ಕೊಪ್ಪಳ: ನಾನು ಹುಟ್ಟಿ ಬೆಳೆದಾಗಿನಿಂದ ಇಂತಹ ಭೀಕರ ಬರಗಾಲ ನೋಡಿರಲಿಲ್ಲ ಎಂದು ಜಿಲ್ಲೆಯ ಕುಷ್ಟಗಿಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದರು. ‘ಈ ಸರ್ಕಾರದ ಒಬ್ಪ ಮಂತ್ರಿಯೂ ರೈತರ ಗೋಳು ಕೇಳಿಲ್ಲ, ಎಲ್ಲಿಯೂ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಎಲ್ಲಾ ಕೆಲಸ ನಿಲ್ಲಿಸಬೇಕು. ಮೊದಲು ರೈತರ ಬಳಿ ಹೋಗಿ ಅವರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಲಿ. ನಾನು ಅಮಿತ್ ಶಾ ಮತ್ತು ನಡ್ಡಾರನ್ನು ಭೇಟಿ ಮಾಡಿದ್ದೇನೆ. ರಾಜ್ಯಕ್ಕೆ ಪರಿಹಾರ ನೀಡಬೇಕು ಎಂದು ಕೇಳಿದ್ದೆೇನೆ ಎಂದರು.