ಬೆಳಗಾವಿ: ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ತಪ್ಪದೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣದ ಸತ್ಯಾಸತ್ಯತೆ ಇನ್ನೂ ತಿಳಿಯಬೇಕಿದೆ ಎಂದ ಅವರು, ‘ಅಶ್ಲೀಲ ವಿಡಿಯೋಗಳು ಐದಾರು ವರ್ಷದ ಹಿಂದಿನವು.
ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಸಮಯದಲ್ಲಿದ್ದಾಗ ಇದೆಲ್ಲವೂ ನಡೆದಿರುವುದು’ ಎಂದು ಬಿಜೆಪಿ ಸಿ.ಟಿ. ರವಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, “ಬಿಜೆಪಿಗರು ಬರೀ ಸುಳ್ಳು ಹೇಳುತ್ತಾರೆ. ಕೋಮುವಾದಿ ಪಕ್ಷದೊಂದಿಗೆ ಇಲ್ಲ ಎಂಬ ಕಾರಣಕ್ಕೆ ನಾವು ಆಗ ಜ್ಯಾತ್ಯಾತೀಯ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವು; ಪ್ರಜ್ವಲ್ ನನ್ನು ನೋಡಿ ಅಲ್ಲ” ಎಂದು ಹೇಳಿದರು.
ಬಿಸಿಲ ಉರಿಗೆ ಬೆಂದ ಜನರು.! ಬಿಸಿಲ ಬೇಗೆಯಿಂದ ಪಾರಾಗಲು ಹೀಗೆ ಮಾಡಿ ಸಾಕು..
ಇನ್ನು, ರಾಜ್ಯದಲ್ಲಿ 2019ರಲ್ಲಿ 25 ಸಂಸದರು ಗೆದ್ದರೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವ ಬಗ್ಗೆ ಒಬ್ಬರೂ ಧ್ವನಿ ಎತ್ತಲಿಲ್ಲ. ಬಿಜೆಪಿ ಸಂಸದರಲ್ಲಿ ಪುಕ್ಕಲುತನ ಹೆಚ್ಚಿದೆ. ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಕೊಡುಗೆ ಶೂನ್ಯ. ನೆರೆ, ಕೋವಿಡ್ ಹಾಗೂ ಬರಗಾಲದಲ್ಲೂ ರಾಜ್ಯದ ಜನರ ಸಂಕಷ್ಟಕ್ಕೆ ಕೇಂದ್ರ ಬಿಜೆಪಿ ಸರಕಾರ ಸ್ಪಂದಿಸಲಿಲ್ಲ.
ಆದರೆ, ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ೫ ಗ್ಯಾರಂಟಿಗಳನ್ನೂ ಸಂಪೂರ್ಣವಾಗಿ ಜಾರಿ ಮಾಡಿದ್ದು, ಜನ ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿನ 28ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.