Author: AIN Author

ಕೋಲಾರ : ಜನವರಿ 15 ಬಂತಂದ್ರೆ ಸಾಕು, ಇಡೀ ದೇಶಕ್ಕೆ ದೇಶವೇ ಸಂಕ್ರಾಂತಿ ಸಂಭ್ರಮದಲ್ಲಿ ತೇಲುತ್ತೆ. ಆದರೆ, ಚಿನ್ನದ ನಾಡು ಕೋಲಾರ ಜಿಲ್ಲೆಯ ಆ ಹಳ್ಳಿಯೊಂದರಲ್ಲಿ ಮಾತ್ರ ಸಂಕ್ರಾಂತಿ ಆಚರಣೆ ಮಾಡಲ್ಲ. ಸಂಕ್ರಾಂತಿ ಅಂದ್ರೆ ಸಾಕು ಊರಿಗೇ ಊರೇ ಶಾಕ್ ಆಗುತ್ತೆ. ಇದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಎಂಬ ಗ್ರಾಮ. ಹೆಚ್ಚುಕಮ್ಮಿ ಜಿಲ್ಲಾಕೇಂದ್ರಕ್ಕೆ ಸಮೀಪವೇ ಇದೆ. ಈ ಊರಲ್ಲಿ ಹತ್ತತ್ತಿರ ಒಂದು ಸಾವಿರ ಮಂದಿ ವಾಸವಿದ್ದಾರೆ. ವಿದ್ಯಾವಂತರೂ ಇದ್ದಾರೆ, ನೌಕರಿಯಲ್ಲಿರೋರು ಇದ್ದಾರೆ. ಆದರೆ, ಅದ್ಯಾಕೋ ಈ ಊರಲ್ಲಿ ನಂಬಿಕೆನೋ ಮೂಢನಂಬಿಕೆನೋ ಗೊತ್ತಿಲ್ಲ. ಸಂಕ್ರಾಂತಿ ಮಾತ್ರ ನಿಷಿದ್ಧ. 500 ವರ್ಷಗಳ ಹಿಂದೆ ಈ ಊರಲ್ಲಿ ಅದ್ದೂರಿ ಸಂಕ್ರಾಂತಿ ಮಾಡಲಾಗಿತ್ತು. ಅದೊಂದು ವರ್ಷ ಊರಿಂದಾಚೆ ಹಾಕಿದ್ದ ಕಿಚ್ಚು ದಾಟಿಕೊಂಡು ಬರಬೇಕಿದ್ದ ಹಸುಗಳು ನಾಪತ್ತೆಯಾಗಿದ್ವು. ಅದರ ಮುಂದಿನ ವರ್ಷ ಸಂಕ್ರಾಂತಿ ಆಚರಿಸಿದಾಗ ದನ-ಕರುಗಳು ಕಾಯಿಲೆಯಿಂದ ಜೀವ ಬಿಟ್ಟಿದ್ವಂತೆ. ಊರವರು ಇನ್ಮುಂದೆ ಸಂಕ್ರಾಂತಿ ಬದಲು ಬಸವಜಯಂತಿ ದಿನ ದನಗಳ ಹಬ್ಬ ಮಾಡ್ತೀವಿ ಅಂತ ಹರಕೆ ಹೊತ್ತರಂತೆ. ಆಗ…

Read More

ಅಯೋಧ್ಯೆ: ಜನವರಿ 22ರಂದು ಭಗವಾನ್ ರಾಮ ನಮಗೆಲ್ಲರಿಗೂ ದರ್ಶನವನ್ನು ನೀಡಲಿದ್ದಾನೆ. ಅಯೋಧ್ಯೆಯ ರಾಮ ಮಂದಿರದ (Ayodhya RamMandir) ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ (Pran Prathistha Ceremony)  ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಫಲಾನುಭವಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಇಂದು ಮಾತನಾಡುತ್ತಾ ಈ ರೀತಿಯಾಗಿ ಹೇಳಿದ್ದಾರೆ. ಇನ್ನೇನು ಕೆಲವು ದಿನಗಳ ನಂತರ ಅಂದರೆ ಜನವರಿ 22 ರಂದು ಭಗವಾನ್ ರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ನಮಗೆ ದರ್ಶನವನ್ನು ನೀಡುತ್ತಾನೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ನಾನು 11 ದಿನಗಳ ವಿಶೇಷ ಅನುಷ್ಠಾನವನ್ನು ಪ್ರಾರಂಭಿಸಿದ್ದೇನೆ. ಮಾತಾ ಶಬರಿ ಇಲ್ಲದೆ ಭಗವಾನ್ ರಾಮನ ಕಥೆ ಅಪೂರ್ಣ ಎಂದು ಪ್ರಧಾನಿ ತಿಳಿಸಿದರು. ಕಳೆದ ವಾರವಷ್ಟೇ ಮೋದಿಯವರು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ರಾಮಮಂದಿರ ಉದ್ಘಾಟನೆಗೆ…

