ಬೆಂಗಳೂರು:- ನಿವೃತ್ತ ಐಪಿಎಸ್ ಅಧಿಕಾರಿಗಳ ಮನೆಗೆಲಸದ ಸಿಬ್ಬಂದಿಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ನಿವೃತ್ತ ಡಿಜಿಪಿಗಳಾದ ರೂಪಕ್ ಕುಮಾರ್ ದತ್ತ, ಕಿಶೋರ್ ಚಂದ್ರ, ನಿವೃತ್ತ ಎಡಿಜಿಪಿಗಳಾದ ಸುನೀಲ್ ಅಗರ್ವಾಲ್, ಭಾಸ್ಕರ್ ರಾವ್ ಮನೆಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಆರ್ಡರ್ಲಿಗಳಾಗಿದ್ದಾರೆ.
ನಿವೃತ್ತ ಅಧಿಕಾರಿಗಳ ಮನೆಯಲ್ಲಿರುವ ಇವರ ಸೇವೆಯನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕೆಎಸ್ಆರ್ಪಿ ಎಡಿಜಿಪಿಗೆ ಮುಂದಿನ ಕ್ರಮಕ್ಕೆ ಡಿಜಿಪಿ ಸೂಚಿಸಿದ್ದಾರೆ.
ಸೇವೆಯಿಂದ ನಿವೃತ್ತಿ ಹೊಂದಿದ 15 ದಿನಗೊಳಗೊಳಗೆ ತಮ್ಮಆರ್ಡರ್ಲಿಗಳನ್ನು ಇಲಾಖೆಗೆ ಮರಳಿ ಕಳುಹಿಸಬೇಕು. ಕೆಲವರು ನಿವೃತ್ತಿ ಬಳಿಕ ಸೇವೆ ಮುಂದುವರಿಸಿದ್ದಾರೆ. ವೈಯಕ್ತಿಕ ಕಾರಣ ನಿಮಿತ್ತ ಸ್ವಯಂನಿವೃತ್ತಿ ಹೊಂದಿದ ಬಳಿಕವು ಆರ್ಡರ್ಲಿ ಸೇವೆಯನ್ನು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಡೆದಿರುವುದು ಟೀಕೆಗೆ ಗುರಿಯಾಗಿದೆ.