಮಾಡಿದ್ದಾರೆ.
ಹೊಟ್ಟೆಯಲ್ಲಿ ಹುಳು ಸಮಸ್ಯೆಯೇ!?, ಹಾಗಿದ್ರೆ ಈ ಬೀಜ ಬೆರೆಸಿದ ನೀರು ಕುಡಿಯೋದು ಬೆಸ್ಟ್!
36 ನೇ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಕೆಕೆಆರ್ ಒಂದು ರನ್ನಿಂದ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಆರ್ಸಿಬಿಯ ಪ್ಲೇಆಫ್ನ ಕನಸು ಬಹುತೇಕ ಭಗ್ನವಾದಂತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್ನ ಸ್ಫೋಟಕ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ಆರ್ಸಿಬಿಯ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ವೆಂಕಟೇಶ್ ಅಯ್ಯರ್ ಆರ್ಸಿಬಿ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿರುವಂತೆ ವೆಂಕಟೇಶ್ ಅಯ್ಯರ್ ಮೊದಲು, ‘ಆರ್ಸಿಬಿ ಇಡೀ ಪಂದ್ಯಾವಳಿಯಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರನ್ನು ಎದುರಿಸುವುದು ಸಾಕಷ್ಟು ಸವಾಲಿನದ್ದಾಗಿದೆ ಎಂದಿದ್ದಾರೆ’. ಆದರೆ, ಈ ಹೇಳಿಕೆ ನೀಡಿದ ಕೆಲವೇ ಸೆಕೆಂಡ್ಗಳ ನಂತರ ಅಯ್ಯರ್ ನಗಲು ಆರಂಭಿಸಿದ್ದಾರೆ.
ಇದೀಗ ಅಯ್ಯರ್ ಅವರ ವರ್ತನೆಯನ್ನು ನೋಡಿದ ನೆಟ್ಟಿಗರು, ಅಯ್ಯರ್ ಬೇಕಂತಲೇ ಆರ್ಸಿಬಿ ಬೌಲಿಂಗ್ ವಿಭಾಗವನ್ನು ಲೇವಡಿ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಆರ್ಸಿಬಿ ಅಭಿಮಾನಿಗಳು ಅಯ್ಯರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.