Read More

ಬಾಲಿವುಡ್ (Bollywood) ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಅಯೋಧ್ಯೆಯಲ್ಲಿ (Ayodhya) ಮನೆ ಹೊಂದಲು ನಿರ್ಧರಿಸಿದ್ದಾರೆ. ಹಾಗಾಗಿಯೇ ಅವರು ಅಯೋಧ್ಯೆಯಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಮುಂಬೈ ಮೂಲದ ಡೆವಲಪರ್‍ ಕಂಪೆನಿಯಿಂದ ಈ ನಿವೇಶನ ಖರೀದಿ ಮಾಡಿದ್ದು, ನಿವೇಶನದ ಮೌಲ್ಯ 14.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಪಡೆದ್ದ ಅಮಿತಾಭ್, ಇದೀಗ ರಾಮನೂರಿನಲ್ಲೇ ಮನೆ ಮಾಡಲು ನಿರ್ಧಾರ ಮಾಡಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ರಾಮ ನಿಮ್ಮನ್ನು ಕಾಪಾಡಲಿ ಎಂದು ಶುಭ ಕೋರಿದ್ದಾರೆ. ಅಂದಹಾಗೆ ಈ ನಿವೇಶನವು ಹತ್ತು ಸಾವಿರ ಚದರ ಅಡಿ ಅಳತೆಯನ್ನು ಹೊಂದಿದ್ದು, ವಿಮಾನ ನಿಲ್ದಾಣದಿಂದ 30 ನಿಮಿಷ ದೂರವಿದೆಯಂತೆ. ಈ ಕುರಿತಂತೆ ಅಮಿತಾಭ್ ಪ್ರತಿಕ್ರಿಯೆ ಕೂಡ ಮಾಡಿದ್ದಾರೆ.

Read More

ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಚಾಟಿ ಬೀಸಿದರು. ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಗೆ ಏಕವಚನದಲ್ಲಿ ಮಾತನಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಸಂಸದರಾಗಿ, ಮಾಜಿ ಮಂತ್ರಿಯಾಗಿ ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರೆಯೇ..? ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ..? ಸಂಸ್ಕೃತಿ ಎಂದರೆ ಮನುಷ್ಯತ್ವ, ಮೊದಲು ಮನುಷ್ಯತ್ವ ಇರಬೇಕು ಎಂದು ಛೇಡಿಸಿದರು.

Read More

ಬೆಂಗಳೂರು : ದೆಹಲಿಗೆ ಹೋಗಿದ್ದೆ, ಹಿರಿಯ ನಾಯಕರ ಭೇಟಿ ಮಾಡಿ ಬಂದೆ‌. ರಾಜ್ಯಸಭೆ ಕೇಳಿದ್ದೇನೆ, ಮಗನಿಗೆ ಏನೂ ಕೇಳಿಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರ ಕುಟುಂಬ ಬಡವರಾಗಿ ಉಳಿಯಬಾರದು ಅಂತ ಕೆಲಸ ಮಾಡಿದ್ದೆ. ಅದು ಬೇರೆ ರೀತಿ ನೆರವಾಗುತ್ತೆ ಅನ್ನೋದು ದೆಹಲಿ ಪ್ರವಾಸದಲ್ಲಿ ಕಂಡುಬಂತು ಎಂದು ತಿಳಿಸಿದರು. ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾರನ್ನು ಭೇಟಿ ಮಾಡಿದೆ‌. ಅವರ ಅಂತರಾಳದ ಮಾತು ಕೇಳಿದೆ. ರಾಷ್ಟ್ರೀಯ ನಾಯಕರ ಅಂತರಾಳದಲ್ಲಿ ಇಷ್ಟು ಒಳ್ಳೆಯ ಮನಸ್ಸಿದೆ ಅನ್ನೋದು ತಿಳೀತು. ರಾಷ್ಟ್ರಕ್ಕೆ ಮೋದಿ ಅವರ ಅವಶ್ಯಕತೆ ಇದೆ. ಕೆಲಸ ಮಾಡಿ ಮುಂದೆ ತೀರ್ಮಾನ ಮಾಡ್ತೀವಿ ಅಂದಿದ್ದಾರೆ ಎಂದು ಹೇಳಿದರು. 28 ಲೋಕಸಭಾ ಕ್ಷೇತ್ರದಲ್ಲಿನ ಎಲ್ಲಾ ವಿವರ ನೀಡಿದೆ. 28 ಕ್ಷೇತ್ರದ ಬಗ್ಗೆ ಹೇಳ್ತಿದ್ದಂತೆ ನಿಮಗೆ ಏನಾಗಬೇಕು ಅಂತ ಕೇಳಿದ್ರು. ನಾನು ರಾಜ್ಯಸಭೆ ಕೇಳಿದೆ. ನಾನು 5ರಿಂದ 10 ನಿಮಿಷ ಚರ್ಚೆಗೆ ಅವಕಾಶ ಕೇಳಿದೆ. ಅವರು ಅರ್ಧ…

