ಹುಬ್ಬಳ್ಳಿ: ಅಮಿತ್ ಶಾಗೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ದೂರು ನೀಡಿದ್ದ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು. ಒಬ್ಬ ವ್ಯಕ್ತಿ ಮೇಲೆ ಆರೋಪಗಳು ಬಹಳಷ್ಟು ಬರುತ್ತವೆ. ಯಾರದ್ರೂ ತಮ್ಮ ಕೆಲಸದಲ್ಲಿ ಮುಂದೆ ಬರುತ್ತಾರೆ ಅಂದರೆ ದೂರು ಬರೋದು ಸಹಜ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದೆ ಮೈತ್ರಿ ಮಾಡಿಕೊಂಡಿತ್ತು. ಆಗ ಈ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರಾ ಎಂದು ಪ್ರಶ್ನಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಗೊತ್ತಿಲ್ಲ. ಆದರೆ ದಾಲ್ ಮೇ ಕುಚ್ ಕಾಲಾ ಹೈ. ಏನೋ ಹೊಂದಾಣಿಕೆ ಇರಬಹುದು ಎಂದರು. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಆದರೆ ಆಡಳಿತ ಪಕ್ಷದಲ್ಲಿರುವವರು ದಾಳಿ ಮಾಡಿ, ಹಲ್ಲೆ ಮಾಡೋದು ಸರಿಯಲ್ಲ. ಸರ್ಕಾರ ನಿಮ್ಮ ಕೈಯಲ್ಲಿದೆ, ಯಾಕೆ ಎಫ್ ಐ ಆರ್ ತಡವಾಯಿತು? 21 ರಿಂದ 28 ರ ತನಕ ಏನು ಮಾಡಿದ್ರಿ? ನಿಮಗೆ ಅರೆಸ್ಟ್ ಮಾಡಲು ಆಗದಿದ್ದರೆ, ಭಾರತ ಸರ್ಕಾರಕ್ಕೆ ತಿಳಸಬೇಕಿತ್ತು.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಕುಮಾರಸ್ವಾಮಿ ಅವರಿಗೆ ಮೊದಲೇ ಆರೋಗ್ಯ ಸರಿಯಲ್ಲ. ಈ ರೀತಿ ಪ್ರತಿಭಟನೆ ಮಾಡಿರುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಪ್ರಜ್ವಲ್ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ಆಗಬೇಕು. ಸತ್ಯ ಕಂಡು ಬಂದಲ್ಲಿ ಕಠೋರ ಶಿಕ್ಷೆ ಆಗಲೇಬೇಕು. ರಾಜ್ಯದ ಮಹಿಳೆಯರ ಸುರಕ್ಷಿತೆಯಲ್ಲಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಅನುಕೂಲಕ್ಕೆ ತಕ್ಕಂತೆ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದರು.