ನವದೆಹಲಿ:- ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದು ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಹೊಸ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ. ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ (Court) ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಪ್ರವೇಶ ಮಾಡುವ ವೇಳೆ “ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಜನರು ಇದಕ್ಕೆ ಉತ್ತರಿಸಲಿದ್ದಾರೆ” ಎಂದು ಅಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದರು. ಕೆಲವು ಆರೋಪಿಗಳು…
Author: Author AIN
ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಪಡೆದುಕೊಂಡ ನಾಗ ಚೈತನ್ಯ ಹಾಗೂ ಸಮಂತಾ ಸದ್ಯ ತಮ್ಮ ಕೆರಿಯರ್ ಮೇಲೆ ಗಮನ ಹರಿಸಿದ್ದಾರೆ. ಈ ಜೋಡಿ ದೂರವಾಗಲು ಕಾರಣವೇನು ಎಂಬುದು ಮಾತ್ರ ನಿಗೂಡವಾಗಿಯೇ ಉಳಿದಿತ್ತು. ಇದೀಗ ಈ ಜೋಡಿ ದೂರವಾದ ನಾಲ್ಕು ವರ್ಷಗಳ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಗೆ ಕಾರಣವೇನು ಎಂಬುದು ತಿಳಿದು ಬಂದಿದೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸದೆ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದರು. ಅಂದಿನಿಂದ ಅವರು ಪ್ರತ್ಯೇಕವಾಗಿದ್ದು ತಮ್ಮ ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವದಂತಿಗಳಿಗೆ ತೆರೆ ಬಿದ್ದಿತ್ತು.. ಸದ್ಯ ಸುದ್ದಿಯಲ್ಲಿರೋ ಫೋನ್ ಕದ್ದಾಲಿಕೆ ವಿಚಾರ ದೇಶವನ್ನೇ ನಡುಗಿಸಿದೆ. ಇದರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಹೆಸರುಗಳು ಮುನ್ನೆಲೆಗೆ ಬಂದಿದೆ. ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದ ತೆಲಂಗಾಣ ಸರ್ಕಾರಿ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಬಂಧಿಸಿ ತನಿಖೆ ನಡೆಸಿದ…
ಬಿಗ್ ಬಾಸ್ ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ ದುಡ್ಡು ತಗೆದುಕೊಳ್ಳದೇ ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಸಾವರ್ಕರ್ ಸಿನಿಮಾದಲ್ಲಿ ಆ ಸುದ್ದಿಯನ್ನು ನಟಿ ಸುಳ್ಳು ಮಾಡಿದ್ದಾರೆ. ವೀರ ಸಾವರ್ಕರ್ ಸಿನಿಮಾದಲ್ಲಿ ನಟಿಸಲು ಅಂಕಿತಾ ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಸಾವರ್ಕರ್ ಪತ್ನಿಯ ಪಾತ್ರದಲ್ಲಿ ನಟಿಸುವಂತೆ ಕೇಳಿದಾಗ ಅಂಕಿತಾ ಕಂಡಷನ್ ಒಂದನ್ನ ಹಾಕಿದ್ದರಂತೆ. ಆ ಕಂಡೀಷನ್ ಗೆ ಒಪ್ಪಿದರೆ ಮಾತ್ರವೇ ಚಿತ್ರದಲ್ಲಿ ನಟಿಸೋದಾಗಿ ಹೇಳಿದ್ದರಂತೆ. ನಟಿ ಇಟ್ಟ ಬೇಡಿಕೆ ಏನಿರಬಹುದು ಎನ್ನುವ ಗೊಂದಲ ನಿರ್ಮಾಪಕರಿಗೆ ಆಗಿತ್ತಂತೆ. ಆದರೆ, ಈ ಸಿನಿಮಾಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಉಚಿತವಾಗಿ ನಟಿಸುತ್ತೇನೆ. ಅದಕ್ಕೆ ಒಪ್ಪಿದರೆ ಮಾತ್ರ ಪಾತ್ರ ಮಾಡುತ್ತೇನೆ ಅಂದರಂತೆ ಅಂಕಿತಾ. ಇದು ನಟಿ ಬದ್ಧತೆ ಎಂದು ನಿರ್ಮಾಪಕರು ಹೇಳಿದ್ದಾರೆ. ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದ್ದ ‘ಸ್ವಾತಂತ್ರ ವೀರ್ ಸಾವರ್ಕರ್’ ಸಿನಿಮಾ ಇತ್ತೀಚೆಷ್ಟೇ ಬಿಡುಗಡೆ ಆಗಿದ್ದು ಅಂದುಕೊಂಡಷ್ಟು ಚಿತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ. ಮೊದಲ ದಿನದ ಕಲೆಕ್ಷನ್ 1.15…
ತೆಲುಗು ಸಿನಿಮಾ ರಂಗದಲ್ಲಿ ಪೋಷಕ ನಟಿಯಾಗಿ ಖ್ಯಾತಿ ಘಳಿಸಿರುವ ನಟಿ ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಮಗಳು ಸುಪ್ರೀತಾ ಜೊತೆ ಇನ್ಸ್ಟಾ, ಯೂಟ್ಯೂಬ್ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿರುವ ನಟಿ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದಾರೆ. ಇದೀಗ ಮಗಳು ಸುಪ್ರೀತಾ ತಾಯಿಗೆ ಮತ್ತೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಕಿರುತೆರೆ ನಿರ್ದೇಶಕ ಸುರೇಶ್ ತೇಜಾ ಜೊತೆ ಸುರೇಖಾ ವಾಣಿ ಮದುವೆ ಆಗಿದ್ದರು. ದಂಪತಿಗೆ ಮಗಳು ಇದ್ದಾಳೆ. ಆದರೆ 2019ರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಸುರೇಶ್ ತೇಜಾ ಕೊನೆಯುಸಿರೆಳೆದರು. ಬಳಿಕ ತಾಯಿ- ಮಗಳು ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಬಾರಿ ನಮ್ಮ ತಾಯಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಸುಪ್ರೀತಾ ಯೋಚಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ಆಕ್ಟೀವ್ ಆಗಿರುವ ಸುಪ್ರೀತ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾಯಿಗೆ ಮತ್ತೊಂದು ಮದುವೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈಗ ಹುಡುಗರು ನಮ್ಮ ತಾಯಿಯನ್ನು ಮದುವೆ ಆಗಲು ಒಪ್ಪಲ್ಲ, ಅಂಕಲ್ ಆಗಿದ್ದರೂ ಸರಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಸಲು ಅಭ್ಯಂತರವಿಲ್ಲ…
ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್ನ ಅತಿ ಉದ್ದದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿದು ಬಿದ್ದಿದೆ. ಡಿಕ್ಕಿ ಹೊಡೆದ ಕಂಟೇನರ್ ಹಡಗಿನಲ್ಲಿ 22 ಸಿಬ್ಬಂದಿ ಭಾರತೀಯರಿದ್ದು ಎಲ್ಲರು ಸುರಕ್ಷಿತವಾಗಿದ್ದಾರೆ. ಇದೀಗ ಅಮೆರಿಕ ಅಧ್ಯಕ್ಷ ಹಡಗಿನಲ್ಲಿದ್ದ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ. ಅಪಘಾತಕ್ಕೀಡಾದ ಹಡಗು ಡಾಲಿ ಹೆಸರಿನ ಕಂಟೈನರ್ ಹಡಗಾಗಿದ್ದು, ಬಾಲ್ಟಿಮೋರ್ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ಮಂಗಳವಾರ ಮುಂಜಾನೆ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿದ್ದು, ಸೇತುವೆಯೂ ಮುರಿದು ನದಿಗೆ ಬಿದ್ದಿದೆ. ಕಂಟೈನರ್ ಹಡಗು ಸುಮಾರು ಎಂಟು ಗಂಟುಗಳ ತುಲನಾತ್ಮಕವಾಗಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಸೇತುವೆಯನ್ನು ಅಪ್ಪಳಿಸುವ ಮೊದಲು ಕ್ಷಣಗಳಲ್ಲಿ ವಿದ್ಯುತ್ ಕಳೆದುಕೊಂಡಿತು. ತಕ್ಷಣವೇ ಎಚ್ಚೆತ್ತುಕೊಂಡ ಹಡಿಗಿನಲ್ಲಿದ್ದ ಸಿಬ್ಬಂದಿ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಸೇತುವೆಯನ್ನು ಮುಚ್ಚಿಸಿದ್ದಾರೆ. ಈ ಮೂಲಕ ನಡೆಯಬಹುದಾಗಿ ಸಾಕಷ್ಟು ಸಾವು ನೋವುಗಳನ್ನು ತಪ್ಪಿಸಿದ್ದಾರೆ. ಮೇ ಡೇ ಕರೆಗೆ ಯುಎಸ್ ಕೋಸ್ಟ್ ಗಾರ್ಡ್ ತ್ವರಿತವಾಗಿ…
ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಮಗಳು ರಹಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕ್ರಿಸ್ ಮಸ್ ಸಂದರ್ಭದಲ್ಲಿ ಮಗಳ ಮುಖ ರಿವೀಲ್ ಮಾಡಿದ್ದ ದಂಪತಿ ಆ ಬಳಿಕ ಸಾಕಷ್ಟು ಭಾರಿ ಮಗಳ ಜೊತೆ ಸಾರ್ವಜನಿಕರವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ರಹಾ ಅತಿ ಶ್ರೀಮಂತ ಸ್ಟಾರ್ ಕಿಡ್ ಎನಿಸಿಕೊಂಡಿದ್ದಾಳೆ. ರಣಬೀರ್ ಕಪೂರ್ ಹಾಗೂ ಆಲಿಯಾಗೆ 2022ರಲ್ಲಿ ಮದುವೆ ಆಯಿತು. ಅದೇ ವರ್ಷ ದಂಪತಿಗೆ ರಹಾ ಹಟ್ಟಿದ್ದಾಳೆ. ರಣಬೀರ್ ಹಾಗೂ ಆಲಿಯಾ ಬಾಂದ್ರಾದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು, ಈ ಮನೆಯನ್ನು ಮಗಳು ರಹಾ ಹೆಸರಲ್ಲಿ ನೋಂದಣಿ ಮಾಡಿಸಲು ನಿರ್ಧರಿಸಿದ್ದಾರೆ. ಬಾಂದ್ರಾದಲ್ಲಿ ಜಾಗದ ಬೆಲೆ ಗಗನಕ್ಕೇರಿದೆ. ಇಂಥ ಜಾಗದಲ್ಲಿ ಆಲಿಯಾ-ರಣಬೀರ್ ಮನೆ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಈ ಮನೆಯನ್ನು ಸಾಕಷ್ಟು ಐಷಾರಾಮಿ ಆಗಿ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಛ ತಗುಲಿದೆ ಎನ್ನಲಾಗುತ್ತಿದೆ. ಈ ಮನೆ ಶಾರುಖ್ ಖಾನ್ ಅವರ ಮನ್ನತ್ ಹಾಗೂ ಅಮಿತಾಭ್ ಬಚ್ಚನ್ ಅವರ…