Read More

ಬೆಂಗಳೂರು: ರಾಜ್ಯದ ಜಲಾಶಯಗಳ (Karnataka Dam) ನೀರಿನ ಮಟ್ಟ ಭಾರೀ ಕುಸಿತಗೊಂಡಿದ್ದು, ಮಳೆ (Rain) ಬಾರದೇ ಇದ್ದರೆ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗುವುದು (Water Scarcity) ಖಚಿತ. ಹೌದು ಕಳೆದ ಬಾರಿ ಹೋಲಿಕೆ ಮಾಡಿದರೆ ಜಲಾಶಯಗಳ ನೀರಿನ ಮಟ್ಟ 42% ಕುಸಿತಗೊಂಡಿದೆ. ಕಳೆದ ವರ್ಷದ ಜ.11 ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹಾಗೂ ಈ ವರ್ಷದ ನೀರಿನ ಮಟ್ಟದ ಹೋಲಿಕೆ ಮಾಡಿ ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ (KSNDMC) ದಾಖಲೆ ಬಿಡುಗಡೆ ಮಾಡಿದೆ. ಒಟ್ಟು 895 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ರಾಜ್ಯದ ಜಲಾಶಯಗಳಿಗಿದೆ. ಸದ್ಯ ಈಗ 378 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬರೋಬ್ಬರಿ 619 ಟಿಎಂಸಿ ನೀರಿನ ಸಂಗ್ರಹವಿತ್ತು. ಕೆಲವೊಂದು ಜಲಾಶಯಗಳು 69% ರಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದೆ. ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ 95.19 ಟಿಎಂಸಿ ನೀರಿದ್ದರೆ ಈ ಬಾರಿ 52.98 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಎಆರ್‌ಎಸ್‌ನಲ್ಲಿ…

Read More

ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ   ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಆಗಬಹುದು,ಯಾವ ಗಳಿಗೆಯಲ್ಲಿ ಆಗಬಹುದು ಇನ್ನ ಮುಂದಕ್ಕೆ ಹೋಗುವ ಸಾಧ್ಯತೆಯಿಲ್ಲ ಆಗಬಹುದು,ಆಗುತ್ತದೆ ಇಲ್ಲವಾದರೆ ಸಂಜೆ ನಿಮ್ಮ ಜೊತೆ ಮಾತನಾಡ್ತೇನೆ ಎಂದರು. ಹಾಗೆ ಇದೇ ತಿಂಗಳ 21 ರಂದು ಕಾರ್ಯಕರ್ತರ ಸಮಾವೇಶ ನಡೆಯಲಿದೆ  ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಲೋಕಸಭೆ ಚುನಾವಣೆ ಸಂಬಂದಿಸಿದಂತೆ ಸಭೆ ಜನವರಿ 19 ರಂದು ಎಲೆಕ್ಷನ್ ಕಮಿಟಿ ಮೀಟಿಂಗ್ ಇದೆ ಅಂದು ಸಂಜೆ ಸಭೆ ನಡೆಯಲಿದೆ ಻ಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅವರ ಮುಖಂಡರೇ ಹೆಲ್ತ್ ಬಗ್ಗೆ ಅಂತ ಹೇಳ್ತಿದ್ದಾರೆ ಅವರ ಹೆಲ್ತ್ ಬಗ್ಗೆ ಅವರು ಗಮನ ಕೊಡಲಿ ಅವರ ಮುಖಂಡರೇ ಹೇಳ್ತಿರೋದು ಸಂತೋಷ ಎಂದು ಹೇಳಿದರು.

