Author: AIN Author

ಸೂರ್ಯೋದಯ: 06.24 AM, ಸೂರ್ಯಾಸ್ತ : 05.51 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಪಾಡ್ಯ 02:05 PM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ರೋಹಿಣಿ 01:31 PM ತನಕ ನಂತರ ಮೃಗಶಿರ ಯೋಗ: ಇವತ್ತು ಸಿದ್ದಿ 10:04 PM ತನಕ ನಂತರ ಸಾಧ್ಯ ಕರಣ: ಇವತ್ತು ಬಾಲವ 02:21 AM ತನಕ ನಂತರ ಕೌಲವ 02:05 PM ತನಕ ನಂತರ ತೈತಲೆ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 10.20 AM to 11.56 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:41 ನಿಂದ ಮ.12:25 ವರೆಗೂ ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಮೇಷ ರಾಶಿ ಬೇರೊಬ್ಬರ ಕಷ್ಟಕ್ಕೆ ಧನಸಹಾಯ…

Read More

ಚಾಮರಾಜನಗರ :-ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ವಾಸಿ ಸ್ವಾತಿ(26) ಬಿನ್ ಸುರೇಶ್ ವರದಕ್ಷಿಣೆ ಕಿರಕುಳಕ್ಕೆ ಮೃತ ಪಟ್ಟಿರುವ ಗೃಹಿಣಿಯಾಗಿದ್ದಾಳೆ. ಸ್ವಾತಿಗೆ ಪತಿ ವಿನಯ್ ಹಾಗೂ ಅತ್ತೆ ನಂದಿನಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಹಾಗೂ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸೋಮವಾರ ಮದ್ಯಾಹ್ನ ದರ್ಶನ್ ಲೇಔಟಿನಲ್ಲಿರುವ ವಿನಯ್ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತ ದೇಹ ಪತ್ತೆಯಾಗಿದೆ. ಬೇಗೂರು ಗ್ರಾಮದ ಸೂರಿ ಮಂಜುಳ ದಂಪತಿಯ ಮುದ್ದಿನ ಮಗಳಾಗಿದ್ದ ಸ್ವಾತಿ ಶಿಕ್ಷಕಿಯಾಗಿದ್ದಳು ಈಗ್ಗೆ 8 ತಿಂಗಳ ಹಿಂದೆ ಹಂಗಳ ಮೂಲದ ವಿನಯ್ ಗೆ ಮದುವೆ ಮಾಡಿಕೊಡಲಾಗಿತ್ತು‌ ಮದುವೆ ನಂತರ ಸ್ವಾತಿಗೆ ಪ್ರತಿನಿತ್ಯ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ್ತಾ ಇದ್ದರು ಎಂದು ಮೃತ ಪೋಷಕರು ಆರೋಪಿಸಿ ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕೇಸು ದಾಖಲಾಗಿದೆ. ಮೃತ ದೇಹದ ಸಮೀಪ ಡೆತ್ ನೋಟ್ ಸಿಕ್ಕಿದ್ದು ಪೋಲೀಸರ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Read More

