ಬಾಗಲಕೋಟೆ: “ಜೆಡಿಎಸ್ ನಾಯಕರು ಪ್ರಧಾನ ಮಂತ್ರಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಭೇಟಿ ಮಾಡಿ ಬಂದಿದ್ದಾರೆ. ವಿಜಯೇಂದ್ರ ಎಲ್ಲ ಹಿರಿಯರನ್ನ ವಿಶ್ವಾಸ ತಗೆದುಕೊಂಡು ಯಾವ ಗೊಂದಲವಿಲ್ಲದೇ ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಆಶಿರ್ವಾದ ಸಿಕ್ಕಿದೆ” ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. https://ainlivenews.com/cet-exam-on-april-20-21-application-submission-starts-from-january-10/ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡುತ್ತಾ, “ಕುಮಾರಸ್ವಾಮಿ ಅವರು, ಮೋದಿಯವರನ್ನು ಪ್ರಧಾನಿ ಮಾಡಲು, ರಾಜ್ಯದ ತುಂಬ ಓಡಾಡಿ ಕೆಲಸ ಮಾಡ್ತೇವೆ ಅಂತಾ ಹೇಳಿದ್ದಾರೆ. ಇದರ ಜೊತೆಗೆ ನನ್ನ ಮಗ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ದಿಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆ ಸಂತೋಷ ತಂದಿದ್ದು, ರಾಷ್ಟ್ರೀಯ ನಾಯಕರ ಭೇಟಿ ನಮಗೆ ಖುಷಿಯಾಗಿದೆ” ಎಂದರು.
Author: AIN Author
ವಿಜಯಪುರ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಿರುದ್ಧ ಯತ್ನಾಳ್, “ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ. https://ainlivenews.com/cet-exam-on-april-20-21-application-submission-starts-from-january-10/ ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿ ಅನ್ನೋದನ್ನ ಮರೀಬೇಡಿ. ಅಕಸ್ಮಾತ್ ಅವರಿಗೆ ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ’’ ಎಂದು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಮನದ ಮಾತುಗಳನ್ನು ಹೊರಹಾಕಿದರು.
ಕಲಘಟಗಿ: ಕೆಲ ದಿನಗಳಿಂದ ಕಲಘಟಗಿ ತಾಲೂಕಿನ ಬಿ ಶಿಗ್ಗಿಗಟ್ಟಿ ಗ್ರಾಮದ ಗ್ರಾಮಸ್ಥರಿಗೆ 63 KVA TC ಪದೇ ಪದೇ ಸುಟ್ಟು ತುಂಬಾ ತೊಂದರೆ ಉಂಟಾಗುತಿತ್ತು. ಆದ ಕಾರಣ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳು ಎಲ್ಲರೂ ಮಾನ್ಯ ಶ್ರೀ ಸಂತೋಷ ಲಾಡ್ ಸಾಹೇಬರಿಗೆ ಮನವಿ ಮಾಡಿದ್ದರು. ಕೂಡಲೇ ಸಾಹೇಬರು ಸ್ಪಂದಿಸಿ ಅಧಿಕಾರಿಗಳಿಗೆ ಹೇಳಿ 100 KVA TC ಅನ್ನು ಗ್ರಾಮಕ್ಕೆ ಕೊಡಿಸುವ ಮುಕಾಂತರ ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸಿದರು. ಮಾನ್ಯರಿಗೆ ಹಾಗೂ ಅವರ ಆಪ್ತರಾದ ಸೋಮಶೇಖರ್ ಅವರಿಗೆ ಗ್ರಾಮಸ್ಥರಿಂದ ಧನ್ಯವಾದಗಳು ಅರ್ಪಿಸಿದ್ದರು. ವರದಿ, ಮಾರುತಿ ಲಮಾಣಿ
ಮೈಸೂರು: ಲೋಕಸಭೆಯ ಒಳಗಡೆ ಹೊಗೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳು ಕೇಳಿದ್ದಕ್ಕೆ ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದು ಮೂರು ಮೂರು ಬಾರಿ ಹೇಳಿ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ ಎಂದು ಉತ್ತರಿಸಿದರು. ಪ್ರತಾಪ್ ಸಿಂಹ ದೇಶದ್ರೋಹಿನಾ ದೇಶಪ್ರೇಮಿನಾ ಅಂತಾ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ. ನನ್ನ ಓದುಗರು, ಮೈಸೂರಿನ ಕೊಡಗು ಜನ ತೀರ್ಪು ನೀಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಎಂದು ಜನ ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಇಷ್ಟೇ ಹೇಳುತ್ತೇನೆ. ಈ ಬಗ್ಗೆ ಬೇರೆ ಏನೂ ಕೇಳಬೇಡಿ ಎಂದರು. ಸಿದ್ದರಾಮಯ್ಯ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಕೇಳಿದ ಪ್ರಶ್ನೆಗೆ, https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯವರು ಸರ್ಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ…
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಜೊತೆ ಮಲ್ಲೇಶ್ವರಂ ಐಪಿಪಿ ಸಭಾಂಗಣದಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದೆಂದು ಹೇಳಿದರು. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ.…
ಕೆ.ಆರ್.ಪುರ: ಶ್ರೀರಾಮನ ಭಕ್ತ ಹನುಮನ ಜಯಂತಿ ವಿಜೃಂಭಣೆಯಿಂದ ಅಂಗವಾಗಿ ಕ್ಷೇತ್ರದ ಬಸವನಪುರ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ಆಚರಣೆಮಾಡಲಾಗಿದ್ದು,10 ಸಾವಿರ ಲಡ್ಡುಗಳ ವಿತರಣೆ ಮಾಡಲಾಯಿತು. ಮಾಜಿ ಸಚಿವ ಬೈರತಿ ಬಸವರಾಜ್ ಮತ್ತು ಬಸವನಪುರ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಬಸವನಪುರ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಭಗವಂತನ ಕೃಪೆಗೆ ಪಾತ್ರರಾದರು. ಹನುಮ ಜಯಂತಿಯ ಪ್ರಯುಕ್ತ ಶ್ರೀ ಅಭಯಾಂಜನೇಯ ಸ್ವಾಮಿ ದೇವಲಾಯಕ್ಕೆ ಬಗೆ ಬಗೆಯ ಹೂಗಳಿಂದ ಅಲಂಕರ ಮಾಡಿ ಸಿಂಗಾರ ಮಾಡಲಾಗಿತ್ತು.ಅಪಾರ ಭಕ್ತರು ಭಾಗವಹಿಸಿ ಹೋಮಗಳು, ಅಭಿಷೇಕ, ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಪ್ರಸಾದವನ್ನ ಸ್ವೀಕರಿಸಿ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಶ್ರೀ ಅಭಯ ಆಂಜನೇಯ ಸ್ವಾಮಿ ಗೆ ವಿಷೇಶ ಪೂಜೆ ಅಲಂಕಾರ ಮಾಡಲಾಯಿತು.ಬಸವನಪುರ ಮತ್ತು ಸುತ್ತಮುತ್ತಲಿನ ಬಡಾವಣೆಯ ಭಕ್ತರು ಸಾವಿರಾರು ಮಂದಿ ಬಂದು ದೇವರ ಕೃಪೆಗೆ…
