ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ (IPL 2024 Auction) ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಬರೋಬ್ಬರಿ 20.50 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮಾರಾಟದೊಂದಿಗೆ ಐಪಿಎಲ್ ಆಕ್ಷನ್ ಇತಿಹಾಸದಲ್ಲಿ ಮಿಚೆಲ್ ಸ್ಟಾರ್ಕ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಸ್ಟಾರ್ಕ್ ಹೆಸರು ಹರಾಜಿನಲ್ಲಿ ಬರುವ ಮುನ್ನ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ 20.5 ಕೋಟಿ ರೂ. ನೀಡಿ ಖರೀದಿಸಿತ್ತು. ಈ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಕೆಲವೇ ಸಮಯಗಳಲ್ಲಿ ನುಚ್ಚು ನೂರು ಮಾಡಿದರು. ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಆಟಗಾರರ ಟಾಪ್ 10 ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಐಪಿಎಲ್ ಇತಿಹಾಸದ 10 ದುಬಾರಿ ಆಟಗಾರರು 01. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 24.75 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್) (2024) 02. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ) – 20.50 ಕೋಟಿ (ಸನ್ ರೈಸರ್ಸ್ ಹೈದರಾಬಾದ್) (2024) 03.…
Author: AIN Author
ಈಗ ಸರ್ವ ಕಾಲದಲ್ಲೂ ಬೆಳೆಯುವ ಹೈಬ್ರಿಡ್ ಬಿತ್ತನೆ ಬೀಜಗಳು ಬಂದಿದ್ದು, ಬರ ನಿರೋಧಕ ಅವರೆ ಬೆಳೆಯಲು ರೈತರು ಮುಂದಾಗಿದ್ದಾರೆ. ಅದರಲ್ಲೂ ಮಳೆ ಕಡಿಮೆಯಾದ ಕಾರಣ ಅಡಕೆ ತೋಟಗಳ ಒಳಗೆ ಬಿಸಿಲು ನಿಯಂತ್ರಿಸಲು ಹಸಿರು ಹೊದಿಕೆಯಾಗಿ ಅವರೆ ಹಾಕಲು ಮುಂದಾಗಿದ್ದು, ಈ ಬಿತ್ತನೆ ಬೀಜಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ರೈತರು ಬರ ಎದುರಿಸಲು ತಮ್ಮದೇ ದಾರಿ ಕಂಡುಕೊಳ್ಳುತ್ತಿದ್ದಾರೆ. ಮುಂಗಾರಲ್ಲಿ ಮುಖ್ಯ ಬೆಳೆ ಕಳೆದುಕೊಂಡ ರೈತ ಎದೆಗುಂದಿಲ್ಲ, ಹಿಂಗಾರಲ್ಲೂ ಮಳೆ ಕೈ ಕೊಟ್ಟಿದ್ದರಿಂದ ಬರ ನಿರೋಧಕ ಬೆಳೆಗಳತ್ತ ಗಮನ ಹರಿಸಿದ್ದಾರೆ. ಈಗಾಗಲೇ ಕಡಲೆ, ಅಲಸಂದೆ ಬಿತ್ತನೆ ಮಾಡಿರುವ ರೈತರು ಈಗ ಮತ್ತೊಂದು ಬರ ನಿರೋಧಕ ಬೆಳೆಯಾದ ಅವರೆ ಬೆಳೆಯುತ್ತಿದ್ದಾರೆ. ಜಗಳೂರು, ಮಾಯಕೊಂಡ ಸೇರಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಲೆ ಜತೆ ಈಗ ಅವರೆ ಬೆಳೆಯಲು ರೈತರು ಮುಂದಾಗಿದ್ದಾರೆ. ಅವರೆ ಸೀಸನ್ ಬೆಳೆ ಮಾತ್ರವಾಗಿರದೆ ಕಾಲಾತೀತವಾಗಿದೆ. ವರ್ಷ ಪೂರ್ಣ ಬೆಳೆಯುವಂತಹ ಬಿತ್ತನೆ ಬೀಜಗಳು ಬಂದಿದ್ದು, ಬಿತ್ತನೆ ಬೀಜಕ್ಕೆ ಡಿಮ್ಯಾಂಡ್ ಬಂದಿದೆ. ಸಾಮಾನ್ಯವಾಗಿ ದಾವಣಗೆರೆ ಜಿಲ್ಲೆಯಲ್ಲಿಅವರೆ ಕೃಷಿ ಇಲ್ಲ, ಇದ್ದರೂ…