ಸರಕು ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್ನ ಸೇತುವೆ ಕುಸಿದ ಅವಘಡದಲ್ಲಿ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದು ಇದುವರೆಗೂ ಅವರ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಮೇರಿಲ್ಯಾಂಡ್ ರಾಜ್ಯದ ಪೊಲೀಸ್ ಸೂಪರಿಂಟೆಂಡೆಂಟ್ ಕರ್ನಲ್ ರೋಲ್ಯಾಂಡ್ ಆರ್. ಬಟ್ಲರ್ ಜೂನಿಯರ್ ತಿಳಿಸಿದರು. ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಸರಕು ಸಾಗಣೆ ಹಡಗು ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆಯ ಆಧಾರಸ್ತಂಭಕ್ಕೆ ಮಂಗಳವಾರ ಡಿಕ್ಕಿ ಹೊಡೆದಿದೆ. ಈ ವೇಳೆ ಸೇತುವೆ ಮೇಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಆರು ಕಾರ್ಮಿಕರು ನಿರತರಾಗಿದ್ದು, ಸೇತುವೆ ಕುಸಿಯುತ್ತಿದ್ದಂತೆ ಅವರೆಲ್ಲಾ ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದವರ ಯಾರ ದೇಹಗಳನ್ನೂ ಪತ್ತೆಹಚ್ಚಲು ಅಗ್ನಿಶಾಮಕ ದಳದವರೂ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಸಾಧ್ಯವಾಗಿಲ್ಲ. ‘ದೀರ್ಘ ಕಾಲ ಈಜುಗಾರರು ಸತತವಾಗಿ ಪ್ರಯತ್ನಿಸಿದರೂ ಯಾರ ದೇಹಗಳೂ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಆರೂ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದೇವೆ. ಕಾರ್ಮಿಕರ ಹೊರತಾಗಿ ಬೇರೆಯವರು ನೀರಿನಲ್ಲಿ ಮುಳುಗಿರುವುದರ ಕುರಿತು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದೂ…
ಮಂಗೋಲಿಯಾದ ಮಾಜಿ ಪ್ರಧಾನಿ ಸುಖ್ಬಾತರ್ ಬ್ಯಾಟ್ಬೋಲ್ಡ್ ನ್ಯೂಯಾರ್ಕ್ನಲ್ಲಿ ಹೊಂದಿರುವ ಎರಡು ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ. ಅಕ್ರಮ ಭ್ರಷ್ಟಾಚಾರ ಪ್ರಕರಣದಿಂದ ಪಡೆದ ಹಣದಿಂದ ಸುಖ್ಬಾತರ್ ಬ್ಯಾಟ್ಬೋಲ್ಡ್ ನ್ಯಾಯಾರ್ಕ್ ನಲ್ಲಿ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ. ಪ್ರಧಾನಿಯಾಗಿದ್ದಾಗ ತನ್ನ ಪ್ರಭಾವ ಬಳಸಿಕೊಂಡು ಮಂಗೋಲಿಯಾದ ಗಣಿ ಗುತ್ತಿಗೆಯನ್ನು ತನಗೆ ಬೇಕಾದವರಿಗೆ ವಹಿಸಿಕೊಟ್ಟು ಕೋಟ್ಯಾಂತರ ಡಾಲರ್ ಅಕ್ರಮ ಲಾಭ ಗಳಿಸಿದ್ದಾರೆ. ಈ ಹಣವನ್ನು ಬಳಸಿ ನ್ಯೂಯಾರ್ಕ್ನಲ್ಲಿ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ ಎಂದು ಅಮೆರಿಕದ ನ್ಯಾಯ ಇಲಾಖೆ ಹೇಳಿದೆ. ಈ ಅಪಾರ್ಟ್ಮೆಂಟ್ಗಳನ್ನು ಹರಾಜು ಹಾಕಿ, ಭ್ರಷ್ಟ ಅಧಿಕಾರಿಗಳು ತಮ್ಮ ಅಪರಾಧ ಕೃತ್ಯಗಳಿಂದ ಪಡೆದ ಲಾಭದ ಹಣವನ್ನು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಿನಿಯೋಗಿಸುವುದಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಪ್ರಸಾರ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ನ್ಯೂಯಾರ್ಕ್ ಪೂರ್ವಜಿಲ್ಲೆಯ ಅಟಾರ್ನಿ ಬ್ರಿಯಾನ್ ಪೀಸ್ ಹೇಳಿದ್ದಾರೆ.
