Author: Author AIN

ಟಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಸಿನಿಮಾಗಳಿಗಿಂತ ಹೆಚ್ಚಾಗಿ ಐಟಂ ಸಾಂಗ್ ಮೂಲಕವೇ ಸದ್ದು ಮಾಡ್ತಿದ್ದಾರೆ. ಜೈಲರ್ ಸಿನಿಮಾದ ಬಳಿಕ ನಟಿ ಮತ್ತೊಂದು ಸಿನಿಮಾದ ಸ್ಪೆಷಲ್ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ. ಈ ಮೊದಲು ‘ಕೆಜಿಎಫ್​’, ‘ಜೈಲರ್​’ ಮುಂತಾದ ಸಿನಿಮಾಗಳ ಸ್ಪೆಷಲ್​ ಸಾಂಗ್​ಗಳಲ್ಲಿ ಕುಣಿದಿದ್ದ ತಮನ್ನಾ ಇದೀಗ ‘ಸ್ತ್ರೀ 2’ ಸಿನಿಮಾದ ಐಟಂ ಸಾಂಗ್​ನಲ್ಲಿ ಕಣ್ಮನ ಸೆಳೆಯುವಂತೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಲು ಈ ಸಾಂಗ್ ಕಾರಣ ಆಗಿದೆ. ಈ ಹಿಂದೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ತಮನ್ನಾ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಅಮರ್​ ಕೌಶಿಕ್​ ಅವರು ‘ಸ್ತ್ರೀ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ದಿನೇಶ್​ ವಿಜನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆಅಂತೆಯೇ ಈ ಸ್ತ್ರೀ 2 ನಲ್ಲೂ ತಮನ್ನಾ ಸೊಂಟ ಬಳುಕಿಸಿದ್ದು ಈ ಹಾಡು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗಸ್ಟ್​ 15ರಂದು ‘ಸ್ತ್ರೀ…

Read More

ಮೌರಿಟಾನಿಯಾದ ರಾಜಧಾನಿ ನೌವಾಕ್ಚೊಟ್ ಬಳಿ 300 ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ದೋಣಿ ಮಗುಚಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಜುಲೈ 22, 2024 ರಂದು ನೌವಾಕ್ಚೊಟ್ ಬಳಿ ದೋಣಿ ಮುಳುಗುವ ಮೊದಲು ಸುಮಾರು 300 ಜನರು ಗಾಂಬಿಯಾದಲ್ಲಿ ಪಿರೋಗ್ ಹತ್ತಿದರು ಮತ್ತು ಸಮುದ್ರದಲ್ಲಿ ನಾಲ್ಕು ದಿನಗಳನ್ನು ಕಳೆದರು” ಎಂದು ಐಒಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬಿಡುಗಡೆಯ ಪ್ರಕಾರ, ಮೌರಿಟಾನಿಯನ್ ಕೋಸ್ಟ್ ಗಾರ್ಡ್ 120 ಜನರನ್ನು ರಕ್ಷಿಸಿದ್ದು, ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬದುಕುಳಿದವರಲ್ಲಿ, ಹತ್ತು ಜನರನ್ನು ವೈದ್ಯಕೀಯ ಆರೈಕೆಗಾಗಿ ತುರ್ತಾಗಿ ಆಸ್ಪತ್ರೆಗಳಿಗೆ ಕಳುಹಿಸಲಾಯಿತು ಮತ್ತು ನಾಲ್ಕು ಅನಾಥ ಮತ್ತು ಬೇರ್ಪಟ್ಟ ಮಕ್ಕಳನ್ನು ಗುರುತಿಸಲಾಗಿದೆ.

Read More

ಪ್ಯಾರೀಸ್ ನಲ್ಲಿ ನಡೆಯಲಿರುವ 2024ರ ಒಲಂಪಿಕ್ಸ್ ಆಚರಣೆಗೆ ಅಡಚಣೆ ಉಂಟು ಮಾಡಲು ಯೋಜಿಸಿದ್ದ ರಷ್ಯಾ ಪ್ರಜೆಯನ್ನು ಫ್ರಾನ್ಸ್ ನ ರಾಜಧಾನಿಯಲ್ಲಿ ಬಂಧಿಸಲಾಗಿದೆ. ಬಂಧಿತ ರಷ್ಯಾ ಪ್ರಜೆ 14 ವರ್ಷಗಳಿಂದ ಪ್ಯಾರಿಸ್ ನಲ್ಲಿ ವಾಸವಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಾಳೆ (ಜು.26) ರಂದು ಸೀನ್ ನದಿ ದಡದಲ್ಲಿ ದೋಣಿ ಮೆರವಣಿಗೆ  ಒಳಗೊಂಡ ಕಾರ್ಯಕ್ರಮದ ಮೂಲಕ ಒಲಂಪಿಕ್ಸ್ ಗೆ ಚಾಲನೆ ಸಿಗಲಿದೆ.  ಪ್ಯಾರಿಸ್‌ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ. ಫ್ರೆಂಚ್ ಮಾಧ್ಯಮದ ಪ್ರಕಾರ, ಬಂಧಿತ ವ್ಯಕ್ತಿ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ), ರಷ್ಯಾದ ಆಂತರಿಕ ಭದ್ರತೆ ಮತ್ತು ಪ್ರತಿ-ಗುಪ್ತಚರ ಸೇವೆಯ ಏಜೆಂಟ್ ಆಗಿದ್ದಾನೆ ಎಂದು ತಿಳಿದುಬಂದಿದೆ.