ಕುಳ್ಳಗಿರುವವರು ಕ್ಯೂಟ್ ಆಗಿರುತ್ತಾರೆ ಎಂಬ ಮಾತಿದೆ. ಆದರೆ ಅವರ ಕಷ್ಟ ಅವರಿಗಲ್ಲದೇ ಬೇರಾರಿಗೂ ಅರ್ಥವಾಗದು. ಆದರೆ, ಆ ಎತ್ತರಕ್ಕೆ ತಕ್ಕಂತೆ ಉಡುಪು (Dress) ಧರಿಸಿದರೆ, ಅಂತಹವರು ನಿಜವಾಗಿಯೂ ಮುದ್ದಾಗಿಯೇ ಕಾಣುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಕುಳ್ಳಗಿರುವರಿಗೆ ಎಂತಹ ಬಟ್ಟೆ ಸೂಕ್ತವಾಗುತ್ತದೆ ಎಂಬುದು ತಿಳಿದಿರಬೇಕು ಅವರು ಧರಿಸುವ ಉಡುಪು ಅವರನ್ನು ತುಸು ಎತ್ತರವಾಗಿ ಕಾಣುವಂತೆ ಮಾಡಬೇಕೇ ಹೊರತು, ಮತ್ತಷ್ಟು ಕುಳ್ಳಕ್ಕೆ ಅಲ್ಲ. ಆದ್ದರಿಂದ ಅಂತಹವರು ಎಂತಹ ಸ್ಟೈಲ್ ಬಟ್ಟೆ ಧರಿಸಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ. ಇದರಿಂದ ನೀವು ಮತ್ತಷ್ಟು ಸುಂದರವಾಗಿ ಮತ್ತು ಕ್ಲ್ಯಾಸಿಯಾಗಿ ಕಾಣಿಸಿಕೊಳ್ಳಬಹುದಾಗಿದೆ. 1. ಬ್ಲಾಕ್ ಜೀನ್ಸ್: ಸಾಮಾನ್ಯವಾಗಿ ಜೀನ್ಸ್ ಹಾಕುವ ಯುವತಿಯರ ಬಳಿ ಕಪ್ಪು ಜೀನ್ಸ್ ಇದ್ದೇ ಇರುತ್ತೆ. ಆದರೆ ಅವು ವಿಶೇಷವಾಗಿ ಕುಳ್ಳಕ್ಕೆ ಇರುವ ಯುವತಿಯರಿಗೆ ಹೆಚ್ಚು ಸೂಕ್ತವಾಗಿವೆ. ಏಕೆಂದರೆ, ಇವುಗಳನ್ನು ಹೈ ಹೀಲ್ಸ್ ಜೊತೆ ಧರಿಸುವುದರಿಂದ ನಿಮ್ಮ ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತವೆ. ಅಷ್ಟೇ ಅಲ್ಲ, ನಿಮ್ಮ ಕಾಲುಗಳಿಗೆ ಒಂದೊಳ್ಳೆ ಶೇಪ್ ನೀಡುವಂತಹ ಒಂದು ಉಡುಪಾಗಿದೆ. ಇದು…
ಕಲಬುರಗಿ: ಲಾರಿ-ಜೀಪ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಫಜಲಪುರ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು ಮೃತರೆಲ್ಲ ಮಾಡ್ಯಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಸಂತೋಷ್ ಶಂಕರ್ ಸಿದ್ದಮ್ಮ ಮತ್ತು ಹುಚ್ಚಪ್ಪ ಮೃತ ದುರ್ದೈವಿಗಳು.30 ವರ್ಷದ ಪೂಜಾ ಸ್ತಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಲ್ಲಾಬಾದ್ ಕಡೆಗೆ ಹೊರಟಿದ್ದ ಜೀಪ್ ಗೆ ಕಲಬುರಗಿ ಕಡೆಯಿಂದ ಬರ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.. ಅಫಜಲಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಕ್ನೋ: 10 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ಕಾನ್ಸ್ಟೇಬಲ್ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಈ ವೇಳೆ ಪೊಲೀಸ್ ಅಧಿಕಾರಿಗಳು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಮನೆಗೆ ಬಿಡುವ ನೆಪದಲ್ಲಿ ವ್ಯಕ್ತಿ ಮತ್ತು ಆತನ ಸಹಚರರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ತಾಯಿ ನೀಡಿದ ದೂರಿನ ಪ್ರಕಾರ, ಹುಡುಗಿ ಗಾಜಿಯಾಬಾದ್ನ ಲೋನಿಯಲ್ಲಿರುವ ತನ್ನ ಮನೆಗೆ ಮದುವೆಯ ಮೆರವಣಿಗೆ ವೀಕ್ಷಿಸಲು ಹೋಗಿದ್ದಳು. ಇಬ್ಬರು ಪುರುಷರು ತಮ್ಮ ಕಾರಿನಲ್ಲಿ ಅವಳನ್ನು ಮನೆಗೆ ಬಿಡುವುದಾಗಿ ಹೇಳಿದರು. ನಂತರ ನಜೀಮ್ ಮತ್ತು ಜಾಕೀರ್ ಎಂದು ಗುರುತಿಸಲಾದ ವ್ಯಕ್ತಿಗಳು ಚಲಿಸುತ್ತಿದ್ದ ವಾಹನದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. https://ainlivenews.com/if-the-scar-on-your-face-is-ruining-you-then-look-here-its-the-best/ ಸಂತ್ರಸ್ತೆ ತಾಯಿ ಮಂಗಳವಾರ ದೂರು ದಾಖಲಿಸಿದ್ದಾರೆ. ನಾವು ಗುರುವಾರ ನಜೀಮ್ ಮತ್ತು ಜಾಕೀರ್ (58) ಎಂಬಿಬ್ಬರನ್ನು ಬಂಧಿಸಿದ್ದೇವೆ. ನಾವು ಅಪರಾಧದ ಸ್ಥಳಕ್ಕೆ ನಾಜಿಮ್…
ಚಳಿಗಾಲ ಬಂತಂದ್ರೆ ಸಾಕು ಆರೋಗ್ಯ ಸಮಸ್ಯೆ ನಮ್ಮನ್ನು ಬಿಟ್ಟುಬಿಡದಂತೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಕೆಮ್ಮು ಮತ್ತು ಗಂಟಲು ನೋವು. ಅತಿ ಹೆಚ್ಚು.ಆದರೆ,ಈ ಸಮಸ್ಯೆ ನಿವಾರಣೆಗೆ ವೈದ್ಯರ ಬಳಿಯೇ ಹೋಗಬೇಕೆಂದಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಗ್ರಿಗಳನ್ನು ಬಳಸಿ ಔಷಧಿ ತಯಾರಿಸಿ ಕುಡಿದರೆ ಕೆಮ್ಮು, ಗಂಟಲು ನೋವು ಬೇಗ ಕಡಿಮೆಯಾಗುತ್ತದೆ. ಅರಿಶಿಣ ಉರಿಯೂತ ವಿರೋಧಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಅರಿಶಿನದಲ್ಲಿರುವುದರಿಂದ ಪ್ರತಿನಿತ್ಯ ನೀವು ಸೇವಿಸುವ ಟೀ ಗೆ ಅರಿಶಿನ ಸೇರಿಸಿ ಕುದಿಸಿ ಕುಡಿಯಿರಿ. ಅರಿಶಿನ ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಮೂಲಕ ಚಳಿಗಾಲದಲ್ಲಿ ಉಂಟಾಗುವ ಕೆಮ್ಮು, ಗಂಟಲು ನೋವು ಸಮಸ್ಯೆಗಳನ್ನು ನಿವಾರಿಸುತ್ತದೆ. ಶುಂಠಿ ಚಳಿಗಾಲದಲ್ಲಿ ಶುಂಠಿ ಚಹಾ ಎಂದರೆ ಎಲ್ಲರಿಗೂ ಪ್ರಿಯ. ಸಾಧಾರಣ ಟೀ ಪುಡಿ ಜೊತೆ ಹಾಲಿಗೆ ಶುಂಠಿ ಜಜ್ಜಿ ಹಾಕಿ, ಕುದಿಸಿದರೆ ಮಸಾಲೆ ಚಹಾ ಅಥವಾ ಶುಂಠಿ ಚಹಾ ಸಿದ್ಧವಾಗುತ್ತದೆ. ಆ್ಯಂಟಿ ಆ್ಯಕ್ಸಿಡೆಂಟ್ ಅಂಶವಿರುವ ಶುಂಠಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಮ್ಮು, ಕಫ, ಗಂಟಲಲ್ಲಿ ಕಿರಿಕಿರಿ…
