ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೋಲಿನ ಬಳಿಕ ಆಟಗಾರರು ನೀಡುತ್ತಿರುವ ಭಾವನಾತ್ಮಕ ಕಾರಣಗಳ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅಸಮಾಧಾನ ಹೊರಹಾಕಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2024 ಟೂರ್ನಿಯ 38ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 9 ವಿಕೆಟ್ಗಳ ಹೀನಾಯ ಸೋಲುಂಡಿತು. ಈ ಬಗ್ಗೆ ಮಾತನಾಡಿದ ದಿಗ್ಗಜ ವೇಗಿ ಸೋಲಿನ ಕುರಿತಾಗಿ ಮುಂಬೈ ನಾಯಕ ನೀಡಿದ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಪಂದ್ಯದಲ್ಲಿ ಎದುರಾದ 9 ವಿಕೆಟ್ಗಳ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ಆಟಗಾರರು ನೀಡಿದ ಕಳಪೆ ಪ್ರದರ್ಶನವನ್ನು ಟೀಕೆ ಮಾಡದೆ ಕ್ಷುಲಲ್ಕ ಕಾರಣ ಕೊಟ್ಟಿದ್ದನ್ನು ಸ್ಟೇನ್ ಟೀಕೆ ಮಾಡಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಇತ್ತೀಚಿನ ದಿನಗಳಲ್ಲಿ ಆಟಗಾರರು, ವಿಧಾನದ ಮೇಲೆ ನಂಬಿಕೆ ಇಡಬೇಕು, ಕ್ರಿಕೆಟ್ನ ಮೂಲ ಮಂತ್ರಗಳಿಗೆ ಬದ್ಧರಾಗಿರಬೇಕು ಎಂದು ಗಾಳಿಯಲ್ಲಿ ತೇಲಿಸುವಂತಹ ಉತ್ತರಗಳನ್ನು ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸ್ಟೇನ್ ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಪ್ರದರ್ಶನ ಹೇಳಿಕೊಳ್ಳುವಂತ್ತಿರಲಿಲಲ. ಖುದ್ದಾಗಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪ್ರದರ್ಶನ ದಯನೀಯವಾಗಿತ್ತು. ಮೊದಲಿಗೆ ಬ್ಯಾಟಿಂಗ್ನಲ್ಲಿ 10 ಎಸೆತಗಳಲ್ಲಿ 10 ರನ್ ಅಷ್ಟೇ ಗಳಿಸಿದರು. ಬಳಿಕ ಬೌಲಿಂಗ್ನಲ್ಲಿ 2 ಓವರ್ಗಳಲ್ಲಿ 21 ರನ್ ಹೊಡೆಸಿಕೊಂಡರು. ಇಷ್ಟೆಲ್ಲಾ ಕಾರಣಗಳಿದ್ದರೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಉಡಾಫೆಯ ಉತ್ತರ ಕೊಟ್ಟರು. ಆಟಗಾರರಿಗೆ ಅವರ ಜವಾಬ್ದಾರಿ ಗೊತ್ತಿದೆ. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದೇವೆ ಎಂದು ಹಾರ್ದಿಕ್ ಹೇಳಿದ್ದು, ಡೇಲ್ ಸ್ಟೇನ್ ಕೋಪಕ್ಕೆ ಕಾರಣವಾಗಿದೆ.
“ಆಟಗಾರರು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಸತ್ಯ ಮಾತನಾಡುವ ದಿನಗಳು ಬರುತ್ತದೆ ಎಂಬುದನ್ನು ನಂಬಿದ್ದೇನೆ. ಬುದ್ದಿಗೇಡಿ ಮಾತುಗಳನ್ನು ಆಡುವುದನ್ನು ಬಿಡಿ. ಮನಸಲ್ಲಿರುವ ಸತ್ಯವನ್ನು ಹೊರಹಾಕಿ. ಪ್ರತಿ ಬಾರಿ ಪಂದ್ಯ ಸೋತಾಗಲೆಲ್ಲಾ ಬುದ್ದಿಗೇಡಿಗಳ ಹಾಗೆ ಮಾತನಾಡಬೇಡಿ. ಸೋಲಿಗೆ ಕಾರಣರಾದವರನ್ನು ಟೀಕೆ ಮಾಡುವುದನ್ನು ಕಲಿಯಿರಿ. ಸೋತಾಗಲೆಲ್ಲಾ ಒಂದೇ ಮಾತು ಹೇಳಿ ನಗುವುದನ್ನು ನಿಲ್ಲಿಸಿ,” ಎಂದು ಹಾರ್ದಿಕ್ ಪಾಂಡ್ಯ ಮಾತುಗಳನನು ಬುದ್ದಿಗೇಡಿ ಮಾತುಗಳು ಎಂದು ಹಾರ್ದಿಕ್ ಟೀಕೆ ಮಾಡಿದ್ದಾರೆ.