600ಕ್ಕೂ ಹೆಚ್ಚು ಚಿತ್ರದಲ್ಲಿ ವಿವಿಧ ಪಾತ್ರದಲ್ಲಿ ನಟಿಸಿದ ಹಿರಿಯ ಮೇರು ನಟಿ ಅವರು, ಈ ಇಳಿ ವಯಸ್ಸಿನಲ್ಲಿ ಸಹ ಗ್ರಾಮೀಣ ಪ್ರದೇಶದ ಬಡವರು ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾದ ಪ್ರೀತಿ, ತಾಯಿಯ ಆಸೆಗೆ ತಕ್ಕ ಮಗ ಶ್ರವಣ ಕುಮಾರನ ಹಾಗೆ ಪ್ರೀತಿಯಿಂದ ನೋಡಿಕೊಳ್ಳುತಿದ್ದಾರೆ. ಆರು ಆ ಮಹಾ ತಾಯಿ ಅಂತೀರ ಹಾಗಾದರೆ ಈ ಸ್ಟೋರಿ ನೋಡಿ.. ಕನ್ನಡ ಚಿತ್ರರಂಗದ ಹಿರಿಯ ಮೇರು ನಟಿ ಡಾ.ಎಂ.ಲೀಲಾವತಿ ಬೆಳ್ಳಿ ತೆರೆಯಿಂದ ಹಿಡಿದು ಕಲ್ಲರ್ ಪರದೆಯಲ್ಲಿ ವಿವಿಧ ಪಾತ್ರವನ್ನ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿ ಸಿನಿಮಾ ಜೊತೆಗೆ ಕೃಷಿಯನ್ನ ಮಾಡಿ ಜೀವನ ನಡೆಸಿದ ಲೀಲಾವತಿಯವರು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ 25 ವರ್ಷದಿಂದ ವಾಸವಾಗಿದ್ದಾರೆ. ಇನ್ನೂ ತಮ್ಮ ತೋಟದಲ್ಲಿ ವಿವಿಧ ಬಗೆಯ ಮಿಶ್ರ ತಳಿ ಮೂಲಕ ವ್ಯವಸಾಯವನ್ನ ತಮ್ಮ ಮಗ ವಿನೋದ್ ರಾಜ್ ಮ‌ೂಲಕ ಬೆಳೆಸಿದ್ದಾರೆ. ಇನ್ನೂ ಇತ್ತೀಚೆಗೆ ಅನಾರೋಗ್ಯದಿಂದ ಆಸಿಗೆ ಹಿಡಿದಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ತಾಯಿಯ…

Read More

ಬಳ್ಳಾರಿ:- ಜಿಲ್ಲೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಬರವೀಕ್ಷಣೆ ಕೈಗೊಂಡಿದ್ದಾರೆ. ಬಳ್ಳಾರಿಯ ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಿದ್ದಾರೆ. ಮಳೆಯಿಲ್ಲದ ಬೆಳೆ ಹಾನಿಯಾಗಿರೊ ಪ್ರದೇಶಗಳಿಗೆ ಭೇಟಿ ನೀಡಿ, ಆರ್‌.ಅಶೋಕ್ ಪರಿಶೀಲನೆ ಮಾಡಿದ್ದಾರೆ. ಬೆಳೆ ಹಾನಿಗೊಳಗಾದ ಜಮೀನಿನ ರೈತರ ಸಮಸ್ಯೆಯನ್ನು ಅಶೋಕ್ ಆಲಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬರ ಸಮೀಕ್ಷೆಯನ್ನು ನಿಯಮ ಪ್ರಕಾರ ಮಾಡಿಲ್ಲ, ರೈತರ ಜಮೀನಿಗೆ ಭೇಟಿ ನೀಡದೆ ಸಮೀಕ್ಷೆ ವರದಿ ತಯಾರಿಸಲಾಗಿದೆ. ರಾಜ್ಯ ಸರ್ಕಾರವು ಕೂಡ ಬರ ಪರಿಹಾರ ನೀಡದೇ ರೈತರನ್ನು ಸತಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರ್.ಅಶೋಕ್ ಹರಿಹಾಯ್ದಿದ್ದಾರೆ.

Read More

ಬಳ್ಳಾರಿ:- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೇಯ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ, ಪಡಿತರ ಅಕ್ಕಿಗೆ ನ್ಯಾಯ ಬೆಲೆಯ ಅಂಗಡಿಯ ಮಾಲೀಕರೆ ಕನ್ನ ಹಾಕಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೇ, ಇತ್ತ ಕಡೆ ಬಡವರಿಗೆ ತಲುಪುವ ಮಾರ್ಗದಲ್ಲಿಯೇ ಸೋರಿಕೆಯ ಮಾರ್ಗಗಳು ಬೆಳಕಿಗೆ ಬಂದಿವೆ.ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ….. • ನ್ಯಾಯ ಬೆಲೆ ಅಂಗಡಿಯ ಮಾಲೀಕರಿಂದಲೇ ಪಡಿತರದಾರರಿಗೆ ಮೋಸ, • ಕಣ್ಮುಚಿ ಕುಳಿತ ಆಹಾರ ಇಲಾಖೆಯ ಅಧಿಕಾರಿಗಳು, • ತಕ್ಕಡಿಯ ಅಳತೆಯಲ್ಲಿ ಗೋಲ್ ಮಾಲ್, • 5 ಕೆಜಿ ತುಕಕ್ಕೆ- 4 ಕೆಜಿ ಅಕ್ಕಿ ವಿತರಣೆ, • ಪಡಿತರದಾರರಿಂದ ತೀವ್ರ ವೀರೋಧ, ರಾಜ್ಯದ ಜನರು ಯಾರು ಸಹ ಹಸಿವುನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ಜಾರಿಗೆ ತಂದ ಈ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಳ್ಳಾರ ಕಾಟ ಹೆಚ್ಚಾಗಿದೆ. ಇಲ್ಲಿಯವರಗೆ ಕೇವಲ ಹೊರಗಿನ ಕಳ್ಳರನ್ನು ಮಾತ್ರ ನೋಡಿದ್ದು ಉಂಟು.ಆದರೆ ಗಣಿನಾಡು ಬಳ್ಳಾರಿ…