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡ ದಿನದಿಂದಲೂ ಬಲಿಷ್ಠ ತಂಡವಾಗಿದ್ದರೂ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ರೀತಿ ಟ್ರೋಫಿ ಜಯಿಸದ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2023ರ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳಿಂದ 7 ಗೆಲುವು ಮತ್ತು ಅಷ್ಟೇ ಸೋಲು ಕಂಡು ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ ಅಲಂಕರಿಸಿತ್ತು. 2024ರ ಐಪಿಎಲ್ ಟೂರ್ನಿ ಮಿನಿ ಹರಾಜಿಗೆ ಆರ್ಸಿಬಿ ಫ್ರಾಂಚೈಸಿ ಹರ್ಷಲ್ ಪಟೇಲ್, ವಾನಿಂದು ಹಸರಂಗ, ಜಾಶ್ ಹೇಝಲ್ವುಡ್, ಡೇವಿಡ್ ವಿಲ್ಲಿ ಸೇರಿದಂತೆ 11 ಆಟಗಾರರನ್ನು ಬಿಡುಗಡೆಗೊಳಿಸಿತ್ತು. ಆದರೆ ಮಿನಿ ಹರಾಜಿನಲ್ಲಿ ಸರಿಯಾದ ತಂತ್ರ ಬಳಸದೆ ಕೇವಲ 6 ಆಟಗಾರರನ್ನು ಮಾತ್ರ ಖರೀದಿಸಿದೆ ಎಂದು ಜಿಯೋ ಸಿನಿಮಾ ಜೊತೆ ನಡೆಸಿದ ಸಂವಾದದಲ್ಲಿ ಅನಿಲ್ ಕುಂಬ್ಳೆ ಹೇಳಿದ್ದಾರೆ. “ಮಿನಿ ಹರಾಜಿನಲ್ಲಿ ರೇಟಿಂಗ್ ಆಧಾರದ ಮೇಲೆ ಆರ್ಸಿಬಿ ಫ್ರಾಂಚೈಸಿ ಕ್ರಮವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು 7ಕ್ಕಿಂತ ಕಡಿಮೆ ಆಟಗಾರರನ್ನು ಖರೀದಿಸುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಏಕೆಂದರೆ ನೀವು ಮಿನಿ ಆಕ್ಷನ್ನಲ್ಲಿ ತಾವು ಈ…
2023 ವರ್ಷ ಹಲವು ತಾರೆಯರಿಗೆ ಸೂಪರ್ ಸ್ಪೆಷಲ್. ಯಾಕಂದ್ರೆ, ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ವರ್ಷ. ಅದರಲ್ಲೂ ಸ್ಯಾಂಡಲ್ವುಡ್ನ ಹಲವು ಸ್ಟಾರ್ಗಳು 2023ರಲ್ಲೇ ವಿವಾಹ ಬಂಧನಕ್ಕೆ ಒಳಗಾದರು. ಅಭಿಷೇಕ್ ಅಂಬರೀಶ್ – ಅವಿವಾ ಬಿದಪ್ಪ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರ ಮದುವೆ ಅವಿವಾ ಬಿದಪ್ಪ ಜೊತೆ ನಡೆಯಿತು. ಅಭಿಷೇಕ್ – ಅವಿವಾ ವಿವಾಹಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಅಪಾರ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಪೂಜಾ ಗಾಂಧಿ ವೆಡ್ಸ್ ವಿಜಯ್ ಘೋರ್ಪಡೆ ಮುಂಗಾರು ಮಳೆ’ ಸಿನಿಮಾ ಖ್ಯಾತಿಯ ಪೂಜಾ ಗಾಂಧಿ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಉದ್ಯಮಿ ವಿಜಯ್ ಘೋರ್ಪಡೆ ಅವರನ್ನ ಪೂಜಾ ಗಾಂಧಿ ಮದುವೆಯಾದರು. ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯ ಅನುಸಾರ, ಪೂಜಾ ಗಾಂಧಿ – ವಿಜಯ್ ಘೋರ್ಪಡೆ ವಿವಾಹ ಸರಳವಾಗಿ ಜರುಗಿತು. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಂಜನಾ, ಸುಧಾರಾಣಿ ಮುಂತಾದ ತಾರೆಯರು ಮದುವೆಗೆ ಸಾಕ್ಷಿಯಾಗಿದ್ದರು. ಶಿಷ್ಯ’…
