ಬಳ್ಳಾರಿ:- ಕೊನೆ ಚುನಾವಣೆ ಎಂಬ ರಾಮುಲು ಹೇಳಿಕೆ ವಿಚಾರವಾಗಿ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ಒಳ್ಳೆ ಮನುಷ್ಯ ಆದ್ರೆ ರಾಂಗ್ ಪಕ್ಷದಲ್ಲಿದಾರೆ, ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಅನಾನುಕೂಲ ಆಗುವ ಪಕ್ಷದಲ್ಲಿದಾರೆ. ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಕೌಂಟ್ಡೌನ್: ಮತದಾನದ ಜಾಗೃತಿ ಮೂಡಿಸಿದ ಹೋಟೆಲ್ ಅಸೋಸಿಯೇಷನ್!
ಇನ್ನೂ ಚಿನ್ನದ ಬೆಲೆ ಗಗನಕ್ಕೇರಿದೆ, ನಿರುದ್ಯೋಗ ಸಮಸ್ಯೆ ಇದೆ. ಇದರ ಬಗ್ಗೆ ಮೋದಿ ಮಾತಾಡಲ್ಲ, ಯಾಕೆ ಮಾತಾಡ್ತಿಲ್ಲ. ಮೋದಿ ಜನರ ಸಮಸ್ಯೆ ಕೇಳ್ತಿಲ್ಲ ಬರಿ ಮಾತಾಡ್ತಾರೆ. ಮೋದಿ ಮಾಡಿರುವ ಕೆಲಸ ಸೊನ್ನೆ ಇದೆ. ಗೋಮಾಂಸ ರಫ್ತುನಲ್ಲಿ ಎರಡನೇ ಸ್ಥಾನದಲ್ಲಿ ಭಾರತ ಇದೆ. ಇದನ್ನ ಯಾಕೆ ಮೋದಿ ಹೇಳಲ್ಲ. ಮೋದಿ ಇದನ್ನೆಲ್ಲ ಹೇಳಿದರೆ ವೋಟ್ ಸಿಗಲ್ಲ ಎಂದರು.
ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿ, ಅವರಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಅವರ ಆಶೀರ್ವಾದ ತಗೊಂಡೇ ನಾವು ಚುನಾವಣೆಗೆ ಇಳಿದಿದೀವಿ. ರಾಜಕೀಯ ಅನ್ನೋದೇ ಒಂದು ಸೇವೆ. ಆ ಸೇವೆಯನ್ನ ಮಾಡಲಿಕ್ಕೆ ಶ್ರೀಗಳು ಬಂದಿದಾರೆ ನಾವು ಅವರನ್ನ ವೆಲ್ ಕಮ್ ಮಾಡ್ತೀವ ಎಂದರು.
ಸಂವಿಧಾನ ಚೇಂಜ್ ಮಾಡ್ತೀವಿ ಅನ್ನೋದರ ಕುರಿತು ರಾಮುಲು ಯಾಕೆ ಮಾತಾಡಲ್ಲ. ಬಿಜೆಪಿಯವರು ವಾಲ್ಮೀಕಿಯನ್ನು ಯಾಕೆ ದೂರ ಇಟ್ರು ,ಸೀತೆ ಯಾಕೆ ಬೇಡ….? ಲಕ್ಷ್ಮಣ ಬೇಡ್ವಾ..? ರಾಮನ ಹೆಸರಲ್ಲಿ ಮತ ಕೇಳೋರು ವಾಲ್ಮೀಕಿಯನ್ನ ಯಾಕೆ ದೂರ ಇಟ್ರು……!? ಎಂದು ಪ್ರಶ್ನೆ ಮಾಡಿದರು.
ರಾಮರಹೀಮ ಮುಸಲ್ಮಾನ ಬಿಟ್ರೆ ಬೇರೆ ಮಾತಾಡಲ್ಲ, ಅವರಿಗೆ ಈ ವಿಷಯ ಬಿಟ್ಟು ಬೇರೆ ಗೊತ್ತಿಲ್ಲ, ಮನೆಗಳು ಕಟ್ಟಿದಿವಿ ಅಂತ ಸುಳ್ಳು ಹೇಳ್ತಾರೆ, ನಿರ್ಮಲಾ ಸೀತಾರಾಮ್ 5 ಕೋಟಿ ಮನೆಕಟ್ಟೀವಿ ಅಂತಾರೆ. ಆದರೆ ಮೋದಿ ಮರು ದಿನಾನೇ 4 ಕೋಟಿ ಮನೆ ಅಂತಾರೆ. ಸುಳ್ಳು ಹೇಳೋದು ಬಿಜೆಪಿಯವರಿಗೆ ವಹಿವಾಟಾಗಿದೆ ಎಂದು ಬಳ್ಳಾರಿಯ ಚೋರನೂರಿನಲ್ಲಿ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.