ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ರವರು. ಪದ್ಮಾನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದರು. ಪತ್ನಿ ಅನುಸೂಯ, ಮಗ, ಮಗಳು ಸೇರಿ ಕುಟುಂಬ ಸಮೇತರಾಗಿ ಮನೆಯಿಂದ ನಡೆದುಕೊಂಡೇ ಬಂದು ಸಿ.ಎನ್. ಮಂಜುನಾಥ್ ಮತದಾನ ಮಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,
ನಮಗೆ ಬೇಕಾದ ಸರ್ಕಾರ ತರಲು ಇದೊಂದು ಅವಕಾಶ. ಯಾವುದೇ ಕೆಲಸ ಇರಲಿ ಮತದಾನಕ್ಕೆ ಒಂದೆರೆಡು ಗಂಟೆ ಮೀಸಲಿಡಿ. ಯುವಕರು ಮುಂದೆ ಬಂದು ವೋಟ್ ಮಾಡಬೇಕು. ವೀಕೆಂಡ್ ಅಂತ ಬೆಂಗಳೂರು ಬಿಟ್ಟು ಹೋಗಬಾರದು. ಇಂದು ಕ್ಷೇತ್ರದಲ್ಲೇ ಇದ್ದು ಮತಹಾಕಿ. ವೋಟ್ ಹಾಕದಿದ್ದರೆ ಟೀಕೆ ಮಾಡುವ ಹಕ್ಕೂ ಕೂಡಾ ಇರುವುದಿಲ್ಲ ಎಂದರು.
Lokasabha Election: ಇಂದು ಬೆಂಗಳೂರಿನಲ್ಲಿ ಇವೆಲ್ಲವೂ ನಿರ್ಬಂಧ.. ಏನೆಲ್ಲಾ ಒಪನ್..!?
ಕನಕಪುರದಲ್ಲಿ ಕೂಪನ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ರಾತ್ರಿ ಕೆಲವು ಘಟನೆ ಆಗಿದೆ. ನಿನ್ನೆ ರಾತ್ರಿ ಕನಕಪುರ, ಸಾತನೂರು, ಮಾಗಡಿ, ರಾಮನಗರ ಭಾಗದಲ್ಲಿ ಆಮೀಷ, ಗ್ಯಾರಂಟಿ ಕಾರ್ಡ್ ಹಂಚಿಕೆ ಆಗಿದೆ. ಇದು ಅತ್ಯಂತ ಅಪವಿತ್ರ ವಿಚಾರ. ಯಾವತ್ತೂ ಮತದಾರರ ಮೇಲೆ ಒತ್ತಡ ಹಾಕಬಾರದು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಮುಕ್ತ ಅವಕಾಶ ಕೊಡಬೇಕು. ಚುನಾವಣೆ ಆರೋಗ್ಯಕರವಾಗಿರಬೇಕು ಎಂದು ಹೇಳಿದರು.