Author: AIN Author

ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಮತ್ತೊಂದು ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟ ಮಮ್ಮಟ್ಟಿ  (Mammootty) ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ. ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ. ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್…

Read More

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರು, ಜಾತಿ‌ ಗಣತಿ ವರದಿ ಬಗ್ಗೆ ಸಿಎಂ ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಾತಿ‌ ಗಣತಿ ವರದಿ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರೆ. ನಾನು ಜಾತಿ‌ ಗಣತಿ ವರದಿಯ ಪರವಾಗಿದ್ದೇನೆ ಅಂತ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ” ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಸಿಎಂ‌ ಪದೇ ಪದೆ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ವರದಿಯ ಸಾಧಕ, ಬಾಧಕಗಳ ಕುರಿತು ಚರ್ಚೆ ಆಗಬೇಕು. ಇದಕ್ಕೆ ಒಳ್ಳೆಯ ವೇದಿಕೆಯನ್ನು ಸರ್ಕಾರ ಕಲ್ಪಿಸಿಕೊಟ್ಟರೆ ಉತ್ತಮ” ಎಂದರು. ವರದಿ ಬಿಡುಗಡೆಗೆ ಮೊದಲೇ ಹಾಗಿದೆ, ಹೀಗಿದೆ ಅಂತ ಅಭಿಪ್ರಾಯ ಶುರುವಾಗಿದೆ. ಅವರ ಮಂತ್ರಿಗಳೇ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ವರದಿ ಸೋರಿಕೆ ಆಗಿದ್ದು ಹೇಗೆ?. ರಾಹುಲ್ ಗಾಂಧಿ ಹೇಳಿದ್ದಾರೆ ಅಂತ ವರದಿ ಪಡೆಯಲು ಮುಂದಾಗಿದ್ದಾರೆ. ವರದಿಯ ಚರ್ಚೆಗೆ ಅವಕಾಶ ಕೊಡಲಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ಮುಂದುವರೆಯಲಿ.…

Read More

ಮುಂಬೈ: ಈಗಾಗಲೇ ಕಡಿಮೆ ಬೆಲೆಗೆ ಫೋನ್‌, ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿರುವ ರಿಲಯನ್ಸ್‌ ಜಿಯೋ (Reliance Jio) ಈಗ ಕ್ಲೌಡ್‌ ಲ್ಯಾಪ್‌ಟಾಪ್‌ (Cloud Laptop) ಬಿಡುಗಡೆ ಮಾಡಲು ಮುಂದಾಗಿದೆ. ಈ ವರ್ಷದ ಜುಲೈನಲ್ಲಿ 16,499 ರೂ.ಗೆ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿರುವ ಜಿಯೋ ಈಗ 15,000 ರೂ. ಬೆಲೆಯಲ್ಲಿ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಕ್ಲೌಡ್‌ ಲ್ಯಾಪ್‌ಟಾಪ್‌ ತಯಾರಿ ಸಂಬಂಧ ಹಾರ್ಡ್‌ವೇರ್‌ ದಿಗ್ಗಜ ಕಂಪನಿಗಳಾದ ಹೆಚ್‌ಪಿ, ಏಸರ್‌, ಲೆನೊವೊ ಜೊತೆ ಮಾತುಕತೆ ನಡೆಸುತ್ತಿದೆ. ಏನಿದು ಕ್ಲೌಡ್‌ ಲ್ಯಾಪ್‌ಟಾಪ್‌? ಲ್ಯಾಪ್‌ಟಾಪ್‌ನ ಬೆಲೆ ಅದರ ಹಾರ್ಡ್‌ವೇರ್‌ ಭಾಗಗಳಾದ ಮೆಮೊರಿ, ಪ್ರೊಸೆಸಿಂಗ್ ಪವರ್, ಚಿಪ್‌ಸೆಟ್, ಬ್ಯಾಟರಿ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ವೇರ್‌ ಬೇಕಾದರೆ ಬೆಲೆ ಹೆಚ್ಚಾಗುತ್ತದೆ. ಜಿಯೋ ಈಗ ಇವುಗಳ ಅವಲಂಬನೆ ಕಡಿಮೆ ಮಾಡಲು ಲ್ಯಾಪ್‌ಟಾಪ್‌ನ ಸಂಪೂರ್ಣ ಪ್ರಕ್ರಿಯೆ ಕ್ಲೌಡ್‌ನಲ್ಲೇ ನಡೆಸಲು ಮುಂದಾಗಿದೆ. ಕ್ಲೌಡ್-ಆಧಾರಿತ ಕಂಪ್ಯೂಟರ್‌ ಕೆಲಸ ಮಾಡಬೇಕಾದರೆ ಯಾವಾಗಲೂ ಲ್ಯಾಪ್‌ಟಾಪ್‌ಗೆ  ಇಂಟರ್ನೆಟ್ ಸಂಪರ್ಕದ ಇರಲೇಬೇಕು. ಆಫ್‌ಲೈನ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.

