ನಂಜನಗೂಡು: ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆ ಕಾಡುಪ್ರಾಣಿಗಳ ದಾಳಿಗೆ ನಷ್ಟ ಉಂಟಾಗಿದ್ದು , ರೈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದ ಸ್ವಾಮಿ ಎಂಬ ರೈತ ತಮ್ಮ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಇದಾಗಿದ್ದು, ನಾಲ್ಕು ಕಾಡಾನೆಗಳು ಜಮೀನಿಗೆ ನುಗ್ಗಿ ದಾಂಧಲೆ ನಡೆಸಿವೆ. ಬೇಸಿಗೆಯ ತೀವ್ರ ಬರಗಾಲದಲ್ಲಿ ಪಂಪ್ಸೆಟ್ನಲ್ಲಿ ಬೆಳೆ ಬೆಳೆಯುವುದು ಅಷ್ಟು ಸುಲಭವಾದ ಕೆಲಸವಲ್ಲ.
BHEL Recruitment: ತಿಂಗಳಿಗೆ ₹ 95 ಸಾವಿರ ಸಂಬಳ..! BHELನಲ್ಲಿ ಬಂಪರ್ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಬಾಳೆಯನ್ನು ಬೆಳೆದಿದ್ದೆವು. ಆದರೆ, ಕಾಡಾನೆಗಳ ಹಾವಳಿಯಿಂದ ಬೆಳೆ ಕೈಗೆ ಸಿಗುತ್ತಿಲ್ಲ. ನಾಲ್ಕು ಸಾವಿರಕ್ಕೂ ಹೆಚ್ಚು ಏಲಕ್ಕಿ ಬಾಳೆಯನ್ನು ತುಳಿದು ನಾಶಮಾಡಿವೆ. ಅದಲ್ಲದೆ ಸೋಲಾರ್ ತಂತಿಯನ್ನು ಕಿತ್ತು ಬಿಸಾಡಿ ಹೋಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ನಾವು ಬದುಕುವುದಾದರೂ ಹೇಗೆ ಎಂದು ರೈತ ಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ. ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅವರೇ ರೈತರ ಬವಣೆ ನೋಡಿ ಎಂದು ಅಂಗಲಾಚಿದ್ದಾನೆ.