ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ವಿಚಾರ ಹಾಗು ಸಂತ್ರಸ್ತೆಯರ ದೂರುಗಳ ವಿಚಾರ ತೀವ್ರತೆ ಪಡೆದುಕೊಳ್ಳುತ್ತಿದೆ. ಹೊಳೆನರಸಿಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ದೂರಿನ ಸಂಬಂಧ ಬಸವನಗುಡಿ ರೇವಣ್ಣ ನಿವಾಸದಲ್ಲಿ ಸಂತ್ರಸ್ತೆ ಜೊತೆ ಸ್ಥಳ ಮಹಜರ್ ಪ್ರಕ್ರಿಯೆಯನ್ನ ಎಸ್ ಐಟಿ ಮುಗಿಸಿದ್ರೆ. ಇತ್ತ ಪೆನ್ಡ್ರೈವ್ ಹಂಚಿಕೆಯ ಹಿಂದಿರುವ ಮಹಾನಾಯಕ ಡಿಕೆಶಿ ಎಂದು ದೇವರಾಜೇಗೌಡ ಡಿಯೋ ಬಾಂಬ್ ಸಿಡಿಸಿದ್ದಾರೆ…ಓ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
2019 ರಿಂದ 2022 ರ ಸಂದರ್ಭದಲ್ಲಿ ತನ್ನಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಹೊಳೆನರಸಿಪುರ ಠಾಣೆಯಲ್ಲಿ ದೂರು ನೀಡಿದ್ದ ಸಂತ್ರಸ್ತೆಯನ್ನ ಇಂದು ಎಸೈಟಿ ತಂಡ ಬಸವನಗುಡಿಯ ರೇವಣ್ಣ ನಿವಾಸಕ್ಕೆ ಕರೆತಂದು ಸ್ಥಳ ಮಹಜರ್ ಮಾಡಿದ್ರು. ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಹಾಗೂ ಪ್ರಜ್ವಲ್ ಇಬ್ಬರೂ ಸಹ ಲೈಂಗಿಕ ದೌರ್ಜನ್ಯವೆಸಗಿದ್ರು ಎಂದು ಉಲ್ಲೇಖಿಸಲಾಗಿತ್ತು.
ಮೊನ್ನೆ ಹೊಳೆನರಸಿಪುರದ ರೇವಣ್ಣ ನಿವಾಸದಲ್ಲೂ ಮಹಜರ್ ಮಾಡಿದ್ದ ಎಸ್ ಐಟಿ ತಂಡ ಇಂದು 11 ಗಂಟೆ ಸುಮಾರಿಗೆ ಸಂತ್ರಸ್ತೆ ಕರೆತಂದು ಸುಮಾರು 5 ಗಂಟೆಗಳ ಕಾಲ ಮಹಜರ್ ಪ್ರಕ್ರಿಯೆ ಮಾಡಿದ್ರು. ಘಟನೆ ನಡೆದ ಸಂದರ್ಭ,ಸ್ಥಳ, ಯಾವಾಗ ನೆಡೆದದ್ದು, ಮನೆಯಲ್ಲಿ ಆ ಸಂದರ್ಭದಲ್ಲಿ ಯಾರ್ಯಾರಿದ್ರು ಎನ್ನುವ ಎಲ್ಲಾ ಮಾಹಿತಿಯನ್ನ ಎಸ್ ಐಟಿ ದಾಖಲು ಮಾಡಿಕೊಂಡಿದ್ದಾರೆ. ಸಂಪೂರ್ಣ ಮಹಜರ್ ಪ್ರಕ್ರಿಯೆಯನ್ನ ವಿಡೀಯೊ ಚಿತ್ರಿಕರಣ ಮಾಡಿಕೊಂಡು, ಸಂತ್ರಸ್ತೆಯ ಸಂಪೂರ್ಣ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
HD ರೇವಣ್ಣ ಹಾಗೂ ಪ್ರಜ್ವಲ್ ವಿರುದ್ದ ಹೊಳೆನರಸೀಪುರ ಸಂತ್ರಸ್ಥೆಯ ಆರೋಪಗಳೇನು ಅಂತ ನೋಡೋದಾದ್ರೆ .ರೇವಣ್ಣ ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು. ಮನೆಯ ಸ್ಟೋರ್ ರೂಂ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು.ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು.ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು.