Read More

ದುಬೈ: ಕ್ರೀಡೆಯ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿಳಿಸಿದೆ. ಐಸಿಸಿ ಸಭೆಯಲ್ಲಿ (ICC Meeting) ಈ ನಿರ್ಧಾರ ಪ್ರಕಟಿಸಲಾಗಿದೆ. ಈ ನಿರ್ಧಾರವು ಮಹಿಳಾ ಕ್ರಿಕೆಟ್​​ನ ಸಾರವನ್ನು ರಕ್ಷಿಸುವ ಗುರಿ ಹೊಂದಿದೆ. ಆಟದ ಸಮಗ್ರತೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ಈ ನಿಯಮಗಳನ್ನ ಮಾಡಲಾಗಿದ್ದು,  2 ವರ್ಷಗಳಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಎಂಬುದಾಗಿ ತಿಳಿಸಿದೆ ಜನನದ ಸಮಯದಲ್ಲಿ ಪುರುಷನಾಗಿದ್ದು, ಪುರುಷನಾಗಿಯೇ ಪ್ರೌಢಾವಸ್ಥೆಗೆ ಒಳಗಾದ ವ್ಯಕ್ತಿ, ನಂತರದಲ್ಲಿ ಲಿಂಗ ಬದಲಾವಣೆ ಕಾರ್ಯವಿಧಾನಗಳಿಗೆ ಒಳಗಾಗಿದ್ದರೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​​ ತಂಡಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಐಸಿಸಿ ದೃಢೀಕರಿಸಿದೆ. 9 ತಿಂಗಳ ಸಮಾಲೋಚನೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಸೇರಿದಂತೆ ಐಸಿಸಿ ಮಂಡಳಿಯು ಈ ಲಿಂಗ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿತು.

Read More

ಕಳೆದ ಕೆಲವು ವರ್ಷಗಳಿಂದ ಭಾರತೀಯ ಕಾರು ಖರೀದಿದಾರರ ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಸಣ್ಣ ಮೈಕ್ರೋ ಎಸ್‌ಯುವಿಗಳೊಂದಿಗೆ ಈ ವಿಭಾಗವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ 1. ಟಾಟಾ ನೆಕ್ಸಾನ್‌ ಅಕ್ಟೋಬರ್‌ ತಿಂಗಳಲ್ಲಿ ಟಾಟಾ ನೆಕ್ಸಾನ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿಯಾಗಿ ಮೂಡಿಬಂದಿದೆ. ಈ ಅವಧಿಯಲ್ಲಿ ಸ್ವದೇಶಿ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್‌ನ ಈ ಕಾರು 16,887 ಯುನಿಟ್‌ ಮಾರಾಟವಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳೂ ಒಳಗೊಂಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಟಾಟಾ ನೆಕ್ಸಾನ್‌ನ ಮಾರಾಟ ಶೇ. 22.66ರಷ್ಟು ಏರಿಕೆ ಕಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನೆಕ್ಸಾನ್ ಶ್ರೇಣಿಯ ಪ್ರಮುಖ ಫೇಸ್‌ಲಿಫ್ಟ್‌ ಮಾದರಿ ಬಿಡುಗಡೆಯಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದು ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ. 2. ಮಾರುತಿ ಸುಜುಕಿ ಬ್ರೇಝಾ ಮಾರುತಿ ಸುಜುಕಿ ಬ್ರೆಝಾ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರು ಆಗಿದೆ. ಈವರೆಗೆ…

