ಬೆಂಗಳೂರು: ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಅಸಮಾಧಾನದ ಕಿಚ್ಚು ಬುಗಿಲೆದ್ದಿದೆ, ಮೈತ್ರಿಗೆ ಅಪಸ್ವರ ಕೇಳಿಬಂದಿದ್ದು ದೊಡ್ಡ ಬಿರುಕು ಮೂಡಿದೆ. ಬಿಜೆಪಿ ಹೈಕಮಾಂಡ್ ವಿರುದ್ಧವೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗಿಬಿದ್ದಿದ್ದು 3 ಕ್ಷೇತ್ರ ಬಿಟ್ಟುಕೊಡದಿದ್ರೆ ಮೈತ್ರಿ ಬೇಡವೇ ಬೇಡ ಅನ್ನೋ ಎಚ್ಚರಿಕೆ ಕೊಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತರೇ ಮೈತ್ರಿಗೆ ವಿರೋಧ ವ್ಯಕ್ತಪಡಿಸ್ತಿದ್ದು ಸ್ವತಂತ್ರವಾಗಿ ಸ್ಪರ್ಧಿಸೋಣ ಅಂತಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಸಂಸದೆ ಸುಮಲತಾ ಬಿಜೆಪಿ ಟಿಕೆಟ್ ಗಾಗಿ ಸರ್ಕಸ್ ಮಾಡ್ತಿದ್ದಾರೆ…
ಬಿಜೆಪಿ- ಜೆಡಿಎಸ್ ಲೋಕಸಭಾ ಮೈತ್ರಿಯಲ್ಲಿ ಮೊದಲ ಬಿರುಕು ಬುಗಿಲೆದ್ದಿದೆ, ಎಲ್ಲವೂ ಸರಿ ಇದೆ ಏನೂ ಅಸಮಾಧಾನ ಇಲ್ಲ ಅಂತಿದ್ದ ದಳಪತಿಗಳು ಇದೀಗ ಬಿಜೆಪಿ ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ 2 ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಸಕ್ಸಸ್ ಆಗದೇ ವಾಪಸ್ಸಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೋರ್ ಕಮಿಟಿ ಸಭೆ ನಡೆಸಿ ಮೈತ್ರಿ ಕಡಿದುಕೊಳ್ಳುವ ಮೊದಲ ಹೆಜ್ಜೆಗೆ ಮುನ್ನುಡಿ ಬರೆದಿದ್ದಾರೆ ಮಾಜಿ ಸಿಎಂ….
ಜೆಡಿಎಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯ್ತು. ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು, ಪಕ್ಷದ ಮುಖಂಡರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ರು ಬಿಜೆಪಿ ನಾಯಕರು ನಮಗೆ ಗೌರವ ಕೊಡ್ತಿಲ್ಲ, ಸಭೆ ಸಮಾರಂಭ, ಪ್ರಚಾರ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸ್ತಿಲ್ಲ ಇದರಿಂದಾಗಿ ನಮಗೆ ಪಕ್ಷ ಸಂಘಟನೆಗೆ ಹಿನ್ನಡೆಯಾಗ್ತಿದೆ. ಮೈತ್ರಿಯಿಂದ ನಮಗೆ ಲಾಭಕ್ಕಿಂತ ನಷ್ಟವೇ ಆಗ್ತಿದೆ ಅದ್ರಿಂದ ನಾವು ಸ್ವತಂತ್ರವಾಗಿ ಸ್ಪರ್ಧಿಸೋಣ ಅಂತ ಆಕ್ರೊಶ ಹೊರಹಾಕುದ್ರು….
