ದೊಡ್ಡಬಳ್ಳಾಪುರ: ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಉದ್ಯೋಗಿಗಳ ಪರದಾಟದಾಡುವಂತ ಪರಿಸ್ಥತಿ ನಿರ್ಮಾಣವಾಗಿದೆ. ಹೌದು ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದಲ್ಲಿ ಗಂಟೆ ಗಂಟೆ ಕಾದ್ರು ಬಸ್ ಬಾರದಿದಕ್ಕೆ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತ್ಯ ಬೆಳಗ್ಗೆ ವೇಳೆ ಬಸ್ಗಳಿಲ್ಲದೆ ಪರದಾಡ್ತಿದ್ದು,
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರಲು ಸರ್ಕಾರಿ ಬಸ್ ಗಳಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಹಲವು ಭಾರಿ ದೂರು ನೀಡಿದ್ರು ಹೆಚ್ಚುವರಿ ಬಸ್ಗಳನ್ನ ಬಿಡ್ತಿಲ್ಲ, ಬಸ್ಗಳಿಲ್ಲದ ಕಾರಣ ಸಮಯಕ್ಕೆ ಕಾಲೇಜು ಹಾಗೂ ಕೆಲಸಕ್ಕೆ ಹೋಗಲು ಆಗದೆ ಬಸ್ ಸಮಸ್ಯೆ ಬಗೆಹರಿಸುವಂತೆ ಟಿಸಿಗೆ ಮುತ್ತಿಗೆ ಹಾಕಿ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.