Read More

ಕಲಬುರಗಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಡಿಸಿ ಗೈರಾದ ಹಿನ್ನಲೆ ಭೋವಿ ಸಮಾಜ ತೀವ್ರ ಆಕ್ರೋಶ ಹೊರಹಾಕಿ ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಪಂಡಿತ್ ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ DC ಫೌಜಿಯಾ ತರನ್ನುಮ್, ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ಗೈರಾಗಿದ್ರು. ಮಧ್ಯಾನ 12 ಗಂಟೆಗೆ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ 1 ಗಂಟೆಯಾದರೂ ಸಮಾರಂಭಕ್ಕೆ ಅಧಿಕಾರಿಗಳು ಬಂದಿರಲಿಲ್ಲ ಹೀಗಾಗಿ ಮಠಾಧೀಶರು ಸಮಾಜದ ಬಾಂಧವರು ಕಾರ್ಯಕ್ರಮ ಬಹಿಷ್ಕಿರಿಸಿ ದಿಡೀರ್ ಪ್ರತಿಭಟನೆ ಮಾಡಿದ್ರು.ಮಾತ್ರವಲ್ಲ ರಸ್ತೆತಡೆ ನಡೆಸಿದ್ರು. ಕೊನೆಗೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಎಲ್ಲರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮಾಡಿದ್ರು..

Read More

ಶಿವಮೊಗ್ಗ: ಸಿದ್ದರಾಮಯ್ಯನವರು ನಿಮಿಷಕ್ಕೊಂದು ಮಾತನಾಡ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ, ರಾಮ ಎರಡೂ ಇದೆ. ನೀವೇಕೆ ಬಿಜೆಪಿ ರಾಮಮಂದಿರ ಅಂತ ಅಂದುಕೊಳ್ತೀರಾ? ರಾಮಮಂದಿರಕ್ಕೆ ಹೋಗಿ ನಿಮ್ಮ ಪಾಪ ತೊಳೆದುಕೊಂಡು ಬನ್ನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa), ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅನಂತಕುಮಾರ್ ಹೇಳಿರೋದ್ರಲ್ಲಿ ತಪ್ಪಿಲ್ಲ. ಏಕೆಂದರೆ ಮಂಡ್ಯದ ಶ್ರೀರಂಗಪಟ್ಟಣ, ಕಾರವಾರ ಜಿಲ್ಲೆಯಲ್ಲಿ ದೇವಸ್ಥಾನ ಒಡೆದು ಮಸೀದಿ (Mosque) ಕಟ್ಟಿದ್ದಾರೆ. ಇದನ್ನು ಎಲ್ಲಾ ಭಾರತೀಯರು ಸ್ವಾಗತ ಮಾಡಬೇಕಾ? ಎಂದು ಪ್ರಶ್ನಿಸಿದ್ದಾರೆ.  https://ainlivenews.com/rowdysheeter-arrested-by-kylie-machi-and-shouting-at-a-woman/ ಸಿದ್ದರಾಮಯ್ಯ ಅವರು ಮೋದಿ (Modi) ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಒಮ್ಮೆ ಅಯೋಧ್ಯೆಗೆ ಹೋಗಲ್ಲ ಅಂದಿದ್ದರು. ಈಗ ಜ.22ರ ನಂತರ ಹೋಗ್ತೀನಿ ಅಂತಾರೆ. ನಿಮಿಷಕ್ಕೊಂದು ಮಾತನಾಡ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ ರಾಮ ಎರಡೂ ಇದೆ, ರಾಮ ಮಂದಿರಕ್ಕೆ ಹೋಗಿ ನಿಮ್ಮ ಪಾಪ ಕಳೆದುಕೊಂಡು ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ.

Read More

ಬೆಂಗಳೂರು:  ನಗರದ ಮನೆಯೊಂದರಲ್ಲಿ‌ ಅಗ್ನಿ ಅವಘಡ ಕಾಣಿಸಿಕೊಂಡಿರುವ ಘಟನೆ ಆರ್.ಟಿ.ನಗರದಲ್ಲಿ ನಡೆದಿದೆ.  ಎರಡನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡ ಆಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮನವಾಗಿದ್ದು  ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ  ತೌಸಿಫ್ ಎಂಬುವವರಿಗೆ ಸೇರಿದ ಮನೆಯಾಗಿದ್ದು ವಾಷಿಂಗ್ ಮಷಿನ್,ಟಿವಿ,ಫ್ರಿಡ್ಜ್ ಸೇರಿ ಎಲ್ಲಾ ವಸ್ತು ಸುಟ್ಟು ಕರಕಲುವಾಗಿದೆ ಹಾಗೆ  ಮನೆಯಲ್ಲಿದ್ದ ವಸ್ತು ಸಂಪೂರ್ಣ ಸುಟ್ಟು ಕರಕಲು  ಈ ವೇಳೆ ಮನೆಯಲ್ಲಿ ಸಿಲುಕಿದ್ದ ಇಬ್ನರು ಮಕ್ಕಳ ರಕ್ಷಣೆ ಮಾಡಿದ ಸಿಬ್ಬಂದಿ!

Read More