ಚಿಕ್ಕಮಗಳೂರು :- ಜಿಲ್ಲೆ ಮೂಡಿಗೆರೆ ತಾಲೂಕು ಕುಂದೂರು ರಕ್ಷಿತಾ ಅರಣ್ಯದಲ್ಲಿ ಜನವರಿಯಲ್ಲಿ ಹುಲಿ ಕೊಂದ ಪ್ರಕರಣದಲ್ಲಿ ಸಬ್ಬೆನಹಳ್ಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿ ತಲೆಮರೆಸಿಕೊಂಡಿದ್ದ ಕುಂಡ್ರಾ ಗ್ರಾಮದ ಸುರೇಶ್ ನನ್ನು ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮಟನ್ ತಿಂದ ಮೇಲೆ ಈ ಮೂರು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ..!
ಮೂಡಿಗೆರೆ ನ್ಯಾಯಾಲಯಕ್ಕೆ ಹುಲಿ ಕೊಂದ ಪ್ರಕರಣದಲ್ಲಿ ಆರೋಪಿಯಾಗಿರುವ ಸುರೇಶ್ ನ್ಯಾಯಲಯಕ್ಕೆ ಶರಣಾಗಲು ಬಂದಿದ್ದ ಸಮಯವನ್ನು ಕಾದು ಕುಳಿತ ಅರಣ್ಯ ಇಲಾಖೆ ಅಧಿಕಾರಿಗಳು
ನ್ಯಾಯಾಲಯದ ಆವರಣದಲ್ಲಿ ಸುರೇಶನನ್ನು ಅರಣ್ಯ ಇಲಾಖೆ ಬಂಧಿಸಿದೆ.
ಆರೋಪಿಯನ್ನು ಇಷ್ಟು ದಿನಗಳ ಕಾಲ ಬಂಧಿಸದೆ ಕಾಲ ಕಳೆದ ಅರಣ್ಯ ಇಲಾಖೆ ಅಧಿಕಾರಿಗಳು. ನಿಜವಾಗಿಯೂ ಅರಣ್ಯ ಇಲಾಖೆ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತಿದೆಯೇ ಎಂಬ ದೊಡ್ಡ ಪ್ರಶ್ನೆ ಜನರಲ್ಲಿ ಕಾಡುತಿರುವುದು ಸುಳ್ಳಲ್ಲ.
ಶರಣಾಗಲು ಬಂದ ಆರೋಪಿಯನ್ನು ನ್ಯಾಯಾಲಯದ ಆವರಣದಲ್ಲಿ ಸುಮಾರು 30 ಜನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿ, ಬಂಧಿಸಿ ತಾವೇ ಕಾರ್ಯಚರಣೆ ಮಾಡಿ ಬಂಧಿಸಿದಂತೆ ಬಿಂಬಿಸುತ್ತಾರೊ ಅರಣ್ಯ ಇಲಾಖೆ ಅಧಿಕಾರಿಗಳು ಎಂದು ಕಾದು ನೋಡಬೇಕಾಗಿದೆ.
ನಿಜವಾಗಿಯೂ ಹುಲಿ ಕೊಂದ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ಕಂಬ್ಬಿ ಎಣಿಸುವಂತೆ ಮಾಡುತ್ತಾರೊ ಇಲ್ಲಾ ಗೊತ್ತಿದ್ದು ಗೊತ್ತಿಲ್ಲದ ಹಾಗೆ ಕಣ್ಣು ಮುಚ್ಚಿ ಕೂರುವುದೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಂದು ಕಾದು ನೋಡಬೇಕಿದೆ.