ಕಾರವಾರ:- ಭಟ್ಕಳದಲ್ಲಿ ಮುಂದುವರಿದ ಹಿಂದೂ ಮುಸ್ಲಿಂ ಸಂಘರ್ಷ ಮುಂದುವರಿದಿದ್ದು, ಹಿಂದೂ ಕಾರ್ಯಕರ್ತರಿಗೆ ದುಬೈನಿಂದ ಬೆದರಿಕೆ ಹಾಕಲಾಗಿದೆ. ಭಟ್ಕಳದ ದೇವಿ ನಗರ ಎಂಬ ಹೆಸರಿನ ನಾಮಫಲಕ ತೆರವು ಗೊಳಿಸಲು ಮದರಸಾದ ಗುರುಗಳಿಂದ ಒತ್ತಡದ ಹಿನ್ನಲೆಯಲ್ಲಿ ನಾಮಫಲಕ ತೆರವುಗೊಳಿಸಲಾಗಿದೆ. ಇದರಿಂದ ಕುಪಿತಾರ ಹಿಂದೂ ಕಾರ್ಯಕರ್ತರು, ಅನಧಿಕೃತ ಮಸೀದಿ ತೆರವಿಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ್ದಕ್ಕೆ ದುಬೈನಿಂದ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗಿದೆ. ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ಹಿಂದೂ ದೇವರ ಹೆಸರಿನಲ್ಲಿ ಇರುವ ದೇವಿ ನಗರ ಎಂಬ ಹೆಸರಿನ ನಾಮಫಲಕವನ್ನು ತೆರವು ಗೊಳಿಸಲು ಮದರಸಾದ ಗುರುಗಳಿಂದ ಒತ್ತಡ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ನಾಮಫಲಕ ತೆರವುಗೊಳಿಸಲಾಗಿದೆ. ನಾಮಫಲಕ ತೆರವಿಗೆ ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಜಾಲಿ ಪಟ್ಟಣದಲ್ಲಿರುವ ಅನಧಿಕೃತ ಮಸೀದಿ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾದ ಹರೀಶ, ದೇಯಾ ಹಾಗೂ ಮಹೇಶ ಎಂಬವರಿಗೆ ದುಬೈನಿಂದ ವಿಡಿಯೋ ಮೂಲಕ ಬೆದರಿಕೆ ಹಾಕಲಾಗಿದೆ. ಭಟ್ಕಳದ ಜಾಲಿಯಲ್ಲಿ ಗುರುಗಳನ್ನು ಮುಟ್ಟಿದರೇ…
Author: AIN Author
ಹೈದರಾಬಾದ್: ಜನವರಿ 22ರಂದು ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠೆಗಾಗಿ ದೇಶ ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಪ್ರತಿದಿನ ಒಂದೊಂದು ಕೆಜಿ ಲಡ್ಡುವನ್ನು ಮೀಸಲಿಟ್ಟು, ಶ್ರೀರಾಮನ ನೈವೇದ್ಯಕ್ಕಾಗಿ 1,265 ಕೆ.ಜಿ ತೂಕದ ವಿಶೇಷ ಲಡ್ಡು (Speical Laddu) ತಯಾರಿಸಿದ್ದಾರೆ. ಹೈದರಾಬಾದ್ ಮೂಲದ ವ್ಯಕ್ತಿ ನಾಗಭೂಷಣ ರೆಡ್ಡಿ ಎಂಬವರು ಜ.22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ನೈವೇದ್ಯಕ್ಕಾಗಿ 1,265 ಕೆಜಿ ತೂಕದ ಲಡ್ಡು ತಯಾರಿಸಿದ್ದು, ರಾಮಮಂದಿರಕ್ಕೆ ಅರ್ಪಿಸಲಿದ್ದಾರೆ. ಇದರೊಂದಿಗೆ ಸಹೋದರ ಲಕ್ಷ್ಮಣ, ಪತ್ನಿ ಸೀತಾ, ಭಂಟ ಹನುಮಾನ್ ಹೆಸರಿನ ಲಡ್ಡುಗಳನ್ನೂ ತಯಾರಿಸಲಾಗಿದೆ ಈ ಮೂಲಕ ಶ್ರೀರಾಮ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. https://twitter.com/ANI/status/1747457449131741390?ref_src=twsrc%5Etfw%7Ctwcamp%5Etweetembed%7Ctwterm%5E1747457449131741390%7Ctwgr%5E60a533129d103160c7a9f18fc8511e3fae9d7117%7Ctwcon%5Es1_&ref_url=https%3A%2F%2Fpublictv.in%2Fhyderabad-man-prepares-speical-laddu-weighing-1265-kg-to-ram-temple%2F ದುಶಾಸನ್ ಎಂಬ ಸ್ವೀಟ್ ಮಾಸ್ಟರ್ ಈ ಲಡ್ಡುವನ್ನು ತಯಾರಿಸಿದ್ದಾರೆ. ಜೊತೆಗೆ ಸುಮಾರು 30 ಜನರ 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಈ ವಿಶೇಷ ಲಡ್ಡು ತಯಾರಿಸಿದ್ದಾರೆ, ಇದನ್ನ ಜೋಡಿಸಲು 4 ಗಂಟೆ ತೆಗೆದುಕೊಂಡಿದ್ದಾರೆ ಎಂದು ನಾಗಭೂಷಣರೆಡ್ಡಿ ತಿಳಿಸಿದರು. ಈ ಕುರಿತು ಮಾತನಾಡಿರುವ ನಾಗಭೂಷಣ್ ರೆಡ್ಡಿ, 2000ನೇ ಇಸವಿಯಿಂದ…
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಪತಿಯ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಪತಿಯೊಂದಿಗೆ ಲಿಪ್ ಲಾಕ್ ಮಾಡಿಕೊಂಡು ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ತಮ್ಮ ಹುಟ್ಟುಹಬ್ಬವನ್ನು ಪತಿ ಸಿದ್ಧಾರ್ಥ್ (Siddarth Malhotra) ಜೊತೆ ಥೈಲ್ಯಾಂಡ್ನಲ್ಲಿ ಆಚರಿಸಿಕೊಂಡಿದ್ದವರು, ಪತಿಯ ಹುಟ್ಟು ಹಬ್ಬವನ್ನು ಸಿಂಪಲ್ ಆಗಿ ಆಚರಿಸಿದ್ದಾರೆ. ಲಿಪ್ ಲಾಕ್ ಕಾರಣದಿಂದಾಗಿ ಸುದ್ದಿ ಆಗಿದ್ದಾರೆ. ಈ ನಡುವೆ ವೈಯಕ್ತಿಕ ಕಾರಣದಿಂದಾಗಿಯೂ ಕಿಯಾರಾ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಾನಾ ರೀತಿಯ ಉತ್ತರಗಳನ್ನೂ ಅವರು ಕೊಡ್ತಾರೆ. ಮದುವೆಯಾದ್ಮೇಲೆ ಸಿದ್ಧಾರ್ಥ್ಗಾಗಿ ತಯಾರಿಸಿದ ಮೊದಲ ಅಡುಗೆ ಯಾವುದು? ಎಂಬ ಪ್ರಶ್ನೆಗೆ ಅಚ್ಚರಿಯ ಹೇಳಿಕೆಯನ್ನ ನಟಿ ನೀಡಿದ್ದಾರೆ. ಮದುವೆ ಆದ ಬಳಿಕ ನೀವು ಮಾಡಿದ ಮೊದಲ ತಿನಿಸು ಯಾವುದು ಎಂದು ಕಿಯಾರಾಗೆ ಕೇಳಲಾಯಿತು. ಇದಕ್ಕೆ ಕಿಯಾರಾ ಅವರು ಉತ್ತರಿಸಿದ್ದಾರೆ. ಇಲ್ಲಿಯವರೆಗೆ ನಾನು ಏನನ್ನೂ ಮಾಡಿಲ್ಲ. ಬಹುಶಃ ನೀರನ್ನು ಬಿಸಿ ಮಾಡಿರಬಹುದು ಅಷ್ಟೇ. ನನ್ನ ಪತಿಗೆ ಅಡುಗೆ ಮಾಡುವುದು ಎಂದರೆ ಇಷ್ಟ. ಅವರು ಯಾವಾಗಲೂ ಏನಾದರೂ ಮಾಡುತ್ತಲೇ…
