ಬಳ್ಳಾರಿ: ಕಾನೂನು ಎಲ್ಲರಿಗೂ ಒಂದೇ, SIT ತನಿಖೆ ನಡೆಯುತ್ತಿದೆ, ದೇವೆಗೌಡರು, ಕುಮಾರಸ್ವಾಮಿಯವರು ಹೆಣ್ಣು ಮಕ್ಕಳಿಗೆ ಗೌರವ ಕೊಡ್ತಾರೆ ಎಂದು ಹಗರಿಬೊಮ್ಮನ ಹಳ್ಳಿ JDS ಶಾಸಕ ನೇಮಿರಾಜ್ ನಾಯ್ಕ್ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ HD ರೇವಣ್ಣ ಆರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,
ಮೋದಿಯವರು ಬಿಟ್ಟರೇ, ದೇಶದಲ್ಲಿ ದೇವೆಗೌಡರು ಅತೀ ಹೆಚ್ಚು ಮಹಿಳೆಯರಿಗೆ ಗೌರವ ಕೊಡ್ತಾರೆ. ಈ ವಿಚಾರದಲ್ಲಿ ಈಗಾಗಲೇ ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣನವರನ್ನು ಉಚ್ಚಾಟನೆ ಮಾಡಿದ್ದಾರೆ, ಇದರ ಹಿಂದೆ ಷಡ್ಯಂತ್ರ ಇದೆನಾ ಅಥವಾ ಪೂರ್ವನಿಯೋಜಿತನಾ ಅಂತ SIT ತನಿಖೆಯ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.