ನಿನ್ನೆ ನಡೆದ IPL ಪಂದ್ಯದಲ್ಲಿ ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ ತಂಡವು ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
Bengaluru: ಬೆಂಗಳೂರು ಸೇರಿ ಇಂದು ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ..!
ರಜತ್ ಪಾಟಿದಾರ್, ವಿರಾಟ್ ಕೊಹ್ಲಿ ಮತ್ತು ಕ್ಯಾಮರಾನ್ ಗ್ರೀನ್ ಭರ್ಜರಿ ರನ್ಮಳೆ ಹರಿಸುವುದರೊಂದಿಗೆ ಪಂಜಾಬ್ ಕಿಂಗ್ಸ್ ಎದುರಿನ ಧರ್ಮಶಾಲಾ ಪಂದ್ಯದಲ್ಲಿ ಆರ್ಸಿಬಿ ಬೃಹತ್ ಮೊತ್ತ ದಾಖಲಿಸಿ 60 ರನ್ ಗಳ ಅಮೋಘ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಆರ್ ಸಿಬಿ 7 ವಿಕೆಟಿಗೆ 241 ರನ್ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಪಂಜಾಬ್ 17 ಓವರ್ ಗಳಲ್ಲಿ 181 ರನ್ ಗಳಿಗೆ ಆಲೌಟಾಯಿತು. ಇದು ಅರ್ ಸಿಬಿ 12 ನೇ ಪಂದ್ಯದಲ್ಲಿ ಸಾಧಿಸಿದ 5 ನೇ ಜಯವಾಗಿದೆ. ಪಂಜಾಬ್ 12 ನೇ ಪಂದ್ಯದಲ್ಲಿ 8 ನೇ ಸೋಲು ಅನುಭವಿಸಿತು.
ಬೆಂಗಳೂರಿನ ಬೌಲಿಂಗ್ ನಲ್ಲಿ ಸಿರಾಜ್ 3 ವಿಕೆಟ್ ಕಿತ್ತರು. ಸ್ವಪ್ನಿಲ್ ಸಿಂಗ್, ಫರ್ಗ್ಯೂಸನ್ ಮತ್ತು ಕರ್ಣ್ ಶರ್ಮ ತಲಾ 2 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರ್ ಸಿಬಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಚೆನ್ನೈ ಮತ್ತು ಡೆಲ್ಲಿ ವಿರುದ್ಧ ಜಯ ಸಾಧಿಸುವುದು ಅನಿವಾರ್ಯವಾಗಿದ್ದು , ಆ ಬಳಿಕವೂ ಇತರ ತಂಡಗಳ ಫಲಿತಾಂಶವೂ ನಿರ್ಣಾಯಕವಾಗಲಿದೆ. ಪಂಜಾಬ್ ವಿರುದ್ಧ ಆರ್ಸಿಬಿ ಪೇರಿಸಿದ ಬೃಹತ್ ಮೊತ್ತ. ಹಾಗೆಯೇ ಆರ್ಸಿಬಿ ತವರಿನಾಚೆ ಬಾರಿಸಿದ ಅತ್ಯಧಿಕ ಮೊತ್ತವೂ ಹೌದು. ಕೊಹ್ಲಿ 92 ರನ್ ಬಾರಿಸಿ ಶತಕದಿಂದ ಸ್ವಲ್ಪವೇ ದೂರ ಉಳಿದರೆ, ಪಾಟಿದಾರ್ 55, ಗ್ರೀನ್ 46 ರನ್ ಬಾರಿಸಿ ಮೆರೆದರು