ವಾಟ್ಸಾಪ್ ಕೋಟ್ಯಂತರ ಜನ ಬಳಸುವ ಅಪ್ಲಿಕೇಷನ್. ಇದು ಸಂವಹನವನ್ನು ಸರಳವಾಗಿಸಿದೆ. ಹೀಗಾಗಿ ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸ್ಟೋರೇಜ್ ಹಾಗೂ ಗ್ಯಾಲರಿ ತುಂಬುದರಿಂದ ಫೋನ್ನ ಕಾರ್ಯಕ್ಷಮತೆ ನಿಧಾನವಾಗುತ್ತದೆ. ಜೊತೆಗೆ ಅನಗತ್ಯ ಸಂಗ್ರಹಣೆ ಕೂಡಾ ಹೆಚ್ಚಾಗಬಹುದು. ನೀವು ಕೂಡಾ ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರಬಹುದು, ಇದಕ್ಕೇನು ಪರಿಹಾರ ಎಂದು ಚಿಂತಿಸುತ್ತಿರಬಹುದು. ಹಾಗಾದ್ರೆ ಇಲ್ಲಿದೆ ಟಿಪ್ಸ್ ಹೇಳುತ್ತೇವೆ ಕೇಳಿ. ಹೆಚ್ಚಿನ ಆಯ್ಕೆಗಾಗಿ ಮೇಲೆ ಕಾಣುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಸೆಟ್ಟಿಂಗ್ಸ್ಗೆ ಹೋಗಿ ಬಳಿಕ ಚಾಟ್ಸ್ಗಳಿಗೆ ಹೋಗಿ. ಇದಾದ ಬಳಿಕ ಮೀಡಿಯಾ ವಿಸಿಬಿಲಿಟಿಯನ್ನು ಆಫ್ ಮಾಡಿ. ನೆನಪಿಡಿ. ಈ ಸೆಟ್ಟಿಂಗ್ ಬದಲಾವಣೆಯ ಬಳಿಕ ಡೌನ್ಲೋಡ್ ಮಾಡಿದ ಹೊಸ ಮೀಡಿಯಾ ಫೈಲ್ಗಳ ಮೇಲೆ ಮಾತ್ರ ಇದು ಪರಿಣಾಮ ಬೀರುತ್ತದೆ. ಈಗಾಗಲೇ ಡೌನ್ಲೋಡ್ ಆದ ಮೀಡಿಯಾ ಫೈಲ್ಗಳಿಗೆ ಇದು ಅನ್ವಯಿಸುವುದಿಲ್ಲ. ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ. ಸೆಟ್ಟಿಂಗ್ಸ್ಗೆ ಹೋಗಿ ಬಳಿಕ ಚಾಟ್ಸ್ಗೆ ಹೋಗಿ ಇಲ್ಲಿ ಮೀಡಿಯಾ ವಿಸಿಬಿಲಿಟಿ ಆಯ್ಕೆಯನ್ನು ಆಫ್ ಮಾಡಿ ಇದು ನಿಮ್ಮ ವಾಟ್ಸಾಪ್ನ ಎಲ್ಲಾ…
ಬಾಲಿವುಡ್ ನ ಹೆಸರಾಂತ ನಟಿ ಕಂಗನಾ ರಣಾವತ್ ರಾಜಕಾರಣಕ್ಕೆ ಬರುವ ವಿಚಾರ ಹಲವು ತಿಂಗಳಿಂದ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಅವರು 2024 ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಚರ್ಚೆಗೂ ಕಾರಣವಾಗಿದೆ. ನಿಜವಾಗಿಯೂ ಕಂಗನಾ ಚುನಾವಣೆಗೆ ನಿಲ್ತಾರಾ? ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತಾ ಎನ್ನುವ ಕುತೂಹಲ ಮೂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡುವ ಮೂಲಕ ಕಂಗನಾ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಕಂಗನಾ ಅವರ ತಂದೆಯೂ ಮಗಳ ರಾಜಕೀಯ ಭವಿಷ್ಯ ಕುರಿತಂತೆ ಮಾತನಾಡಿದ್ದರು. ತಂದೆ ಅಮರ್ದೀಪ್ ರನೌತ್ ರಾಜಕಾರಣದ ಬಗ್ಗೆ ಮಾತನಾಡಿ, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಈ ಕುರಿತಂತೆ ನಡ್ಡಾ ಜೊತೆ ಕಂಗನಾ ಮಾತನಾಡಿದ್ದಾರೆ. ನಟಿ ಕಂಗನಾ ರಣಾವತ್, ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಾರಾ? ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ (Elections) ಭಾಗಿ ಆಗ್ತಾರಾ…