ಕರ್ನಾಟಕದ ಫೇಮಸ್ ಡಿಶ್ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ. ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಹಿತ್ಕವರೆ ಕಾಳು- 2 ಕಪ್ ಕೊತ್ತಂಬರಿ ಬೀಜ – 1 ಚಮಚ ಜೀರಿಗೆ – 1 ಚಮಚ ಉದ್ದಿನ ಬೇಳೆ – ಅರ್ಧ ಚಮಚ ಕಡ್ಲೆ ಬೇಳೆ – 1 ಚಮಚ ಮೆಂತೆ – ಕಾಲು ಚಮಚ ಸಾಸಿವೆ – ಕಾಲು ಚಮಚ ಚಕ್ಕೆ – ಅರ್ಧ ಇಂಚು ಇಂಗು – ದೊಡ್ಡ ಚಿಟಿಕೆ ಲವಂಗ – 3 ಶುಂಠಿ – ಅರ್ಧ ಇಂಚು ಬೆಳ್ಳುಳ್ಳಿ – 2 ಎಸಳು ಒಣಮೆಣಸಿನಕಾಯಿ – 5,6 ತೆಂಗಿನ ತುರಿ – ಅರ್ಧ ಕಪ್ ಬೆಳ್ಳುಳ್ಳಿ – 1(ಚಿಕ್ಕದು) ಕಟ್ ಮಾಡಿಕೊಳ್ಳಿ ಕರಿಬೇವಿನ ಎಲೆ – 8 ರಿಂದ 10 ಬೆಲ್ಲ – 2 ಚಮಚ(ಇಷ್ಟವಿದ್ದಲ್ಲಿ ಬಳಸಿ) ಉಪ್ಪು –…
ಬೆಂಗಳೂರು: ಹೊಸ ವರ್ಷ ಹತ್ತಿರ ಬರ್ತಿದ್ದಂತೆ ರಾಜಧಾನಿಯಲ್ಲಿ ಡ್ರಗ್ಸ್ ವಾಸನೆ ಹೆಚ್ಚಾಗ್ತಿದೆ. ಇತ್ತಿಚೆಗಷ್ಟೇ ವಿದೇಶಿ ಮೂಲದ ಪೆಡ್ಲರ್ ಅರೆಸ್ಟ್ ಮಾಡಿದ್ದ ಖಾಕಿ ಪಡೆ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿತ್ತು. ಅದೇ ರೀತಿ ಮತ್ತೆ ಮೂವರು ಪೆಡ್ಲರ್ಗಳನ್ನ ಹೆಡೆಮುರಿ ಕಟ್ಟಿರೋ ಸಿಸಿಬಿ ಟೀಂ, ಅರ್ಧಕೋಟಿಯಷ್ಟು ಡ್ರಗ್ಸ್ ಸೀಜ್ ಮಾಡಿದೆ. ರಾಜಧಾನಿ ಬೆಂಗಳೂರಲ್ಲಿ ಮಾದಕ ವಸ್ತುಗಳು ಮಾರಾಟ ಎಗ್ಗಿಲ್ಲದೇ ನಡೀತಿದೆ. ಖಾಕಿ ಪಡೆ ಎಷ್ಟೇ ಎಚ್ಚರಿಕೆ ವಹಿಸಿದ್ರು, ಖತರ್ನಾಕ್ ಅಸಾಮಿಗಳು ಡ್ರಗ್ಸ್ ಪೂರೈಕೆಗೆ ನಾನಾ ದಾರಿಗಳನ್ನ ಹುಡುಕ್ತಾರೆ. ಮೊನ್ನೆಯಷ್ಟೆ ಸಿಸಿಬಿ ಪೊಲೀಸರ ಬೇಟೆಯಲ್ಲಿ ಸುಮಾರು 21 ಕೋಟಿಗೂ ಅಧಿಕ ಮೊತ್ತದ ಮಾದಕ ವಸ್ತುಗಳು ಪತ್ತೆಯಾಗಿದ್ವು. ಹಾಗೆ ಓರ್ವ ವಿದೇಶಿ ಡ್ರಗ್ ಪೆಡ್ಲರ್ ಬಂಧನವಾಗಿತ್ತು. ಈ ಘಟನೆ ಬೆನ್ನಿಗೆ ಇದೇ ರೀತಿ ವರ್ಷಾಚರಣೆಯ ಪಾರ್ಟಿಗಳಿಗಾಗಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಟೀಂ ದಾಳಿ ನಡೆಸಿದ್ದು, ಮೂವರು ಡ್ರಗ್ ಪೆಡ್ಲರ್ಗಳನ್ನ ಸಮೇತ ಅರ್ಧ ಕೋಟಿಗೂ ಹೆಚ್ಚು ಮೊತ್ತದ ಮಾದಕ ವಸ್ತುಗಳನ್ನ ಸೀಜ್ ಮಾಡಿದೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/…
