ಮೈಸೂರು: ನಾನು ರಾಜಕೀಯಕ್ಕೆ ದುಡ್ಡು ಮಾಡೋಕೆ ಬಂದಿಲ್ಲ. ರಿಯಲ್ ಎಸ್ಟೇಟ್ ಮಾಡೋಕೆ ಬಂದಿಲ್ಲ, ಮೂಡಾ ಸೈಟ್ ಹೊಡೆಯೋಕೆ ಬಂದಿಲ್ಲ, ಹೂಡಾದಲ್ಲೂ ಸೈಟ್ ಹೊಡೆಯೋಕೂ ಬಂದಿಲ್ಲ. ಸೈದ್ಧಾಂತಿಕ ವಿಚಾರವಾಗಿ, ಸಂಘದ ಹಿನ್ನಲೆಯಿಂದ ಬಂದವನು. ನಮ್ಮ ತಂದೆ ಜನಸಂಘದವರು. ನನಗೆ ಬೇರೆ ಯಾವುದೂ ಗೊತ್ತಿಲ್ಲ.
ಸಿದ್ಧಾಂತ, ರಾಷ್ಟ್ರೀಯತೆ ಮಾತ್ರ ಗೊತ್ತು. ಅದನ್ನ ಪ್ರತಿಪಾದಿಸಲು ನನಗೆ ಯಾವ ಹುದ್ದೆಯೂ ಬೇಕಿಲ್ಲ. ಎಲ್ಲೇ ಹೋದರೂ ಜನ ಕರೆದು ಗೌರವ ಕೊಡುತ್ತಾರೆ. 10 ವರ್ಷ ಸಂಸದನಾಗಿ ಕೆಲಸ ಮಾಡಿದೀನಿ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಮೈಸೂರು ನನ್ನ ಕರ್ಮ ಭೂಮಿ. ಜನರ ಸೇವೆ ಮಾಡಲು ನಾನು ಸದಾ ಸಿದ್ಧವಾಗಿದ್ದೇನೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
Aadhaar Card: ಗಮನಿಸಿ.. ಉಚಿತವಾಗಿ ಆಧಾರ್ ಅಪ್ ಡೇಟ್ ಈ ದಿನಾಂಕದೊಳಗೆ ಮಾಡಿಸಿ: ಇಲ್ಲಾಂದ್ರೆ ಶುಲ್ಕ ಗ್ಯಾರೆಂಟಿ!
ಸ್ವಪಕ್ಷೀಯರ ಮೇಲೆ ನಾನು ಯಾವತ್ತೂ ಅಸಮಾಧಾನ ಹೊರ ಹಾಕಿಲ್ಲ. ನಾನು ಪತ್ರಕರ್ತನಾಗಿದ್ದಾಗಲು ಇದ್ದದ್ದನ್ನ ಇದ್ದ ಹಾಗೆ ಹೇಳುತ್ತಿದ್ದೆ. ರಾಜಕಾರಣಿ ಅಂದ ಮಾತ್ರಕ್ಕೆ ಅಧಿಕಾರಕ್ಕಾಗಿ ಸತ್ಯ ಮಾತನಾಡದೇ ನಾನು ಇರುವುದಿಲ್ಲ. ನಾನು ಯಾರನ್ನೂ ಓಲೈಸುವ ರಾಜಕಾರಣಕ್ಕೂ ಮಾಡಿಲ್ಲ. ಯಾರಿಗೋ ಬೇಸರ ಆಗುತ್ತೆ ಅಂತ ಹೇಳಬೇಕಾಗಿದ್ದನ್ನು ಹೇಳದೇ ಬಿಟ್ಟವನಲ್ಲ. ರಾಜಕೀಯ ಅಧಿಕಾರದ ಗದ್ದುಗೆ ಏರಲು ಬಂದಿಲ್ಲ. ಜನರ ಸೇವೆ ಮಾಡಲು ಬಂದವನು. ನನ್ನೊಳಗಿನ ಪತ್ರಕರ್ತ ನಾನು ಇರುವವರೆಗೂ ಬದುಕಿರ್ತಾನೆ’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.