Read More

ಬೆಂಗಳೂರು :- ಜಾತಿಗಣತಿ ವರದಿ ವಿಚಾರ, ಇದು ರಾಜಕೀಯ ಪ್ರೇರಿತ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಚ್.ಕಾಂತರಾಜು ವರದಿ ಸಮಾಜದಲ್ಲಿ ಸಮಸ್ಯೆ ಬಗೆಹರಿಸುವುದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗಾಗಲಿ, ಕಾಂಗ್ರೆಸ್ ನವರಿಗಾಗಲಿ ದುರುದ್ದೇಶ ಇದೆ. ಇದರದಲ್ಲಿ ಸದುದ್ದೇಶ ಇದ್ದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತಿದ್ದರು ಎಂದು ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಗುಣಮಟ್ಟದ ಶಿಕ್ಷಣ, ಸೌಲಭ್ಯ ಇಲ್ಲ. ಯಾವುದೇ ಪ್ರಶ್ನೆಗಳಿಗೂ ಅವರ ಬಳಿ ಉತ್ತರ ಇಲ್ಲ. ಅಧಿಕಾರಕ್ಕೆ ಬಂದ ಬಳಿಕವಾದರೂ ಜನ ಕೊಟ್ಟ ಬೆಂಬಲಕ್ಕೆ ಕೆಲಸ‌ಮಾಡಬೇಕಿತ್ತು. ಆದರೆ, ಕಾಂತರಾಜು ವರದಿ ಕೇವಲ ಸಮೀಕ್ಷೆ ಅಂತಾರೆ. ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ ಅನ್ನುವ ಮಾತು ಕೇಳಿಬರುತ್ತಿದೆ. ಹಸ್ತಪ್ರತಿ ಇಲ್ಲ, ಕಾರ್ಯದರ್ಶಿ ಸಹಿ ಇಲ್ಲ ಅಂತಿದ್ದರೂ ಈಗ ವರದಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಅಂತಿದ್ದಾರೆ, ಬರೀ ಸ್ವಾರ್ಥ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ.…

Read More

ನವದೆಹಲಿ: ಭಾರತೀಯ ಮೂಲದ ತಮಿಳುನಾಡು ನಿವಾಸಿ ಮಹಿಳೆ ಕಲ್ಪನಾ ಬಾಲನ್ ಅವರು ವಿಶಿಷ್ಟ ಕಾರಣದಿಂದಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 26 ವರ್ಷ ವಯಸ್ಸಿನ ಕಲ್ಪನಾ ಅವರ ಬಾಯಿಯಲ್ಲಿ ಬರೋಬ್ಬರಿ 38 ಹಲ್ಲುಗಳಿವೆ. ಸಾಮಾನ್ಯವಾಗಿ ಮಾನವರ ಬಾಯಿಯಲ್ಲಿ 32 ಹಲ್ಲುಗಳು ಇರುತ್ತವೆ. ಆದರೆ, ಕಲ್ಪನಾ ಬಾಲನ್ ಅವರ ಬಾಯಿಯಲ್ಲಿ ಒಟ್ಟು 38 ಹಲ್ಲುಗಳು ಇದ್ದು, 6 ಹಲ್ಲುಗಳು ಹೆಚ್ಚುವರಿಯಾಗಿ ಇರುವ ಕಾರಣಕ್ಕೆ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. ಈ ಕುರಿತಾಗಿ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತಾಗಿ ಮಾಹಿತಿ ಪ್ರಕಟಿಸಿದೆ. ಕಲ್ಪನಾ ಬಾಲನ್ ಅವರ ಕೆಳ ದವಡೆಯಲ್ಲಿ ನಾಲ್ಕು ಹೆಚ್ಚುವರಿ ಹಲ್ಲುಗಳಿವೆ. ಇನ್ನು ಮೇಲು ದವಡೆಯಲ್ಲಿ 2 ಹೆಚ್ಚುವರಿ ಹಲ್ಲುಗಳು ಇವೆ. ಈ ಕುರಿತಾಗಿ ಸಚಿತ್ರ ಸಹಿತ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಮಾಹಿತಿ ನೀಡಲಾಗಿದೆ. ಕಲ್ಪನಾ ಬಾಲನ್ ಅವರು ಹದಿ ಹರೆಯಲ್ಲಿದ್ದಾಗ ಅವರ ಬಾಯಿಯಲ್ಲಿ ಹಾಲು ಹಲ್ಲುಗಳು ಉದುರಿದ ಬಳಿಕ ಬೆಳೆದ ಹೊಸ ಹಲ್ಲುಗಳ ಪೈಕಿ…

