ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್ ಕಡೆಗೆ ಮುನ್ನುಗ್ಗುತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಇದೀಗ ಕಳೆದ 5 ಪಂದ್ಯಗಳಲ್ಲಿ ಎದುರಾದ 3 ಸೋಲಿನಿಂದ ಕಂಗಾಲಾಗಿದೆ. ಟೂರ್ನಿಯುದ್ದಕ್ಕೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಗರ್ಜಿಸಿರುವ ಪ್ಯಾಟ್ ಕಮಿನ್ಸ್ ಸಾರಥ್ಯದ ಎಸ್ಆರ್ಎಚ್ ತಂಡ ಇದೀಗ ಬ್ಯಾಟಿಂಗ್ ವೈಫಲ್ಯದ ಕಾರಣವೇ ಸತತ ಸೋಲಿನ ಆಘಾತಕ್ಕೊಳಗಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಕಳಪೆ ಪ್ರದರ್ಶನದ ಬಳಿಕ ವ್ಯಾಪಕ ಟೀಕೆ ಎದುರಿಸುವಂತ್ತಾಗಿದೆ.
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಜನಪ್ರಿಯ ಕ್ರಿಕೆಟ್ ವಿಶ್ಲೇಷಕ ಹರ್ಭಜನ್ ಸಿಂಗ್, ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಬ್ಯಾಟರ್ಗಳ ಕಳಪೆ ಪ್ರದರ್ಶನದ ವಿರುದ್ಧ ಗುಡುಗಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ (ಮೇ 6) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ರೈಸರ್ಸ್ 20 ಓವರ್ಗಳಲ್ಲಿ 173/8 ರನ್ಗಳ ಸಾಧಾರಣ ಮೊತ್ತ ಗಳಿಸಿತು. ತಂಡದ ಸ್ಟಾರ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ (11) ಮತ್ತು ಹೆನ್ರಿಚ್ ಕ್ಲಾಸೆನ್ (2) ಅನಗತ್ಯ ರೀತಿಯಲ್ಲಿ ವಿಕೆಟ್ ಕೈಚೆಲ್ಲಿದ್ದು, ಎಸ್ಆರ್ಎಚ್ ಬ್ಯಾಟಿಂಗ್ ವೈಫಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಯಿತು.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಸಂದರ್ಭಕ್ಕೆ ತಕ್ಕ ಬ್ಯಾಟಿಂಗ್ ಮಾಡದ ದಕ್ಷಿಣ ಆಫ್ರಿಕಾದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. “ಹೆನ್ರಿಚ್ ಕ್ಲಾಸೆನ್ಗೆ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಲು ಬರುವುದಿಲ್ಲ. ಬೌಲರ್ಗಳ ವಿರುದ್ಧ ಸ್ಪೋಟಕ ಬ್ಯಾಟಿಂಗ್ ನಡೆಸುವುದೊಂದೇ ಕ್ಲಾಸೆನ್ಗೆ ಗೊತ್ತಿರುವುದು. ತಂಡಕ್ಕೆ ಅಗತ್ಯ ಏನಿದೆ ಎಂಬುದರ ಬಗ್ಗೆ ಆತ ತಲೆ ಕೆಡಿಸಿಕೊಳ್ಳುವುದಿಲ್ಲ.
ಒಂದೇ ಮನಸ್ಥಿತಿಯಲ್ಲಿ ಬ್ಯಾಟ್ ಮಾಡಲು ಬರುವ ಆತ ಸಾಮಾನ್ಯವಾಗಿ ತಮ್ಮ ವಿಕೆಟ್ ಕೈಚೆಲ್ಲುತ್ತಾರೆ. ಒಂದೇ ಮಾದರಿ ಬ್ಯಾಟ್ ಮಾಡಿದರೆ ತಂಡವನ್ನು ಅಪಾಯಕ್ಕೆ ನೂಕಿದಂತೆ. ಒಮದುವೇಳೆ ಕ್ಲಾಸೆನ್ ಕೊನೆವರೆಗೂ ಬ್ಯಾಟ್ ಮಾಡಿದ್ದರೆ ಎಸ್ಆರ್ಎಚ್ ತಂಡ 190ಕ್ಕೂ ಹೆಚ್ಚು ರನ್ ಗಳಿಸಿರುತ್ತಿತ್ತು,” ಎಂದು ಹರ್ಭಜನ್ ಸಿಂಗ್ ಎಸ್ಆರ್ಎಚ್ ಸ್ಟಾರ್ ಬ್ಯಾಟರ್ಗೆ ಬ್ಯಾಟಿಂಗ್ ಪಾಠ ಮಾಡಿದ್ದಾರೆ.