ಪ್ರಜ್ವಲ್ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಜಿಗುಟುತಿದ್ದರು. ಇದೇ ರೀತಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರು ನೀಡಿದ್ದ ಮಹಿಳೆ,ತನ್ನ ಮಗಳ ಪೋನ್ ಗೆ ಹಲವು ಬಾರಿ ಪ್ರಜ್ವಲ್ ರೇವಣ್ಣ ವಿಡಿಯೋ ಕಾಲ್ ಮಾಡ್ತಿದ್ರು. ಅಸಭ್ಯ ಸಂಭಾಷಣೆ ಮೂಲಕ ಪ್ರಚೋದಿಸಲು ಯತ್ನಿಸ್ತಿದ್ರು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಗಳನ್ನು ಮಾಡಿದ್ರು.
ಪ್ರಜ್ವಲ್ ರೇವಣ್ಣ ಹಾಗು ರೇವಣ್ಣ ವಿರುದ್ದ ಪೆನ್ಡ್ರೈವ್ ಉರುಳು ಬಿಗಿಯಾಗುತ್ತಿದ್ದಂತೆ ಇತ್ತ ಬಿಜೆಪಿಯ ಮುಖಂಡ ದೇವರಾಜೇಗೌಡ ಡಿಕೆಶಿ ವಿರುದ್ದ ಡಿಯೋ ಬಾಂಬ್ ಸಿಡಿಸಿದ್ದಾರೆ. ಪೆನ್ಡ್ರೈವ್ ಬಿಡುಗಡೆಯ ಹಿಂದಿರುವ ಮಹಾನಾಯಕ ಡಿಕೆ ಶಿವಕುಮಾರ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯ ಎಲ್ ಆರ್ ಶಿವರಾಮೇಗೌಡರ ಮೂಲಕ ಡಿ ಕೆ ಶಿವಕುಮಾರ್ ನನ್ನನ್ನು ಭೇಟಿ ಮಾಡಿ ನನಗೆ ಎಂ ಎಲ್ ಸಿ ಮಾಡೋ ಆಮಿಷವನ್ನು ಒಡ್ಡಿದ್ರು.
ಜೊತೆಗೆ ನಾವು ಹೇಳಿದ ಹಾಗೆ ಕೇಳಲಿಲ್ಲಾಂದ್ರೆ ಆಮೇಲೆ ನೆಡೆಯೋದೆ ಬೇರೆ ಎಂದು ಶಿವರಾಮೇಗೌಡ್ರು ಧಮ್ಕಿ ಹಾಕಿದ್ರು ನಾನು ಅದ್ಯಾವುದಕ್ಕು ಬಗ್ಗದಿದ್ದಾಗ ನನ್ನನ್ನು ಈ ಕೇಸಿನಲ್ಲಿ ಎ ಒನ್ ಆರೋಪಿಯನ್ನಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು…ಇನ್ನು ಎಸೈಟಿ ಅಧಿಕಾರಿಗಳ ಮೇಲೂ ಆರೋಪ ಮಾಡಿರುವ ದೇವರಾಜೇಗೌಡ ನೀವು ನೀಡಿರುವ ಹೇಳಿಕೆಯಲ್ಲಿ ಡಿಕೆಶಿ ಹೆಸರನ್ನು ತೆಗಿಯಿರಿ ಎಂದು ಎಸ್ಪಿ ಸುಮನ್ ಡಿ ಪನ್ನೇಕರ್ ಹೇಳಿದ್ರು ಎಂದು ಆರೋಪ ಮಾಡಿದ್ರು. ಒಟ್ಟಾರೆ ರೇವಣ್ಣ ಹಾಗೂ ಪ್ರಜ್ವಲ್ರೇವಣ್ಣ ಪ್ರಕರಣ ದಿನಕ್ಕೊಂದು ಟ್ವಿಸ್ ದಿನಕ್ಕೊಂದು ವಿಡಿಯೋ ಆಡಿಯೋ ರಿಲೀಸ್ ಆಗುತ್ತಿದ್ದು ಮತ್ತಷ್ಟು ರೋಚಕತೆ ಪಡೆದುಕೊಳ್ತಿದೆ.. ಈ ಪ್ರಕರಣ ಮುಂದೆ ಏನೇಲ್ಲ ತಿರುವು ಬರುತ್ತವೆ ಎಂದು ಕಾದು ನೋಡಬೇಕಿದೆ..