ಕೆ.ಆರ್.ಪುರ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಪ್ರೋ.ರಾಜೀವ್ ಗೌಡ ಪರ ಕೆ.ಪಿ ಸಿ ಸಿ ಕಾರ್ಯದರ್ಶಿ ಡಿಕೆ ಮೋಹನ್ ಬಾಬು ಅವರು ಮನೆ ಮನೆಗೆ ತೆರೆಳಿ ಮತಯಾಚನೆ ಮಾಡಿದರು.
ನಿತ್ಯ ಮಲಗುವಾಗ ಬೆಳ್ಳುಳ್ಳಿಯನ್ನು ನಿಮ್ಮ ದಿಂಬಿನ ಪಕ್ಕ ಇಟ್ಟುಕೊಳ್ಳಿ, ಚಮತ್ಕಾರ ಗ್ಯಾರಂಟಿ!
ಬಸವನಪುರ ವಾರ್ಡ್ ನ ಮೇಡಹಳ್ಳಿ,ಸಿಗೇಹಳ್ಳಿ,
ಬಸವನಪುರ,ಸ್ವತಂತ್ರ ನಗರ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗಳ ಬಗ್ಗೆ ಮತದಾರರಿಗೆ ಮನವರಿಗೆ ಮಾಡಿಸಿ ಈ ಸಲ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದರು.
ಪ್ರಚಾರದ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಿಕೆ ಮೋಹನ್ ಬಾಬು ಅವರು
ಕಾಂಗ್ರೆಸ್ ಸರ್ಕಾರ ಬಡವರ, ಕೂಲಿ ಕಾರ್ಮಿಕರ, ಹಿಂದುಳಿದ ಜನರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನಮನಕ್ಕೆ ಮುಟ್ಟಿದ್ದು, ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ಅವುಗಳನ್ನು ಮತ್ತೆ ನೆನಪಿಸುವ ಮೂಲಕ ಮತಯಾಚಿಸಬೇಕು. ಬಿಜೆಪಿಯು ಕಾಂಗ್ರೆಸ್ ಅಭಿವೃದ್ಧಿ ಸಹಿಸಲಾಗದೆ ಸುಳ್ಳು ಭರವಸೆ ನೀಡುತ್ತಿದೆ. ಹೀಗಾಗಿ ನಾವೇ ಕಾಂಗ್ರೆಸ್ ಅಭ್ಯರ್ಥಿ ಎಂದು ಭಾವಿಸಿ ಮತಯಾಚನೆ ಮಾಡಬೇಕು ಎಂದರು.
ಇಂದು ಮೇಡಹಳ್ಳಿ ರಾಕೇಶ್ ಅವರು ನೂರಾರು ಕಾರ್ಯಕರ್ತರನ್ನ ಸೇರಿಸಿ ಮನೆ ಮನೆಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸದ ಬಗ್ಗೆ ಮನವರಿಕೆ ಮಾಡಿ ಮತಯಾಚನೆ ಮಾಡುತ್ತಿದ್ದಾರೆ ಅದೇ ರೀತಿ ಎಲ್ಲಾ ವಾರ್ಡ್ ಗಳಲ್ಲೂ ನಮ್ಮ ಎಲ್ಲಾ ಮುಖಂಡರು ಉಳಿದಿರುವ ಮೂರು ನಾಲ್ಕು ದಿನಗಳಲ್ಲಿ ಆದಷ್ಟು ಹೆಚ್ಚು ಮತದಾರರು ಭೇಟಿ ನೀಡಿ ಕಾಂಗ್ರೆಸ್ ಗೆ ಮತ ನೀಡುವಂತೆ ಮನವೊಲಿಸಬೇಕು ಎಲ್ಲಾ ವಾರ್ಡ್ ಗಳಲ್ಲೂ ಕಾಂಗ್ರೆಸ್ ಹೆಚ್ಚು ಮುನ್ನಡೆ ಬರುವಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇಡಹಳ್ಳಿ ರಾಕಿ,ಸಿಗೇಹಳ್ಳಿ ಅರಳಪ್ಪ,ಆಂಜಿನಪ್ಪ,ಬಾಲಕೃಷ್ಣ ಮತ್ತಿತರರು ಇದ್ದರು.