Read More

ಬೆಂಗಳೂರು:- ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ಮಾತನಾಡಿದ ಅವರು,ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ನ.28ರಿಂದ ಡಿ.1ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

Read More

ಬೆಂಗಳೂರು:- ಜನತಾದರ್ಶನದ ವೇಳೆ ಸ್ವೀಕಾರಗೊಂಡ ಅರ್ಜಿಗಳ ಇತ್ಯರ್ಥಕ್ಕೆ 15 ದಿನಗಳ ಗಡುವು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ; ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಸಹಿಸಲ್ಲ. ಜನತಾ ಸ್ಪಂದನ – ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗುವುದಿಲ್ಲ. ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ ಎಂದರು. ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್‌ ಠಾಣೆ, ಹಾಸ್ಟೆಲ್​ಗಳು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಬೇಕು. ಜನರ…

Read More

ಬೆಂಗಳೂರು: ಮಲೆನಾಡು ಗೆಳೆಯರ ಸಂಘದ ವತಿಯಿಂದ ಮಲೆನಾಡು ಮಹಿಳೆಯರ ಮಹಾಸಂಗಮ 2023 ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಭಾನುವಾರ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿತು. ಬೆಂಗಳೂರಿನ ದಾಸರಹಳ್ಳಿಯ ಸೌಂದರ್ಯ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಲೆನಾಡು ಗೆಳೆಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೋಸ್ಕರ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದರು. ಸುಮಾರು 15 ಕ್ಕಿಂತ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಈ ಕ್ರೀಡಾಕೂಟದಲ್ಲಿ ಮಲೆನಾಡು ಮಹಿಳೆಯರ ಸಂಘ ಮೊದಲನೆಯ ಬಹುಮಾನವನ್ನು ಪಡೆಯಿತು. ಅಲ್ಲದೆ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮಲೆನಾಡ ಸಾಂಸ್ಕೃತಿಕ ಕ್ರೀಡೆಯಾದ ಲಗೋರಿ, ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಜೊತೆಗೆ ಮಲೆನಾಡ ಸುಗ್ಗಿ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮದಲ್ಲೂ ಮಹಿಳೆಯರು ಅತಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ರು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತ ಮಲೆನಾಡ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಯಶಸ್ವಿಯಾಗೋದಕ್ಕೆ ಹಲವು ಗಣ್ಯರು ಕೂಡ…