ನೀರು ನಮ್ಮ ದೇಹದಲ್ಲಿ ಶೇ.70ರಷ್ಟಿದೆ ಎಂದು ವೈಜ್ಞಾನಿಕವಾಗಿಯೂ ಹೇಳಲಾಗಿದೆ. ಹೀಗಾಗಿ ನಾವು ನೀರನ್ನು ಹೆಚ್ಚು ಸೇವನೆ ಮಾಡಬೇಕು. ಹೀಗೆ ಮಾಡಿದರೆ ಅದರಿಂದ ದೇಹದ ಆರೋಗ್ಯವು ಚೆನ್ನಾಗಿರುತ್ತದೆ. ಬಾಯಾರಿಕೆ ಆದ ಕೂಡಲೇ ಹೋಗಿ ನೀರು ಕುಡಿಯುತ್ತೇವೆ. ಯಾಕೆಂದರೆ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುತ್ತಿದೆ ಎಂದು ಬಾಯಾರಿಕೆಯು ಸೂಚಿಸುತ್ತದೆ. ಹೀಗಾಗಿ ನೀರು ನಮ್ಮ ದೈನಂದಿನ ಬದುಕಿನಲ್ಲಿ ಬೇಕಾಗುವಂತಹ ಪ್ರಮುಖ ದ್ರವ. ನೀರು ಯಾವಾಗ ಕುಡಿಯಬೇಕು ಮತ್ತು ಹೇಗೆ ಕುಡಿಯಬೇಕು ಎನ್ನುವ ಬಗ್ಗೆ ಹಲವಾರ ವಾದಗಳು ನಡೆಯುತ್ತಲೇ ಇದೆ. ಆದರೆ ಕೆಲವರು ಮಲಗುವ ಮೊದಲು ಒಂದು ಲೋಟ ನೀರು ಕುಡಿದು ಮಲಗುವರು. ಇದು ಸರಿಯಾದ ಕ್ರಮವೇ ಎನ್ನುವ ಪ್ರಶ್ನೆಗಳಿವೆ. ಇಲ್ಲಿ ಮಲಗುವ ಮೊದಲು ನೀರು ಕುಡಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ರಾತ್ರಿ ಕುಡಿಯುವ ನೀರು ನಿಮ್ಮನ್ನು ಸಂತೋಷವಾಗಿರಿಸುತ್ತದೆ. ಮಲಗುವ ಮುನ್ನ ನೀರು ಕುಡಿಯದ ಜನರಿಗಿಂತ ರಾತ್ರಿಯಲ್ಲಿ ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೀಕರಿಸಿದ ಜನರು ಬೆಳಿಗ್ಗೆ ಹೆಚ್ಚು ಶಾಂತ ಮತ್ತು ಖುಷಿಯಿಂದ ಇರುತ್ತಾರೆ…
ಭಾರತದ ಚದುರಂಗ ಚತುರ ರಮೇಶ್ ಬಾಬು ಪ್ರಜ್ಞಾನಂದ ಅವರು ಜನವರಿ 16 ( ಮಂಗಳವಾರ) ರಂದು ಇತಿಹಾಸ ಸೃಷ್ಟಿಸಿದ್ದಾರೆ. ನೆದರ್ಲೆಂಡ್ ನ ವಿಜ್ಕ್ ಆನ್ ಝೀ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ ಅವರನ್ನು ಮಣಿಸಿ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್ ಆಟಗಾರನನ್ನು ಮಣಿಸಿದ 2ನೇ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಹಾಲಿ ಚಾಂಪಿಯನ್ ಡಿಂಗ್ ಲಿರಿನ್ ವಿರುದ್ಧ ನಡೆದ 2023ರ ಚೆಸ್ ಟೂರ್ನಿಯ 4ನೇ ಮಾಸ್ಟರ್ಸ್ ಸುತ್ತಿನಲ್ಲಿ ಲಿರಿನ್ (2780 ಅಂಕ) ರಿಂದ ಕ್ಲಾಸಿಕ್ ರೇಟ್ ನಲ್ಲಿ ಪ್ರಜ್ಞಾನಂದ (2743) ಸೋಲು ಕಂಡಿದ್ದರು. ಆದರೆ ಇಂದಿನ ಗೆಲುವು ಸಂತಸ ಮೂಡಿಸಿದೆ ಎಂದು ಹೇಳಿದ್ದಾರೆ. “ಆರಂಭದಲ್ಲಿ ನಾನು ಪಂದ್ಯವನ್ನು ಸುಲಭವಾಗಿ ಸಮಬಲಗೊಳಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ಪಂದ್ಯ ಸಾಗುತ್ತಿದ್ದಂತೆ ಎದುರಾಳಿ ಆಟಗಾರ ತಪ್ಪು ಹೆಜ್ಜೆ ಇಟ್ಟಿದ್ದಾರೆ ಎಂದು ನನಗೆ ಅನಿಸಿತು. ನಂತರ ನಾನು ದಾಳವನ್ನು ಮುನ್ನಡೆಸುವಾಗ ಪಂದ್ಯದಲ್ಲಿ ನಾನು ಹಿಡಿತ…
