ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುತ್ತ ಎನ್ನುವ ಪ್ರಶ್ನೆಗೆ ಕೋಲಾರದಲ್ಲಿ ಹಾಲಿ ಲೋಕಸಭಾ ಸದಸ್ಯರಾದ ಎಸ್ ಮುನಿಸ್ವಾಮಿ ಪ್ರತಿಕ್ರಿಯೆ. ಇದುವರೆಗೂ ಯಾವ ಪಕ್ಷಕ್ಕೆ ಟಿಕೆಟ್ ಅನ್ನೋದು ತೀರ್ಮಾನವಾಗಿಲ್ಲ ಕೇಂದ್ರದ ದೊಡ್ಡ ದೊಡ್ಡ ಸಚಿವರ ಕ್ಷೇತ್ರವೇ ಇನ್ನು ಫೈನಲ್ ಆಗಿಲ್ಲ. ಕೋಲಾರ, ಹಾಸನ,ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲು ಅನ್ನೋದು ಊಹಾಪೋಹಗಳು ಅಷ್ಟೇ. ನಮ್ಮ ವರಿಷ್ಠರು ಈಗಾಗಲೇ ಮೂರ್ನಾಕು ಬಾರಿ ಸರ್ವೇಗಳನ್ನು ಮಾಡಿಸಿದ್ದಾರೆ ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವ್ರು ಹೇಳಿದ್ರು.
ರಾಜ್ಯ ಸರ್ಕಾರದ ವಿರುದ್ದ ಕೋಲಾರ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನು ಬಿಬಿಎಂಪಿ ಸದಸ್ಯ ಮಾಡಿ,ಸಂಸದರನ್ನಾಗಿಯೂ ಮಾಡಿದ್ದಾರೆ. ಮೂರು ಬಾರಿ ಸರ್ವೇ ಮಾಡಿಸಿರುವ ವರದಿ ವರಿಷ್ಠರು ತಿಳಿದುಕೊಂಡಿದ್ದಾರೆ. 1989 ರಿಂದಲೂ ಕೋಲಾರದಲ್ಲಿ ಯಾವ ರೀತಿಯ ಫಲಿತಾಂಶ ಬಂದಿತ್ತು. ಈಗ ಏನೂ ಅನ್ನೋದು ವರಿಷ್ಠರು ತೀರ್ಮಾನ ಮಾಡ್ತಾರೆ.
ನನಗೆ ಟಿಕೇಟ್ ಆಗಿದೆ ಎಂದು ಜೆಡಿಎಸ್ ನಲ್ಲಿ ಪೋಸ್ಟ್ ಹಾಕಿಕೊಳ್ತಿದ್ದಾರೆ. ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗಬೇಕು ಅನ್ನೋ ಉದ್ದೇಶ ಇರಬೇಕು. ಈಗಿರುವಾಗ ಜೆಡಿಎಸ್ ಗೆ ಟಿಕೇಟ್ ಆಗಿದೆ ಅಂತ ಯಾರು ಸುಳ್ಳು ವದಂತಿ ಹಬ್ಬಿಸಬಾರದು. ಟಿಕೇಟ್ ಬಗ್ಗೆ ನನ್ನ ವರಿಷ್ಠರ ಮೇಲೆ ನಂಬಿಕೆ ಇದೆ, ಎಲ್ಲೂ ಹೇಳಿಕೆ ಕೊಟ್ಟಿಲ್ಲ.ರಾಷ್ಟ್ರ ಹಾಗೂ ರಾಜ್ಯದ ನಾಯಕರ ಮೇಲೆ ನನಗೆ ನಂಬಿಕೆ ಇದೆ,ನಿರಾಸೆ ಆಗೋದಿಲ್ಲ. ಊಹಾಪೋಹ ಗಳಿಗೆ ಯಾರು ಕಿವಿಗೊಡಬಾರದು ಎಂದು ಹೇಳಿದರು.
14282 ಕೋಟಿ ದಲಿತರ ಅಭಿವೃದ್ಧಿ ಮೀಸಲಾತಿ ಹಣವನ್ನು ಗ್ಯಾರಂಟಿ ಗಳಿಗೆ ದುರ್ಬಳಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಬೆಳಿಗ್ಗೆ ಯಿಂದ ಸಂಜೆವರೆಗೂ ಅಂಬೇಡ್ಕರ್ ಹೆಸರು ಹೇಳಿ ದಲಿತರ ಹಣ ಗುಳುಂ ಮಾಡಿದ್ದಾರೆ. ದಲಿತರ ಮೇಲೆ ಕಿಂಚಿತ್ತೂ ಕಾಳಜಿ ಇದ್ರೆ ಹಣ ವಾಪಸ್ಸು ಕೊಡಿ ಸಿಎಂ. ದಲಿತರಿಗೆ ಕ್ಷಮೆ ಯಾಚಿಸಿ, ರಾಜೀನಾಮೆ ನೀಡಲಿ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಅವಮಾನ ಮಾಡಿದೆ. ಸಿಎಂ ಸಿದ್ದರಾಮಯ್ಯ ಅಂಬೇಡ್ಕರ್ ಅವರ ಹೆಸರು ಹೇಳೋದಕ್ಕೆ ನಾಲಯಕ್ ಖರ್ಗೆ ಹಾಗೂ ಪರಮೇಶ್ವರ್ ಅವರನ್ನು ಸಿಎಂ ಸ್ಥಾನದಿಂದ ದಲಿತ ವಿರೋಧಿ ಸಿದ್ದರಾಮಯ್ಯ ತಪ್ಪಿಸಿದ್ದಾರೆ ಎಂದು ತಿಳಿಸಿದರು.