Read More

ಈ ಹಿಂದೆಂದೂ ಕಾಣದ ಬರ ಈ ಬಾರಿ ಬಂದಿದ್ದು ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿವೆ ಎಂದು ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿವೆ. ಈ ಕುರಿತಂತೆ ಸಭೆ ನಡೆಸಿದ ರೈತರು ರಾಜ್ಯದಲ್ಲಿರುವ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಿಡುಗಡೆ ಮಾಡಲಿ ಎಂದು ನೋಡುತ್ತಿದೆ. ಇವೆರಡರ ನಡುವೆ ರೈತನ ಸ್ಥಿತಿ ಬಿಗಡಾಯಿಸಿದೆ ಎಂದು ರೈತರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಜಿಲ್ಲೆಗಳಲ್ಲಿ ಹಾವೇರಿಯ ಸಹ ಒಂದು. ಇತ್ತ ಈ ವರ್ಷ ಪ್ರತಿಶತ 99ರಷ್ಟು ಬಿತ್ತನೆ ಮಾಡಿದ್ದ ಜಿಲ್ಲೆ ಸಹ ಹಾವೇರಿ. ಆದರೆ ಮಳೆರಾಯನ ಮುನಿಸು ರೈತನನ್ನು ಹೈರಾಣಾಗಿಸಿದೆ. ಸರ್ಕಾರ ಹಾವೇರಿ ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಆದರೆ ಬರಪೀಡಿತ…

Read More

ಸಕ್ಕರೆಯ ಅಂಶ ಇಲ್ಲದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ನಿಜ. ಆದರೆ ಆದರೆ ಇಂದು ಸಂಸ್ಕರಿಸಿದ ಸಕ್ಕರೆಗಳಿಂದ ತುಂಬಿದ ಸಂಸ್ಕರಿಸಿದ ಆಹಾರಗಳಲ್ಲಿ ಇರುವ ಸಕ್ಕರೆಯ ಪ್ರಮಾಣ ಆತಂಕಕಾರಿ. ಅಂದರೆ ನಾವೆಲ್ಲ ಬಹುಶಃ ನಮಗೆ ತಿಳಿದಿರುವುದಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ಆದ್ದರಿಂದ ನಮ್ಮ ಆಹಾರದಿಂದ ಅದನ್ನು ಗರಿಷ್ಠ ಪ್ರಮಾಣದಲ್ಲಿ ತೆಗೆದುಹಾಕುವುದು ಒಳ್ಳೆಯದು. ನೀವು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಇಲ್ಲಿದೆ ನೋಡಿ. ದೈಹಿಕ ಲಕ್ಷಣಗಳು: ದೇಹಕ್ಕೆ ಸಕ್ಕರೆ ಪೂರೈಕೆ ನಿಂತಾಗ ಅದು ಹಿಂತೆಗೆದುಕೊಳ್ಳುವ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಬಹುದು. ಈ “ಸಕ್ಕರೆ ಹಿಂತೆಗೆದುಕೊಳ್ಳುವಿಕೆ” ದೈಹಿಕ ಮತ್ತು ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು. ದೈಹಿಕ ಲಕ್ಷಣಗಳಲ್ಲಿ ನಿಶ್ಯಕ್ತಿ, ತಲೆನೋವು ಮತ್ತು ಜಠರಗರುಳಿನ ತೊಂದರೆಯೂ ಸೇರಿದೆ. ಬಲವಾದ ಮನಸ್ಸಿನೊತ್ತಡ ಅನುಭವಿಸುವ ಸಾಧ್ಯತೆಯಿದೆ. ಈ ಅಹಿತಕರ ಅನುಭವವು ಧೂಮಪಾನ ತ್ಯಜಿಸುವ ಆರಂಭಿಕ ದಿನಗಳಂತೆಯೇ ಹತಾಶೆ ಮತ್ತು ಕಿರಿಕಿರಿಯನ್ನೂ ಉಂಟುಮಾಡಬಹುದು. ಶಕ್ತಿಯ ಮಟ್ಟ ಸುಧಾರಿಸುತ್ತದೆ: ಸಾಮಾನ್ಯವಾಗಿ ಒಂದು ವಾರ ಹೀಗಾಗುತ್ತದೆ. ಅದರ ನಂತರ, ನಿಮ್ಮ ಶಕ್ತಿಯ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.…

