ಕೋಲ್ಕತಾ: “ಐಎನ್ಡಿಐಎ ಮೈತ್ರಿಕೂಟವನ್ನು ನಾನು ರಚಿಸಿದ್ದೇ ಹೊರತು ಬೇರಾರೂ ಅಲ್ಲ. ಮೈತ್ರಿಕೂಟ ಗೆಲುವು ಸಾಧಿಸಿದರೆ ನಾವು ಅದನ್ನು ಮತ್ತೆ ಪುನಶ್ಚೇತನಗೊಳಿಸುತ್ತೇವೆ. ಆದರೆ ಬಂಗಾಳದಲ್ಲಿ ಅಲ್ಲ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದೆ” ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಂಗಾಳ ಕಾಂಗ್ರೆಸ್ ಮತ್ತು ಸಿಪಿಎಂ ಎರಡಕ್ಕೂ ಮಮತಾ ಬ್ಯಾನರ್ಜಿ ಕಂಡರೆ ಅಲರ್ಜಿ ಎಂದು ಟೀಕಿಸಿರುವ ದೀದಿ, ಈ ಎರಡೂ ಪಕ್ಷಗಳನ್ನು ರಾಜ್ಯದಲ್ಲಿ ನಂಬುವುದಿಲ್ಲ ಎಂದಿದ್ದಾರೆ. “ಅವರು ಬಿಜೆಪಿ ಯೋಜನೆಯ ಭಾಗವಾಗಿದ್ದಾರೆ. ತಾನು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಹೋರಾಟ ನೀಡಬೇಕು. ನಾನು ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಆದರೆ ಅದು ಬಂಗಾಳಕ್ಕೆ ಬಂದು ಟಿಎಂಸಿಯ ಮತಗಳನ್ನು ತಿನ್ನಬಾರದು” ಮಮತಾ ಆಗ್ರಹಿಸಿದರು.
https://ainlivenews.com/bumper-job-opportunity-in-unique-identification-authority-of-india/
ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಯಾವ ಪ್ರಭಾವವನ್ನೂ ಬೀರಲಾರವು. ಅವು ಪರಸ್ಪರ ಮಾತ್ರ ಮುಖ್ಯವಾಗಿದೆಯೇ ವಿನಾ ಬೇರಾರಿಗೂ ಅಲ್ಲ ಎಂದು ಮಾಲ್ದಾದಲ್ಲಿ ನಡೆದ ರಾಲಿಯಲ್ಲಿ ಅವರು ಟೀಕಿಸಿದರು. “ಕಳೆದ ಮೂರು ವರ್ಷಗಳಿಂದ 100 ದಿನಗಳ ಕೆಲಸ ಹಾಗೂ ಆವಾಸ್ ಯೋಜನೆಗಳ ನಮ್ಮ ಪಾಲಿನ ಬಾಕಿ ಹಣವನ್ನು ಬಿಡುಗಡೆ ಮಾಡುವುದನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ.
ಚುನಾಯಿತ ಕಾಂಗ್ರೆಸ್ ನಾಯಕರು ಈ ಬಗ್ಗೆ ತಮ್ಮ ಧ್ವನಿ ಎತ್ತಿದ್ದರೇ? ಸಿಪಿಎಂ ಎಂದಾದರೂ ತನ್ನ ಬಾಯಿ ಬಿಟ್ಟಿದೆಯೇ? ಅವರು ಟಿಎಂಸಿ ಗೆಲ್ಲುವುದನ್ನು ಬಯಸಿಲ್ಲ. ಏಕೆಂದರೆ ಟಿಎಂಸಿ ಗೆದ್ದರೆ, ಅದು ಬಿಜೆಪಿ ಪ್ರಧಾನ ವಿರೋಧ ಪಕ್ಷವಾಗುತ್ತದೆ. ಎನ್ಆರ್ಸಿ ಘೋಷಣೆ ಮಾಡಿದಾಗ ಇತರೆ ಪಕ್ಷಗಳು ಎಲ್ಲಿದ್ದವು? ನಾವು ರಸ್ತೆಗೆ ಇಳಿದಿದ್ದೆವು. ಅಸ್ಸಾಂಗೆ ಹೋದವರು ನಾವು. ನಮ್ಮ ಸಂಸದರು ಈ ಬಗ್ಗೆ ಹೋರಾಟ ನಡೆಸಿದ್ದರು” ಎಂದು ಐಎನ್ಡಿಐಎ ಮೈತ್ರಿಕೂಟದ ಪಾಲುದಾರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.