ಬೆಂಗಳೂರು:- ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚೆಕ್ ಬೌನ್ಸ್ ಕೇಸ್ ನಲ್ಲಿ ಮಾಜಿ ಬಿಜೆಪಿ ಶಾಸಕ ಸುನಿಲ್ ಹೆಗ್ಡೆಗೆ ಶಿಕ್ಷೆ ವಿಧಿಸಿದೆ. 60 ಲಕ್ಷದ 10 ಸಾವಿರ ರೂಪಾಯಿ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಅವರು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸದಿದ್ದರೆ 1 ವರ್ಷ ಸೆರೆವಾಸ ಅನುಭವಿಸಲು ಆದೇಶಿಸಿದೆ. ಇನ್ನು ದಂಡದ ಹಣದಲ್ಲಿ 60 ಲಕ್ಷ ರೂಪಾಯಿ ಹಣ ದೂರುದಾರರಿಗೆ ಪರಿಹಾರವಾಗಿ ನೀಡಲು ಕೋರ್ಟ್ ಸೂಚಿಸಿದ್ದು, ಇನ್ನುಳಿದ 10 ಸಾವಿರ ರೂಪಾಯಿ ಸರ್ಕಾರಕ್ಕೆ ದಂಡವಾಗಿ ನೀಡಲು ಹೇಳಿದೆ. ಇನ್ನೂ ಕಾಳಿ ಇಂಡೇನ್ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದ ಸುನಿಲ್ ಹೆಗ್ಡೆ, 40 ಲಕ್ಷ ರೂ. ಸಾಲ ಮರುಪಾವತಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಸುಂದರೇಶ್ ಎಂಬುವರು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು.
ಬೆಂಗಳೂರು:- 6 ನಾಯಿಮರಿಗಳ ಸಾವಿಗೆ ಕಾರಣ ಆರೋಪ ಹೊತ್ತ ವೃದ್ಧೆಗೆ ದಂಡ ಹೆಚ್ಚಿಸಲು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ ಮಹಿಳೆಯ ಮನೆ ಮುಂದೆ ಬೀದಿನಾಯಿ 8 ಮರಿ ಹಾಕಿತ್ತು. ನಾಯಿಗಳ ಶಬ್ದ ಸಹಿಸದೇ ಮಹಿಳೆ ಮರಿಗಳನ್ನು ಬೇರೆಡೆ ಬಿಟ್ಟಿದ್ದರು. ತಾಯಿಯಿಂದ ದೂರವಾದ ನಾಯಿಮರಿಗಳು ಆಹಾರವಿಲ್ಲದೇ ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಪೊನ್ನಮ್ಮ ವಿರುದ್ಧ ಪ್ರಾಣಿ ಕಲ್ಯಾಣ ಅಧಿಕಾರಿ ಹೆಚ್.ಬಿ.ಹರೀಶ್ ಕೇಸ್ ದಾಖಲಿಸಿದ್ದರು. ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡ ಮಹಿಳೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 1 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಿತ್ತು. ಶಿಕ್ಷೆ ಹೆಚ್ಚಳ ಕೋರಿ ದೂರುದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗೆ ದಂಡ ಹೆಚ್ಚಳಕ್ಕೆ ನ್ಯಾಯಮೂರ್ತಿ ಜೆ.ಎಂ.ಖಾಜಿ ನಕಾರವೆತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು:- ಹೃದಯಾಘಾತ ಹಿನ್ನೆಲೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಜ್ಞ ವೈದ್ಯರಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವೈದ್ಯರು ಶಾಸಕರಿಗೆ ಆಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ಮುಂದುವರೆಸಿದ್ದಾರೆ.
