ಕೆಆರ್ ಪುರ :- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮುಂಜಾನೆಯಿಂದಲೇ ಮತದಾನ ಮಾಡಲು ಮತದಾರರು ಸರದಿ ಸಾಲಲ್ಲಿ ನಿಂತಿದ್ದಾರೆ.
MP Election: ಮತದಾನದ ಹಕ್ಕು ಚಲಾಯಿಸಿದ ಸಿದ್ದಗಂಗಾಶ್ರೀಗಳು!
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಮತದಾನ ಚುರುಕುಗೊಂಡಿದ್ದು, ಸ್ವಾಭಿಮಾನಿ ಪಕ್ಷದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಕೆ.ಮಂಜುನಾಥ್ ಮತ ಚಲಾವಣೆ ಮಾಡಲಾಗಿದೆ. ವರ್ತೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾವಣೆ ಮಾಡಿದ ಸ್ವಾಭಿಮಾನಿ ಪಕ್ಷದ ಅಭ್ಯರ್ಥಿ ಎನ್ನಲಾಗಿದ್ದು, ಬೂತ್ ಸಂಖ್ಯೆ 411ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ದೇಶದ ದೊಡ್ಡ ಹಬ್ಬವಾದ ಈ ಚುನಾವಣೆಗೆ ನಿಮ್ಮ ಮತದಾನವೇ ಪ್ರಮುಖ ಎಲ್ಲರೂ ಬಂದು ಮತ ನೀಡಿ ಎಂದು ಕರೆ ನೀಡಿದ್ದಾರೆ.