ಬೆಂಗಳೂರು:– ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣರಿಗೂ ಕಾನೂನು ಸಂಕಷ್ಟ ಶುರುವಾಗಿದೆ.
ಎಚ್ಚರ: ಹೃದಯಕ್ಕೆ ಹಾನಿ ಮಾಡುತ್ತೆ ಈ ಪಾನೀಯಗಳು…!
ಪತಿ ಮತ್ತು ಪುತ್ರನ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಹೆಸರೂ ಉಲ್ಲೇಖವಾಗಿದ್ದು ಅವರಿಗೂ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲೂ ಭವಾನಿ ರೇವಣ್ಣ ಅವರ ಹೆಸರು ಕೇಳಿಬಂದಿದೆ.
ಈ ಎರಡು ಪ್ರಕರಣದಲ್ಲಿ ಕಿಡ್ನಾಪ್ ಕೇಸ್ ಭವಾನಿ ರೇವಣ್ಣ ಅವರಿಗೆ ಹೆಚ್ಚು ಮುಳುವಾಗುವ ಸಾಧ್ಯತೆ ಇದೆ. ಏಕೆಂದರೆ ಕಿಡ್ನಾಪ್ ಕೇಸ್ನಲ್ಲಿ “ಭವಾನಿ ರೇವಣ್ಣ ಅವರು ನಿಮ್ಮನ್ನು ಕರೆದುಕೊಂಡು ಬಾ ಅಂತ ಹೇಳಿದ್ದಾರೆ” ಎಂದು ಹೇಳಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ. ಹೀಗಾಗಿ ಕಿಡ್ನಾಪ್ ಕೇಸ್ನಲ್ಲಿ ಭವಾನಿ ರೇವಣ್ಣಗೆ ಕಾನೂನು ಕಂಟಕ ಎದುರಾಗು ಸಾಧ್ಯತೆ ಇದೆ.
ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಭವಾನಿ ರೇವಣ್ಣಗೆ ನೊಟೀಸ್ ನೀಡಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಏನಾದರೂ ಭವಾನಿ ವಿರುದ್ಧ ಸಾಕ್ಷಾಧಾರಗಳು ಸಿಕ್ಕರೇ ಆಗ ಅವರು ಕೂಡ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.