Read More

ಬೆಂಗಳೂರು:- ಹೃದಯಾಘಾತದಿಂದ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ನ ಉಪಾಧ್ಯಕ್ಷ ಅಂಬಿಕಾಪತಿ ಅವರು ನಿಧನ ಹೊಂದಿದ್ದಾರೆ. ಐಟಿ ದಾಳಿಗೆ ಒಳಗಾದ ಬಳಿಕ ಸ್ವಲ್ಪ ಖಿನ್ನರಾಗಿದ್ದ ಅಂಬಿಕಾಪತಿ ಅವರು ಅದರ ಜತೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದರು. ಕಾವಲ್‌ ಭೈರಸಂದ್ರದಲ್ಲಿರುವ ಮನೆಯಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಸಂಜೆ 6.40ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಕ್ಟೋಬರ್‌ 13ರಂದು ಮಾನ್ಯತಾ ಟೆಕ್‌ ಪಾರ್ಕ್‌ನ ಅಂಬಿಕಾಪತಿ ಅವರ ಮನೆ ಮತ್ತು ಬೆಂಗಳೂರಿನ ಆರ್‌ಟಿ ನಗರ ಸಮೀಪದ ಸುಲ್ತಾನ್‌ ಪಾಳ್ಯದಲ್ಲಿರುವ ಆತ್ಮಾನಂದ ಕಾಲೊನಿಯ ಅಂಬಿಕಾಪತಿ ಪುತ್ರ ಪ್ರದೀಪ್‌ ಅವರ ಮನೆಗೆ ದಾಳಿ ಮಾಡಲಾಗಿತ್ತು. ಪ್ರದೀಪ್‌ ಅವರ ಮನೆಯಲ್ಲಿ 500 ರೂ.ಯನ್ನು 22 ಬಾಕ್ಸ್‌ಗಳಲ್ಲಿ ಜೋಡಿಸಿಟ್ಟ ಸ್ಥಿತಿಯಲ್ಲಿ 42 ಕೋಟಿ ರೂ. ಪತ್ತೆಯಾಗಿತ್ತು. ಇದು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಸೇರಿದ ಹಣ ಎಂದು ಆರೋಪ ಮಾಡಲಾಗಿತ್ತು. ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದಲ್ಲಿ ಪಡೆದ ಕಮಿಷನ್‌ ಹಣ ಇದಾಗಿದ್ದು, ಅದನ್ನು ತೆಲಂಗಾಣ ಚುನಾವಣೆಯಲ್ಲಿ…

Read More

ಮಸಾಲೆಯುಕ್ತ ಮೊಟ್ಟೆ ಮೆಣಸಿನಕಾಯಿ ಬೇಯಿಸಿದ ಮೊಟ್ಟೆಗಳೊಂದಿಗೆ ನಾವು ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಪಾಕವಿಧಾನಗಳಲ್ಲಿ ಒಂದಾಗಿದೆ. ಕೆಳಗೆ ಹೇಳಿದಂತೆ ಮಾಡುವ ಈ ಮೊಟ್ಟೆಯ ಮಸಾಲೆ ತುಂಬಾ ರುಚಿಕರವಾಗಿರುತ್ತದೆ. ಈ ರುಚಿಕರವಾದ ಮಸಾಲೆಯುಕ್ತ ಮೊಟ್ಟೆಯ ಪಲ್ಯವನ್ನು ಹೇಗೆ ತಯಾರಿಸುವುದು? ನಾವೀಗ ತಯಾರಿಕೆಗೆ ಬೇಕಾಗುವ ಪದಾರ್ಥಗಳ ಬಗ್ಗೆ ಕಲಿಯೋಣ. ಮಸಾಲೆಯುಕ್ತ ಮೊಟ್ಟೆ ಮೆಣಸಿನ ಪುಡಿ ತಯಾರಿಸಲು ಬೇಕಾಗುವ ಪದಾರ್ಥಗಳು. ಎಣ್ಣೆ- 1/2 ಕಪ್, ಬೇಯಿಸಿದ ಮೊಟ್ಟೆ- 4, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ- 2, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿನ ಪುಡಿ- 1/2 ಚಮಚ, ಜೀರಿಗೆ- 1/2 ಚಮಚ, ಕೊತ್ತಂಬರಿ ಸೊಪ್ಪು- 1/2 ಚಮಚ, ಕೊತ್ತಂಬರಿ ಸೊಪ್ಪು- 1/2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಉಪ್ಪು- ರುಚಿಗೆ ತಕ್ಕಷ್ಟು. ಮಸಾಲಾ ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು.. ಕೊತ್ತಂಬರಿ ಸೊಪ್ಪು – 2 ಚಮಚ, ದಾಲ್ಚಿನ್ನಿ – ಒಂದು ಇಂಚು ತುಂಡು, ಏಲಕ್ಕಿ – 4, ಸೋಂಪು ಹೂವು – 1, ಲವಂಗ – 6, ಬೆಳ್ಳುಳ್ಳಿ ಎಸಳು…

Read More