ಕಳೆದ ಶುಕ್ರವಾರ ರಶ್ಯ ರಾಜಧಾನಿ ಮಾಸ್ಕೋದ ಸಭಾಂಗಣದಲ್ಲಿ ನಡೆದಿದ್ದ ಗುಂಡಿನ ದಾಳಿ ಮತ್ತು ಸ್ಫೋಟ ಪ್ರಕರಣದಲ್ಲಿ ಐಸಿಸ್ ಬಂದೂಕುಧಾರಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೇ 22ರವರೆಗೆ ವಿಚಾರಣೆ ಪೂರ್ವ ಕಸ್ಟಡಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಗಂಭೀರ ಗಾಯಗೊಂಡಿದ್ದ 5 ಮಂದಿಯಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 140ಕ್ಕೇರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ` ಮಾಸ್ಕೋದಲ್ಲಿ ನಡೆದ ದಾಳಿಯನ್ನು ಐಸಿಸ್ ನಡೆಸಿದೆ ಎಂಬುದನ್ನು ನಂಬಲು ಕಷ್ಟವಾಗಿದೆ’ ಎಂದಿದ್ದಾರೆ. ದಾಳಿಯನ್ನು ಜಾಗತಿಕ ಮಟ್ಟದಲ್ಲಿ ಖಂಡಿಸಿ ಸಂತಾಪ ಸೂಚಿಸಲಾಗಿದೆ. ಆದರೆ ಉಕ್ರೇನ್ ಅಧ್ಯಕ್ಷರು ಮಾತ್ರ ಸಂತಾಪದ ಮಾತನಾಡದೆ, ಈ ದಾಳಿಗೆ ರಶ್ಯವನ್ನೇ ಆರೋಪಿಸುವ ಪ್ರಯತ್ನ ನಡೆಸಿರುವುದು ಸಂಶಯಾಸ್ಪದವಾಗಿದೆ’ ಎಂದು ಅವರು ಹೇಳಿದ್ದಾರೆ.
ಲಂಡನ್ ನಲ್ಲಿರುವ ನೀರವ್ ಮೋದಿಗೆ ಸೇರಿದ ಐಷಾರಾಮಿ ಫ್ಲ್ಯಾಟ್ ಮಾರಾಟಕ್ಕೆ ಬ್ರಿಟನ್ ನ್ಯಾಯಾಲಯ ಅನುಮತಿ ನೀಡಿದೆ. ಟ್ರಸ್ಟ್ ನ ಹಿಡಿತದಲ್ಲಿರುವ ಈ ಅಪಾರ್ಟ್ ಮೆಂಟ್ ನ್ನು ಮಾರಾಟ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿರುವ ನ್ಯಾಯಾಲಯ ಅಪಾರ್ಟ್ ಮೆಂಟ್ ಗೆ ಕನಿಷ್ಟ 5.25 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳ ಮೌಲ್ಯವನ್ನು ನಿಗದಿಪಡಿಸಲು ಕೋರ್ಟ್ ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ಟ್ರೈಡೆಂಟ್ ಟ್ರಸ್ಟ್ ಕಂಪನಿ (ಸಿಂಗಪುರ) ಪಿಟಿಇ ಲಿಮಿಟೆಡ್ ಹಕ್ಕುದಾರರಾಗಿದ್ದು, ಮಧ್ಯ ಲಂಡನ್ನ ಮೇರಿಲ್ಬೋನ್ ಪ್ರದೇಶದಲ್ಲಿ ತನ್ನ ಅಪಾರ್ಟ್ಮೆಂಟ್ ಆಸ್ತಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಟ್ರಸ್ಟ್ನ ಆಸ್ತಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿನ ಬೃಹತ್ ವಂಚನೆಯ ಆದಾಯವನ್ನು ಪ್ರತಿನಿಧಿಸುತ್ತದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದೆ. ಇದಕ್ಕಾಗಿ ನೀರವ್ ಹಸ್ತಾಂತರ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. “ಜಿಬಿಪಿ 5.25 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಸ್ತಿಯನ್ನು ಮಾರಾಟ ಮಾಡಲು ಇದು ಸಮಂಜಸವಾದ ನಿರ್ಧಾರವಾಗಿದೆ ಎಂಬುದು ಮನವರಿಕೆಯಾಗಿದೆ ಎಂದು ಮಾಸ್ಟರ್ ಬ್ರೈಟ್ವೆಲ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಇ.ಡಿ ಪರವಾಗಿ…