ವಿಜಯಪುರ:- ಸರ್ಕಾರ ಅಂದರೆ ಪುಟಾಣಿ ಶೇಂಗಾ ವ್ಯಾಪಾರ ಅಂದುಕೊಂಡಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ರಮೇಶ್ ಜಾರಕಿಹೊಳಿಗೆ ಎಂಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರು: ನ್ಯಾಯಾಲಯದ ಆವರಣದಲ್ಲಿ ಹುಲಿ ಕೊಂದ ಭಕ್ಷಕನ ಅರೆಸ್ಟ್
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಟ್ರೇಲರ್, ಪಿಕ್ಚರ್ ಅಂತ ಬುರುಡೆ ಬಿಡುತ್ತಾರೆಯೇ ಹೊರತು ಅವರು ಎರಡನ್ನೂ ತೋರಿಸಲ್ಲ, ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ ಎಂದು ಹೇಳಿದರು. ಅವರ ಬಳಿ ಅಂಥದ್ದೇನಾದರೂ ಇದ್ದರೆ ಸಾರ್ಜಜನಿಕಗೊಳಿಸಲಿ, ಅವರನ್ನು ತಡೆದವರು ಯಾರು? ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳು ಚುನಾವಣಾ ಸಮಯದಲ್ಲೇ ಹೊರಬಂದಿವೆ, ಜಾರಕಿಹೊಳಿ ಸಹ ಚುನಾವಣೆ ನಡೆಯುತ್ತಿರುವಾಗಲೇ ಬಿಡುಗಡೆ ಮಾಡಲಿ ಎಂದು ಪಾಟೀಲ್ ಸವಾಲೆಸೆದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ ಅಂತ ರಮೇಶ್ ಹೇಳಿರುವುದನ್ನು ಲೇವಡಿ ಮಾಡಿದ ಪಾಟೀಲ್, ಸರ್ಕಾರ ಅಂದರೆ ಅವರು ಪುಟಾಣಿ ಶೇಂಗಾ ವ್ಯಾಪಾರ ಅಂದುಕೊಂಡಿದ್ದಾರಾ? ಚುನಾವಣೆ ಆದ ಮೇಲೆ ಜೆಡಿಎಸ್ 10-15 ಶಾಸಕರು ಮತ್ತು ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪಾಟೀಲ್ ಹೇಳಿದರು