Read More

ಜುಲೈ 23ರಂದು ಎದುರಾಳಿಗಳಾದ ಫತಾ ಮತ್ತು ಹಮಾಸ್ ಸೇರಿದಂತೆ 12ಕ್ಕೂ ಹೆಚ್ಚು ಪ್ಯಾಲೆಸ್ತೀನಿ ಸಂಘಟನೆಗಳು ಬೀಜಿಂಗ್‌ನ ಬೆಂಬಲದೊಡನೆ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. 12ಕ್ಕೂ ಹೆಚ್ಚು ಪ್ಯಾಲೆಸ್ತೀನಿ ಸಂಘಟನೆಗಳು ಒಂದಾಗಿ ತಾತ್ಕಾಲಿಕ ಒಕ್ಕೂಟ ಸರ್ಕಾರ ಸ್ಥಾಪಿಸಿಕೊಂಡಿವೆ. ಇದನ್ನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶ್ಲಾಘಿಸಿದ್ದು, ಪ್ರಸ್ತುತ ‘ಬೀಜಿಂಗ್ ಒಪ್ಪಂದ’ ಪ್ಯಾಲೆಸ್ತೀನ್ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಆದರೆ, ಪ್ಯಾಲೆಸ್ತೀನಿಯನ್ ಸಂಘಟನೆಗಳ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಚೀನಾ ನೇತೃತ್ವದಲ್ಲಿ ನಡೆದಿರುವ ಒಪ್ಪಂದ ಈ ಅಸಮಾಧಾನಗಳನ್ನು ಮೀರುವ ಶಕ್ತಿ ಹೊಂದಿರುವ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಸ ಒಪ್ಪಂದದ ಕುರಿತ ಮಾತುಕತೆಗಳು ಭಾನುವಾರ, ಜುಲೈ 21ರಂದು ಆರಂಭಗೊಂಡವು. ಈ ಮೂಲಕ 2024ರಲ್ಲಿ ಎರಡನೇ ಬಾರಿಗೆ ಫತಾ ಮತ್ತು ಹಮಾಸ್ ಪ್ರತಿನಿಧಿಗಳು ಬೀಜಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ಈಗಾಗಲೇ ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ, ಚೀನಾ ಜಾಗರೂಕವಾಗಿ ಮಧ್ಯ ಪೂರ್ವ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಲು ಪ್ರಯತ್ನ…

Read More

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸದ್ಯ ರಾಜಕೀಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡಿರುವ ಸಿನಿಮಾಗಳನ್ನು ಕಂಪ್ಲೀಟ್ ಮಾಡಬೇಕಿದೆ. ಇದೀಗ ಪವನ್ ಕಲ್ಯಾಣ್ ನಟನೆಯ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಸಿಕ್ಕಿದ್ದು, ಪವನ್‌ ಕಲ್ಯಾಣ್‌ ಜೊತೆ ನಟಿ ಅನಸೂಯ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನಸೂಯ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಈ ವಿಚಾರವನ್ನು ರಿವೀಲ್ ಮಾಡುತ್ತಿದ್ದೇನೆ. ನಾನು ಪವನ್ ಸರ್ ಜೊತೆ ಡ್ಯಾನ್ಸ್ ಮಾಡಲಿದ್ದೇನೆ. ಈ ಸಾಂಗ್ ಬಿಗ್ ಸ್ಕ್ರಿನ್‌ನಲ್ಲಿ ಅಬ್ಬರಿಸಲಿದೆ ಎಂದು ಹೇಳಿದ್ದಾರೆ. ಆದರೆ, ಅವರು ಹೆಜ್ಜೆ ಹಾಕೋದು ಯಾವ ಸಿನಿಮಾದಲ್ಲಿ ಎಂಬ ಗುಟ್ಟನ್ನು ರಟ್ಟು ಮಾಡಿಲ್ಲ. ಇನ್ನೂ ‘ಉಸ್ತಾದ್ ಭಗತ್ ಸಿಂಗ್’, ‘ಒಜಿ’, `ಹರಿ ಹರ ವೀರ ಮಲ್ಲು’ ಸಿನಿಮಾಗಳು ಪವನ್ ಕೈಯಲ್ಲಿವೆ. ಈ ಪ್ರಾಜೆಕ್ಟ್‌ಗಳಲ್ಲಿ ಯಾವುದು ಅನಸೂಯ ಹೇಳ್ತಿರುವ ಚಿತ್ರ ಎಂಬುದನ್ನು ಕಾದುನೋಡಬೇಕಿದೆ. ಇನ್ನೂ ‘ಪುಷ್ಪ’ ಸಿನಿಮಾದ ಮೂಲಕ ಅನಸೂಯ ಜನಪ್ರಿಯತೆ ಸಿಕ್ಕಿದೆ. ‘ಪುಷ್ಪ 2’ಗಾಗಿ ನಟಿ ಎದುರು ನೋಡ್ತಿದ್ದಾರೆ.…