Read More

ಬೆಂಗಳೂರು: ನಗರದ ವಿದ್ಯಾರಣ್ಯಪುರ ತಿಂಡ್ಲು ದುರ್ಗಾದೇವಿ ಬಡಾವಣೆಯಲ್ಲಿರುವ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ ಡಿಸೆಂಬರ್ 6 ರಿಂದ 17ರವರೆಗೆ 11 ದಿನಗಳ ಕಾಲ ಶ್ರೀ ವಿಶ್ವ ಮಹಾಕಾಳೀ ಯಾಗ ನಡೆಯಲಿದೆ. ವಿದ್ಯಾಭಿವೃದ್ಧಿ ವಶೀಕರಣ, ಸರ್ವ ವಶೀಕರಣ, ಸರ್ವ ಶತೃನಾಶ, ಸರ್ವರೋಗ ನಿವಾರಣ, ಸರ್ವ ಕಾರ್ಯವಿಜಯ, ಕುಲದೋಷ ನಿವಾರಣ, ಗ್ರಹದೋಷ ನಿವಾರಣ, ಸರ್ವ ಬಾಧೆಗಳ ನಿವಾರಣ, ಸರ್ಪದೋಷ ನಿವೃತ್ತಿ, ಸೌಭಾಗ್ಯದೋಷ ನಿವಾರಣ, ಪಿತೃ ದೋಷ ನಿವಾರಣ, ಸಂತಾನ ಪ್ರಾಪ್ತಿ, ಸ್ವಯಂವರ ಶಾಂತಿ, ಪಂಚಭೂತ ಶಾಂತಿ ಹಾಗೂ ಲೋಕಶಾಂತಿಗಾಗಿ ಈ ವಿಶ್ವ ಮಹಾಕಾಳಿ ಯಾಗವನ್ನು ಏರ್ಪಡಿಸಲಾಗಿದೆ. ಬದ್ರಿನಾಥ ಆಶ್ರಮದ ಕೇರಳ ತಾಂತ್ರಿಕ ಪ್ರಮುಖರು, ಯಾಗ ಗುರು ಶಾಂತಿದಾಸನ್ ಸ್ವಾಮೀಜಿ ಅವರು ವಿಶೇಷವಾಗಿ ಕಾಳಿ ಯಾಗ, ನವಕಾಳಿ ಹೋಮ, ಮಹಾ ಚಂಡಿಕಾ ಹೋಮ, ಮಹಾಲಕ್ಷ್ಮಿ ಹೋಮ, ಮಹಾ ಸರಸ್ವತಿ ಹೋಮ, ಮಹಾ ಸುದರ್ಶನ ಹೋಮ, ಮಹಾ ಗಾಯತ್ರಿ ಹೋಮ, ಮಹಾ ಅಗ್ನಿ ಹೋತ್ರ, ಅಘೋರ ಹೋಮ, ವೀರಭದ್ರ ಹೋಮ, ಮಹಾಗಣಪತಿ…

Read More