ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿದೆ. ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿಯಲ್ಲಿ ಮುಂಬೈ ತಂಡ ಎಂಟು ಪಂದ್ಯಗಳಲ್ಲಿ ಐದನ್ನು ಸೋತು, ಮೂರು ಮ್ಯಾಚ್ಗಳನ್ನು ಮಾತ್ರ ಗೆದ್ದಿದೆ.
Voting day: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್…ಕಾರಣ ಇಲ್ಲಿದೆ!?
ರಾಜಸ್ಥಾನದ ವಿರುದ್ಧದ ಸೋಲಿನ ಬಗ್ಗೆ ಹಾರ್ದಿಕ್ ಮಾತನಾಡಿದ್ದಾರೆ. ‘ನಾವು ಆರಂಭದಲ್ಲೇ ತೊಂದರೆಗೆ ಸಿಲುಕಿದೆವು. ತಿಲಕ್ ವರ್ಮಾ ಹಾಗೂ ನೇಹಲ್ ವಧೇರಾ ಆಟ ಉತ್ತಮವಾಗಿತ್ತು. ಆರಂಭದಲ್ಲಿ ವಿಕೆಟ್ ಬಿದ್ದಿದ್ದು ನೋಡಿ 180 ರನ್ಗಳನ್ನು ನಾವು ರೀಚ್ ಆಗುವುದಿಲ್ಲ ಎಂದುಕೊಂಡಿದ್ದೆವು. ನಾವು ಉತ್ತಮವಾಗಿ ಫಿನಿಶ್ ಮಾಡಿಲ್ಲ. ಹೀಗಾಗಿ 10-15 ರನ್ ಕಡಿಮೆ ಆಯಿತು. ನಾವು ಸರಿಯಾಗಿ ಆಡಿಲ್ಲ’ ಎಂದಿದ್ದಾರೆ ಅವರು
ನಾವು ಮಾಡಿದ ತಪ್ಪುಗಳಿಂದ ಕಲಿಯಬೇಕು. ಅದನ್ನು ಸರಿಪಡಿಸಿಕೊಂಡು ಮತ್ತೆ ಅದನ್ನು ಮಾಡದಂತೆ ನೋಡಿಕೊಳ್ಳಬೇಕು. ಪ್ರಗತಿ ಬಹಳ ಮುಖ್ಯ. ತಂಡದೊಳಗೆ ಅಥವಾ ಪ್ರತ್ಯೇಕವಾಗಿ ನಾವು ನಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ.