ಮಂಡ್ಯ: ಕುಮಾರಸ್ವಾಮಿ ಅಥವಾ ನಿಖಿಲ್ ಅಭ್ಯರ್ಥಿ ಆಗಬೇಕು. ಜಿಲ್ಲೆಯ ಶಾಸಕ, ಮಾಜಿ ಶಾಸಕರು ರೆಸಲ್ಯೂಷನ್ ಮಾಡಿದ್ದೇವೆ ಆದ್ದರಿಂದ ನೀವು ಅರ್ಜಿ ಹಾಕಿ, ನಾವು ಚುನಾವಣೆ ಮಾಡ್ತೀವಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ. https://ainlivenews.com/the-benefits-of-drinking-warm-milk-mixed-with-a-spoonful-of-honey/ ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಮನಸ್ಸು ಹೊಡೆದು. ದೇವೇಗೌಡರ ಆರೋಗ್ಯ ಕೆಡಿಸಿ ಬಿಜೆಪಿ ಜೊತೆ ಏಕೆ ಕರೆದುಕೊಂಡ ಹೋದೆ? ಮನೆ ಹೊಡೆದಂತ ನೀನು ಜೆಡಿಎಸ್ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ? ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸಿಎಸ್ ಪುಟ್ಟರಾಜು ತಿರುಗೇಟು ನೀಡಿದರು.
Author: AIN Author
ಮಂಡ್ಯ: 2019, 2023ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ ಎಂದು ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮತದಾರ ಬಂಧುಗಳೇ ನಮ್ಮ ತಂದೆ-ತಾಯಿಯಂದ್ರು. ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಈ ಜಿಲ್ಲೆಯ ಜನತೆಗೆ ಸ್ಪಷ್ಟ ಮನವಿ ಮಾಡಲು ಬಯಸುತ್ತೇವೆ. ನಮ್ಮ ತಪ್ಪುಗಳನ್ನ ತಿದ್ದಿಕೊಳ್ಳಲು ನಾನು ಸಿದ್ಧರೆದ್ದೇವೆ ಆದ್ದರಿಂದ ತಪ್ಪು ತಿದ್ದಿಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡ್ತೀನಿ ಎಂದರು. https://ainlivenews.com/the-benefits-of-drinking-warm-milk-mixed-with-a-spoonful-of-honey/ ಇನ್ನೂ ಹೊಟ್ಟೆಪಾಡಿಗಾಗಿ ಬಿಜೆಪಿ ಜೊತೆ ಸೇರಿದ್ದಾರೆಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ತಿಯೇ ನೀಡಿದ ಅವರು, ಹುಟ್ಟಿದಾಗಲೇ ಅವರು ಮಹಾರಾಜರ ವಂಶಸ್ಥರಿರಬೇಕು. ಅವರ ಬಗ್ಗೆ ನನಗಿಂತ ನಾಗಮಂಗಲದ ಜನತೆಗೆ ಗೋತ್ತಿರಬೇಕು. 1999ರ ಚುನಾವಣೆಯಲ್ಲಿ ಮೊದಲು ಅಭ್ಯರ್ಥಿ ಆಗಿದ್ರು. ನಾವೆಲ್ಲರೂ ಸೋತಿದ್ದೆವು ಆ ಚುನಾವಣೆಯಲ್ಲಿ. ಬೆಳ್ಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರ ಜೊತೆ ಭಾಗಿಯಾಗಿದ್ದೆ. ಆಗ ಚಲುವರಾಯಸ್ವಾಮಿ ಮೇಲೆ ಅಭಿವೃದ್ಧಿ ಆಗಿಲ್ಲ ಅಂತಾ ಬೇಸರ ಆಗಬೇಡಿ ಅಂತಾ ಜನರಲ್ಲಿ ಮನವಿ ಮಾಡಿದ್ದೆ. ಇವರು ನನ್ನ ಹೊಟ್ಟೆಪಾಡಿನ…
ಬೆಂಗಳೂರು: ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಸಾಮಾನ್ಯವಾಗಿ 2 ತಿಂಗಳ ಅವಧಿಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿಯನ್ನು BBMP ನೀಡುತ್ತಾ ಬಂದಿದೆ. ಆದರೆ, ಈ ವರ್ಷ ಶೇ 5ರ ರಿಯಾಯಿತಿ ಜುಲೈ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಈ ಸಂಬಂಧ ಬಿಬಿಎಂಪಿ ಗುರುವಾರ ಸುತ್ತೋಲೆ ಹೊರಡಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ. ರಿಯಾಯಿತಿಯು 2024ರ ಜುಲೈ 31ರವರೆಗೆ ಇರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿ ಕಾಯ್ದೆಯ 2020 ರ ಸೆಕ್ಷನ್ 144ರ ಅಡಿಯಲ್ಲಿ, ಹಣಕಾಸಿನ ವರ್ಷದ ಆರಂಭದಲ್ಲಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸಂಸ್ಥೆಯು ಶೇ 5ರ ರಿಯಾಯಿತಿಯನ್ನು ನೀಡಲು ಅವಕಾಶವಿದೆ. BIGG BREAKING: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ʼಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊರಡಿಸಿದ ಸುತ್ತೋಲೆ ಪ್ರಕಾರ, ತೆರಿಗೆದಾರರು 2024-25ನೇ ಹಣಕಾಸು ವರ್ಷದ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿದರೆ ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಜೊತೆಗೆ ವಿನಾಯಿತಿ…
ಶಿವಾಜಿ ಸುರತ್ಕಲ್” ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಸಿನಿಪಯಣಕ್ಕೆ 16 ವರ್ಷ . ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್” ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಈ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜೊತೆಗೆ ಇವರ ಸಿನಿಪಯಣಕ್ಕೆ ಹದಿನಾರರ ಹರೆಯ. 2008 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ಅಭಿನಯದ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ತಮ್ಮ ಸಿನಿ ಜರ್ನಿ ಆರಂಭಿಸಿದ ಆಕಾಶ್ ಶ್ರೀವತ್ಸ, ನಂತರ “ಸುಳ್ಳೇ ಸತ್ಯ”, ” ಬದ್ಮಾಶ್”, “ಶಿವಾಜಿ ಸುರತ್ಕಲ್” (ಎರಡು ಭಾಗ) ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಇವರ ನಿರ್ದೇಶನದ “ಡೈಜಿ” ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆಕಾಶ್ ಶ್ರೀವತ್ಸ ಅವರಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳು ಬರಲಿ ಎಂದು ಹಾರೈಸಿರುವ ಅವರ ಗೆಳೆಯರು ಪೋಸ್ಟರ್ ಬಿಡುಗಡೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆನೆಗೊಂದಿ ಉತ್ಸವ ಆಚರಿಸಿದ ಜಿಲ್ಲಾಡಳಿತ, ಉತ್ಸವಕ್ಕೆ ಆಗಮಿಸಿದ ಜನರಿಗೆ ಊಟಕ್ಕೆ ಮಾಡಿದ್ದ ಅನ್ನವನ್ನು ಬಯಲಿನಲ್ಲಿ ಬಿಸಾಕಿದ್ದು ಆ ಅನ್ನವನ್ನು ತಿಂದು 20ಕ್ಕೂ ಹೆಚ್ಚು ಕುರಿಗಳು ಸಾವಪ್ಪಿರುವ ಘಟನೆ ಇಂದು ನಡೆದಿದೆ. ಆನೆಗೊಂದಿ ಉತ್ಸವ ನಡೆದ ಜಾಗದ ಹತ್ತಿರ ಇದ್ದ ಕುರಿ ಹಟ್ಟಿಯಲ್ಲಿ ಕುರಿಗಳು ಸಾವಪ್ಪಿರುವದನ್ನು ಕಂಡ ಕುರಿಗಾರರು ಬೆಚ್ಚಿ ಬಿದ್ದಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಬಿಸಾಕಿದ ಅನ್ನ ತಿಂದಿದ್ದರಿಂದ ಕುರಿಗಳು ಸಾವಪ್ಪಿವೆ ಎಂದು ದೃಢಪಡಿಸಿದ್ದಾರೆ. ಮಾ.11 ಮತ್ತು 12 ರಂದು ಎರಡು ದಿನ ಶಾಸಕ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಜಿಲ್ಲಾಡಳಿತ ಆನೆಗೊಂದಿ ಉತ್ಸವ ಆಚಿರಿಸಿತ್ತು. ಉತ್ಸವಕ್ಕೆ ಬರುವ ಜನರಿಗೆ ಮುಖ್ಯರಸ್ತೆಯ ಗದ್ದೆಯ ಖಾಲಿ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಗಟ್ಟಲೆ ಜನ ಸೇರುತ್ತಾರೆ ಎಂಬ ನಿರೀಕ್ಷೆಯಿಂದ ಜಿಲ್ಲಾಡಳಿತ ಅಡುಗೆ ಮಾಡಿಸಿದ್ದು, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದ ಪರಿಣಾಮ ಮಾಡಿದ ಸಾಕಷ್ಟು ಅಡುಗೆ ಉಳಿದಿದೆ. ಆದರೆ ಉಳಿದ…
ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದಲ್ಲಿರುವ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವನ್ನು ದಿ.19 ರಂದು ವಿಜೃಂಭಣೆಯಿಂದ ಮಾಡಬೇಕೆಂದು ಕಮಿಟಿ ತೀರ್ಮಾನ ಮಾಡಿದ್ದೇವೆ ಎಂದು ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಸತ್ಯನಾರಾಯಣ ಗೌಡ ತಿಳಿಸಿದರು. ದೇವಾಲಯದ ಸಭಾಂಗಣದಲ್ಲಿ ಪತ್ರಿಕಾ ಘೋಸ್ಠಿ ನಡೆಸಿ ಮಾತನಾಡಿದ ಇವರು ದೇವಸ್ಥಾನದ ಅಭಿವೃದ್ಧಿಗಳ ಬಗ್ಗೆ ದೇವಾಲಯದ ಕಾರ್ಯಕ್ರಮದ ಬಗ್ಗೆ ತುಂಬಾ ಉಸ್ತುಕರಾಗಿ ಏಳೆಂಟು ಜನ ಧರ್ಮದರ್ಶಿಗಳು ಕಾರ್ಯಪವೃತ್ತರಾಗಿದ್ದೇವೆ. ಹಣಕಾಸಿನ ಚಿಂತನೆ ಇಲ್ಲ ನಾವು ಮಾಡುವಂತಹ ಜನಪಯೋಗಿ ಕೆಲಸಗಳನ್ನ ಯಾರು ಟೀಕಿಸುವಂತಹ ವ್ಯವಸ್ಥೆ ಇಲ್ಲ ಇಲ್ಲಿಗೆ ಬರುವಂತಹ ಭಕ್ತಾದಿಗಳಿಗೆ ಅನುಕೂಲವಾಗಲು ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನವೂ ದಾಸೋಹದ ವ್ಯವಸ್ಥೆ ಇದ್ದು ಭಕ್ತಾದಿಗಳು ದಾಸೋಹ ಭವನದಲ್ಲಿ ದಾಸೋಹವನ್ನು ಸ್ವೀಕರಿಸಿ ಎಂದು ವಿನಂತಿಸಿಕೊಂಡರು. ಇನ್ನು ಪತ್ರಿಕಾಗೋಷ್ಠಿಯನ್ನು ಕುರಿತು ಕೆ ವಿ ಪ್ರಕಾಶ್ ಮಾತನಾಡಿ ಬ್ರಹ್ಮರಥೋತ್ಸವ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ಸಮಯದಲ್ಲಿ ನೆರವೇರಲಿದೆ. ನಂತರ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೆ…
ಹಾವೇರಿ: ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಬಸವರಾಜ್ ಬೊಮ್ಮಾಯಿ ಹಾವೇರಿಗೆ ಆಗಮಿಸಿದ್ದು, ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ಕಾರ್ಯಕರ್ತರಿಂದ ಗ್ರ್ಯಾಂಡ್ ವೆಲ್ ಕಮ್ ಮಾಡಿದ್ದಾರೆ. ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬೊಮ್ಮಾಯಿ ಬರಮಾಡಿಕೊಂಡು ನಗರದ ರೋಟರಿ ಕಾಲೇಜಿನಿಂದ ಬಿಜೆಪಿ ಕಚೇರಿವರೆಗೂ ಭರ್ಜರಿ ರೋಡ್ ಶೋ ಮಾಡಲಾಯಿತು. ತೆರದ ಬಿಜೆಪಿ ಪ್ರಚಾರದ ವಾಹನದಲ್ಲಿ ಬೊಮ್ಮಾಯಿ ರೋಡ್ ಶೋ ವೇಳೆ ಮೋದಿಗೆ ಜೈಕಾರ ಕೂಗಿದ್ದಾರೆ. ಬೊಮ್ಮಾಯಿಗೆ ಜಿಲ್ಲಾಧ್ಯಕ್ಷ ಅರುಣ ಪುಜಾರ,ಅರವಿಂದ ಬೆಲ್ಲದ ಹಾಗೂ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ಸಿಲಿಕಾನ್ನ ಸಿಟಿಯಲ್ಲಿ ಯಾವ ಏರಿಯಾಗೆ ಹೋದರೂ, ಯಾವ ವಾರ್ಡ್ಗೆ ಹೋದರೂ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ . ಹಲವೆಡೆ ವಾರಕ್ಕೆ 2 ದಿನ ಮಾತ್ರ ಕಾವೇರಿ ನೀರು ಬರುತ್ತಿದೆ. ಬೋರ್ವೆಲ್ಗಳ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಬೆಂಗಳೂರು ನಿವಾಸಿಗರು ಕಂಗಾಲಾಗಿದ್ದಾರೆ. ಇಂತಹ ಬರ ಸಮಯದಲ್ಲಿ ಜನರು ನೀರಿನ ಮೌಲ್ಯ ಅರಿಯಲಿ, ನೀರನ್ನು ಸರಿಯಾದ ಪ್ರಮಾಣದಲ್ಲಿ ಬಳಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೀರು ಉಳಿಸಿ ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀರು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.ವಿಧಾನಸೌಧದ ಆವರಣದಲ್ಲಿ ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ಆರಂಭಿಸಿರುವ ನೀರು ಉಳಿಸಿ ಬೆಂಗಳೂರು ಬೆಳಸಿ ಅಭಿಯಾನಕ್ಕೆ ಚಾಲನೆ ನೀಡಿದ ಶಿವಕುಮಾರ್ ಅವರು, ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆ್ಯಪ್ಗಳನ್ನು ಬಿಡುಗಡೆ ಮಾಡಿದರು.ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ. ಲೋಕಸಭೆ ಟಿಕೆಟ್ ಹಂಚಿಕೆ ಅಭಿಪ್ರಾಯ ಸಂಗ್ರಹಿಸಿ…
ಹಾವೇರಿ: ಈ ಭಾಗದಲ್ಲಿ 3 ಲಕ್ಷಕ್ಕೂ ಹೆಚ್ಚು ಲೀಡ್ ನಲ್ಲಿ ಬೊಮ್ಮಾಯಿ ಗೆಲ್ತಾರೆ ಎಂದು ರಾಣೆಬೆನ್ನೂರಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ, ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಜನಪ್ರಿಯ ನಾಯಕರು, ಜನರ ಮನಸ್ಸನ್ನು ಗೆದ್ದವರು. ಈ ಭಾಗದಲ್ಲಿ 3 ಲಕ್ಷಕ್ಕೂ ಹೆಚ್ಚು ಲೀಡ್ ನಲ್ಲಿ ಬೊಮ್ಮಾಯಿ ಗೆಲ್ತಾರೆ. ಪಕ್ಷ ಬೆಳೆದ ಹಾಗೆ ಆಕಾಂಕ್ಷಿಗಳ ಸಂಖ್ಯೆ ಸಹಜವಾಗೇ ಹೆಚ್ಚಾಗುತ್ತೆ.ಇದು ಸ್ವಾಗತಾರ್ಹ ಕೂಡಾ ಎಂದರು. ಇನ್ನೂ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಮಿಸ್ ಆದ ಕಾರಣ ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಪಕ್ಷದ ವರಿಷ್ಟರು ಬೇರೆ ಬೇರೆ ರೀತಿ ವಿಚಾರ ಕನ್ಸಿಡರ್ ಮಾಡಿ ಡಿಸಿಜನ್ ತಗೊಂಡಿದ್ದಾರೆ. ಟಿಕೇಟ್ ಕೊಡುವಾಗ ಒಂದೇ ವಿಷಯ ಇರಲ್ಲ, ಈಶ್ವರಪ್ಪ ಹಿರಿಯ ನಾಯಕರು, ಅಸಮಾಧಾನ ಆಗಿರೋದನ್ನ ಬಗೆಹರಿಸೋ ಕೆಲಸ ವರಿಷ್ಟರು ಮಾಡ್ತಾರೆ. ಈಶ್ವರಪ್ಪ ಅವರು ವಿಧಾನಸಭೆ ಚುನಾವಣೆ ವೇಳೆ ತಾವಾಗೇ ಟಿಕೆಟ್ ಬೇಡ ಅಂತ ಬಿಟ್ಟವರು, ಕಾಂತೇಶ್ ವಯಸ್ಸು ಬಹಳ ಇದೆ…
ಗುಂಡ್ಲುಪೇಟೆ: ಚಾಮರಾಜನಗರ ಬರಪೀಡಿತವೆಂದು ಘೋಷಣೆಯಾಗಿದ್ರು ಕೇರಳಕ್ಕೆ ಅಕ್ರಮ ಮೇವು ಸಾಗಾಟ ಮಾಡಲಾಗುತ್ತಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ನೆರೆಯ ಕೇರಳ ಮತ್ತು ತಮಿಳುನಾಡಿಗೆ ಮೇವನ್ನ ಸಾಗಣೆ ಮಾಡಬಾರದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಜೋಳದ ಕಡ್ಡಿ ಇನ್ನಿತರ ಮೇವನ್ನ ಇಲ್ಲಿಯೇ ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೇರಳ ಅಥವಾ ತಮಿಳುನಾಡಿಗೆ ಸಾಗಾಟ ಮಾಡಬಾರದು ಅಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಚಾಮರಾಜನಗರ ಜಿಲ್ಲೆಯ ಎಲ್ಲಾ ಗಡಿಯಲ್ಲೂ ಕಟ್ಟೆಚ್ಚರವಹಿಸುವಂತೆ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು ಆದ್ರೆ ಗುಂಡ್ಲುಪೇಟೆಯಿಂದ ನೆರೆಯ ಕೇರಳಕ್ಕೆ ಎಗ್ಗಿಲ್ಲದೆ ಮೇವು ಸಾಗಣೆ ಆಗ್ತಿದೆ,ಟಾಟಾ ಏಸ್ , ಈಚರ್ ವಾಹನಗಳಲ್ಲಿ ಲೋಡ್ ಮಾಡಿ , ಮೇವು ಹೊರಗೆ ಕಾಣಿಸದಂತೆ ಟಾರ್ಪಲ್ ಹೊದಿಸಲಾಗ್ತಿದೆ. ನೆನ್ನೆಯಷ್ಟೇ ಮದ್ದೂರು ಪೊಲೀಸ್ ಚೆಕ್ಪೋಸ್ಟ್ ಬಳಿ ಜೋಳದ ಕಡ್ಡಿ ತುಂಬಿದ್ದ ಈಚರ್ ವಾಹನವನ್ನ ವಾಪಾಸ್ ಕಳುಹಿಸಿದ್ದಾರೆ , ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಾಗಣೆ ಮಾಡ್ತಿದ್ದ ಲಾರಿಯನ್ನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕಿದ್ದ ಪೊಲೀಸ್…