ಸಭೆ ನಂತರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ಉತ್ತರ ಕರ್ನಾಟಕ ಭಾಗದಲ್ಲಿ ಬಿಜಾಪುರ ಕಲುಬರ್ಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ,ನಮ್ಮನ್ನ ಕಡೆಗಣಿಸಿದ್ರೆ ಅದರಿಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ. 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ 3% ಮತಗಳು ಸ್ವಿಂಗ್ ಆದ್ರೆ ಪರಿಣಾಮ ಬೇರೆಯೇ ಆಗುತ್ತೆ. ನಾವು ಕೇಳಿದ್ದೇ 3 ರಿಂದ 4 ಸೀಟು ಅಷ್ಟೇ ನಮ್ಮ ಶಕ್ತಿ ಅವರಿಗೂ ಗೊತ್ತಿದೆ, ಎರಡು ಸೀಟು ತಗೊಳಿಕೆ ನಾನು ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಬೇಕಾ. ಹಾಸನ, ಮಂಡ್ಯದಲ್ಲಿ ಸ್ವಾತಂತ್ರ್ಯವಾಗೆ ನಮ್ಮ ಅಭ್ಯರ್ಥಿಗಳು ಗೆಲ್ತಾರೆ ತ್ರಿಕೋನ ಸ್ವರ್ಧೆ ಆದ್ರೆ ಸುಲಭವಾಗಿ ಗೆಲ್ತಿವಿ. ಕರ್ನಾಟಕದ ರಾಜಕೀಯವೇ ಬೇರೆ ದೇಶದ ರಾಜಕಾರಣವೇ ಬೇರೆ ಅಂತ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ ದಳಪತಿ….
ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಕೋಲಾರ ಕ್ಷೇತ್ರ ಜೆಡಿಎಸ್ ಗೆ ಸಿಗುತ್ತೆ ಎಂಬ ವಿಶ್ವಾಸವಿದೆ, ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ದಿಸುತ್ತಾರೆ. ಹಾಸನ, ಮಂಡ್ಯ ಕೋಲಾರದಲ್ಲಿ ನಮ್ಮ ಅಭ್ಯರ್ಥಿಗಳೇ ಸ್ಪರ್ಧೆ ಮಾಡೋದು. ಇಲ್ಲವಾದ್ರೆ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಅನ್ನೋ ಎಚ್ಚರಿಕೆ ಕೊಟ್ಟಿದ್ದಾರೆ ಕುಮಾರಸ್ವಾಮಿ….
ಕುಮಾರಸ್ವಾಮಿ ಇಲ್ಲಿ ಮೈತ್ರಿ ಮುರಿದುಕೊಳ್ಳೋ ಮಾತಾಡ್ತಿದ್ರೆ ಅತ್ತ ದೆಹಲಿಯಲ್ಲಿ ಸಂಸದೆ ಸುಮಲತಾ ಮಂಡ್ಯ ಬಿಜೆಪಿ ಟಿಕೆಟ್ ಗಾಗಿ ಸರ್ಕಸ್ ಮಾಡ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗಿ ಟಿಕೆಟ್ ಗಾಗಿ ಒತ್ತಡ ಹೇರಿದ್ದು ಅದಯ ಸಕ್ಸಸ್ ಆಗದೆ ನಾಳೆ ಅಮಿತ್ ಶಾ ಭೇಟಿಗಾಗಿ ಕಾಯ್ತಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ್ರೆ ಸುಮಲತಾ ನಡೆ ಏನು ಅನ್ನೋದು ಇನ್ನು ನಿಗೂಡವಾಗಿದ್ದು ಬಂಡಾಯ ಅಭ್ಯರ್ಥಿಯಾಗ್ತಾರ ಸ್ವತಂತ್ರವಾಗಿ ಸ್ಪರ್ಧಿಸ್ತಾರಾ ಅನ್ನೊ ಸ್ಪಷ್ಟನೆ ಸಿಗ್ತಿಲ್ಲ...
ಒಟ್ನಲ್ಲಿ ಎಲ್ಲವೂ ಸರಿ ಇದೆ ಏನೂ ಅಸಮಾಧಾನ ಇಲ್ಲ ಅಂತಿದ್ದ ಕುಮಾರಸ್ವಾಮಿ ಇದೀಗ ಒಮ್ಮೆಲೇ ಬಿಜೆಪಿ ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿದ್ದಾರೆ. 3ಕ್ಷೇತ್ರ ಕೊಡದಿದ್ದರೆ ಮೈತ್ರಿಗೆ ಎಳ್ಳು ನೀರು ಬಿಡುವ ನಿರ್ಧಾರ ಮಾಡಿರುವ ದಳಪತಿಗಳು ಕೇಸರಿ ಹೈಕಮಾಂಡ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅತ್ತ ಸುಮಲತಾ ನಡೆ ಇನ್ನೂ ನಿಗೂಡವಾಗಿದ್ದು ಎಲ್ಲವೂ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳೋ ನಿರ್ಧಾರದ ಮೇಲೆ ಮೈತ್ರಿ ಭವಿಷ್ಯ ಗೊತ್ತಾಗಲಿದೆ….