ಪಾಕಿಸ್ತಾನ: ನಮ್ಮ ನೆರೆ ಹೊರೆಯ ದೇಶಗಳು ಚಂದ್ರನನ್ನು ತಲುಪಿವೆ. ಆದರೆ ಪಾಕಿಸ್ತಾನ ದೇಶವು ಇನ್ನೂ ಭೂಮಿಯಿಂದ ಮೇಲೇ ಏಳುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ. ಪದೇ ಪದೇ ಭಾರತದ ಸಾಧನೆಗಳನ್ನು ಹೊಗಳುತ್ತಿರುವ ನವಾಜ್ ಷರೀಫ್, ಇದೀಗ ಮತ್ತೊಮ್ಮೆ ಭಾರತವನ್ನು ಹೊಗಳಿ ಅಲ್ಲಿನ ಮಿಲಿಟರಿ ಮುಖ್ಯಸ್ಥರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ತಮ್ಮ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್, ಪಾಕಿಸ್ತಾನ ದೇಶದ ಹೀನಾಯ ಆರ್ಥಿಕ ಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಾಕಿಸ್ತಾನದ ಆರ್ಥಿಕ ಕುಸಿತಕ್ಕೆ ಬೇರೆ ಯಾರೂ ಕಾರಣರಲ್ಲ. ಖುದ್ದಾಗಿ ನಾವೇ ನಮ್ಮ ಆರ್ಥಿಕ ದುಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ಹೇಳಿದರು. https://ainlivenews.com/mutant-corona-is-worried-in-the-state/ ನಮ್ಮ ನೆರೆ ಹೊರೆ ದೇಶಗಳು ಆಗಲೇ ಚಂದ್ರನನ್ನು ತಲುಪಿವೆ. ನಾವು ಇನ್ನೂ ಭೂಮಿಯ ಮೇಲಿಂದಲೇ ಏಳಲು ಆಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ನವಾಜ್ ಷರೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಈ ಕುಸಿತಕ್ಕೆ ನಾವೇ…
ಬೆಂಗಳೂರು: ಫೈಟರ್ ರವಿ ಒಂದು ಕಾಲದಲ್ಲಿ ಫೀಲ್ಡಲ್ಲಿ ಹೆಸರು ಮಾಡಿದ್ದ ಆಸಾಮಿ.. ನಾಗಮಂಗಲದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಟಿಕೆಟ್ ಕೈತಪ್ಪಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸದ್ದು ಮಾಡಿದ್ದ.. ಇದೀಗ ಐಟಿ ದಾಳಿಯಾಗಿ ಸಿಸಿಬಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹೀಗೆ ಮಾತನಾಡುತ್ತಾ ನಿಂತಿರೋ ಇವರ ಹೆಸರು ಬಿಎಂ ಮಲ್ಲಿಕಾರ್ಜುನ.. ಹೀಗಂದ್ರೆ ಇವ್ರು ಯಾರು ಅನ್ನೋದು ಯಾರಿಗೂ ತಿಳಿಯೋದಿಲ್ಲ.. ಫೈಟರ್ ರವಿ ಅಂದ್ರೆನೆ ಎಲ್ಲಾರಿಗೂ ಗೊತ್ತಾಗೊದು.. ರವಿ ಇದೀಗ ಮತ್ತೆ ಸುದ್ದಿಯಲ್ಲಿರೋಕೆ ಕಾರಣ ಮೊನ್ನೆ ಮೊನ್ನೆಯಷ್ಟೇ ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.. ಈಗ ಸಿಸಿಬಿಯ ದೃಷ್ಟಿ ಸಹ ಫೈಟರ್ ರವಿ ಮೇಲೆ ಬಿದ್ದಿದ್ದು ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಗೋಡಂಬಿ ವ್ಯವಹಾರದ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಗಂಟೆಗಟ್ಟಲೆ ಕಾದು ಫೈಟರ್ ರವಿ ಮನೆಗೆ ಬಂದಾಗ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. https://ainlivenews.com/what-do-you-know-about-the-iphone-16-lineup-do-you-know-why-they-put-the-a18-chip/ ಇನ್ನು ನನ್ನ ಮೇಲೆ ಯಾವ ಪ್ರಕರಣ ದಾಖಲಾಗಿದೆ ಎಂಬುದರ ಮಾಹಿತಿ ತನಗಿಲ್ಲ. …