ಬಾಹ್ಯಾಕಾಶದಲ್ಲಿ ಎಂಟು ತಿಂಗಳ ಹಿಂದೆ ಕಳೆದುಹೋಗಿದ್ದ ಎರಡು ಟೊಮೆಟೊಗಳು ಮತ್ತೆ ಸಿಕ್ಕಿವೆ ಎಂದು ನಾಸಾ ಹೇಳಿದೆ. ಗಗನಯಾತ್ರಿ ಫ್ರಾಂಕ್ ರುಬಿಯೊ ಅವರ ಬಳಿಯಿದ್ದ ಈ ಎರಡು ಟೊಮೆಟೊಗಳು ಎಂಟು ತಿಂಗಳ ಹಿಂದೆ ಕಾಣೆಯಾಗಿದ್ದವು. 2022 ರಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸಿದ ಇಎಕ್ಸ್ಪೋಸ್ಡ್ ರೂಟ್ ಆನ್-ಆರ್ಬಿಟ್ ಟೆಸ್ಟ್ ಸಿಸ್ಟಮ್ ಪ್ರಯೋಗದ ಭಾಗವಾಗಿ ಟೊಮೆಟೊಗಳನ್ನು ಕೊಯ್ಲು ಮಾಡುವಾಗ ಈ ಎರಡು ಟೊಮೆಟೊಗಳು ಆಕಸ್ಮಿಕವಾಗಿ ಕಳೆದು ಹೋಗಿದ್ದವು ಎಂದು ನಾಸಾ ಎಕ್ಸ್ನಲ್ಲಿ ತಿಳಿಸಿದೆ. ಈ ಘಟನೆಯು NASA ದಲ್ಲಿ ಒಂದು ಹಾಸ್ಯ ಅನುಭವವಾಗಿ ಮಾರ್ಪಟ್ಟಿತು, ರುಬಿಯೊ ತಿಂಗಳುಗಳ ಕಾಲ “ಟೊಮೆಟೋವನ್ನು ತಿಂದ” ಎಂದು ತಮಾಷೆಯಾಗಿ ಆತನನ್ನು ದೂಷಿಸಿದರು. ಗಗನಯಾತ್ರಿಗಳು ಸೆಪ್ಟೆಂಬರ್ನಲ್ಲಿ ISS ಲೈವ್ಸ್ಟ್ರೀಮ್ನಲ್ಲಿ ಕಾಣೆಯಾದ ಟೊಮೆಟೊವನ್ನು ಸಾರ್ವಜನಿಕವಾಗಿ ಚರ್ಚಿಸಿದರು, ಅಲ್ಲಿ ರೂಬಿಯೊ ಹಾಸ್ಯಮಯವಾಗಿ “ನನ್ನ ದಿನದ 18 ರಿಂದ 20 ಗಂಟೆಗಳ ಕಾಲ ಅದನ್ನು ಹುಡುಕುತ್ತಿದ್ದೇನೆ” ಎಂದು ಉಲ್ಲೇಖಿಸಿದರು. ಆರು ಬೆಡ್ರೂಮ್ಗಳ ಮನೆಗೆ ಸಮಾನವಾದ ವಿಶಾಲವಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಣ್ಣ ವಸ್ತುವನ್ನು ಪತ್ತೆಹಚ್ಚುವ ಸವಾಲುಗಳನ್ನು ಒಪ್ಪಿಕೊಳ್ಳಲಾಯಿತು.…
ಹುಬ್ಬಳ್ಳಿ:ಕುರಿಗಾಹಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ದರ್ಪ ತೋರಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಅರಣ್ಯ ವೃತ್ತದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಬೀರಪ್ಪನ ಬಳಿ ಸೂಳಿಕಟ್ಟಿ ಫಾರೆಸ್ಟ್ ಗಾರ್ಡ್ ಆನಂದ ಹಾಗೂ ಇಲಾಖೆಯ ಮತ್ತೋರ್ವ ಸಿಬ್ಬಂದಿ ಲಂಚ ಕೇಳಿದ್ದಾರೆ. ಹಣ ಇಲ್ಲವೆ, ಕುರಿ ಕೊಡುವಂತೆ ಫಾರೆಸ್ಟ್ ಗಾರ್ಡ್ ಆನಂದ ಒತ್ತಾಯಿಸಿದ್ದಾನೆ. ಮಾಮೂಲಿ ಕೊಡದೆ ಅರಣ್ಯದಲ್ಲಿ ಕುರಿ ಮೇಯಿಸಿದರೇ ಒದ್ದು ಬಿಡುತ್ತೇನೆ. ಗೌಳಿಗರು ಅರಣ್ಯ ಅಧಿಕಾರಿಗಳಿಗೆ ಕೋಳಿ, ಹುಂಜ, ಹಣ ಕೊಡುತ್ತಾರೆ. ಕುರುಬರು ಹಣ ಕೊಡಬೇಕು, ಇಲ್ದಿದಿದ್ದರೇ ಕೇಸ್ ಹಾಕಿ ಜೈಲಿಗೆ ಕಳಿಸುತ್ತೇವೆ ಅಂತಾ ಅವಾಜ್ ಹಾಕಿದ್ದಾರೆ. ಆನಂದ ಹಾಗೂ ಸಹಚರನ ವರ್ತನೆ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.