Read More

ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್‌ಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ ನೋಟಿಸ್‌ ನೀಡಿದೆ. ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ನೋಟಿಸ್ ಜಾರಿ ಮಾಡಿದ್ದು ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಸಂಸದೆ ಕಂಗನಾಗೆ ಸೂಚನೆ ನೀಡಿದ್ದಾರೆ. ಬಿಜೆಪಿ ಸಂಸದೆ ವಿರುದ್ಧ ಕಿನ್ನೌರ್‌ ನಿವಾಸಿ ಲಾಯಿಕ್‌ ರಾಮ್‌ ನೇಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಆಯ್ಕೆ ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಂಡಿ ಕ್ಷೇತ್ರದಿಂದ ನಾನು ಕೂಡ ಸ್ಪರ್ಧಿಸಲು ಬಯಸಿದ್ದೆ. ಆದರೆ ನನ್ನ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಪ್ಪಾಗಿ ತಿರಸ್ಕರಿಸಲಾಗಿದೆ. ನನ್ನ ನಾಮಪತ್ರವನ್ನು ಸರಿಯಾಗಿ ಪರಿಶೀಲಿಸಿ ಅಂಗೀಕರಿಸಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ. ಕಂಗನಾ ಅವರು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು 74,755 ಮತಗಳಿಂದ ಸೋಲಿಸಿದ್ದರು. ಸಿಂಗ್ 4,62,267 ಮತಗಳನ್ನು ಪಡೆದಿದ್ದರು. ಕಂಗನಾ ರಣಾವತ್‌ 5,37,002 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು.

Read More

ಟಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ನಟನೆಯಾ ಜೊತೆಗೆ ಡ್ಯಾನ್ಸ್ ಗೂ ಸೈ ಅನ್ನೋದು ಈಗಾಗಲೇ ಗೊತ್ತಾಗಿದೆ. ತಮನ್ನಾಗೆ ಐಟಂ ಡ್ಯಾನ್ಸ್ ನಲ್ಲಿ ನಟಿಸಲು ಸಾಕಷ್ಟು ಆಫರ್ ಗಳು ಬರ್ತಿವೆ. ಈ ಹಿಂದೆ ಜೈಲರ್ ಸಿನಿಮಾದಲ್ಲಿ ಕಾವಾಲಯ್ಯ ಹಾಡಿಗೆ ಮಸ್ತ್ ಆಗಿ ಸ್ಟೆಪ್ ಹಾಕಿದ್ದ ನಟಿ ಇದೀಗ ಮತ್ತೊಂದು ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದಾರೆ. ತಮನ್ನಾ  ‘ಸ್ತ್ರಿ 2’ ಸಿನಿಮಾದಲ್ಲಿ ಹೊಸ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೆ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ನಟಿಯ ಹೊಸ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ತಮನ್ನಾ ಯಾವುದಾದರೂ ಹಾಡಿಗೆ ಹೆಜ್ಜೆ ಹಾಕ್ತಾರೆ ಅಂದರೆ ಆ ಹಾಡು ಸೂಪರ್ ಹಿಟ್ ಆಗುತ್ತೆ ಎಂದೇ ಅರ್ಥ. ಅದಕ್ಕೆ ‘ಕೆಜಿಎಫ್’ ಸಿನಿಮಾದ ಜೋಕೆ ಮತ್ತು ‘ಜೈಲರ್’ ಸಿನಿಮಾದ ಕಾವಾಲಯ್ಯ ಹಾಡುಗಳೇ ಸಾಕ್ಷಿ. ಇದೀಗ ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಟನೆಯ ‘ಸ್ತ್ರಿ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಆಜ್ ಕಿ ರಾತ್’ ಎಂಬ…

Read More

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಈಗಾಗಲೇ ಸಾಕಷ್ಟು ಮಂದಿ ಭೇಟಿಯಾಗಿ ಬಂದಿದ್ದಾರೆ. ದರ್ಶನ್ ಬದಲಾಗಿದ್ದಾರೆ, ಅವರಿಗೆ ಘಟನೆಯ ಕುರಿತು ಪಶ್ಚತಾಪವಿದೆ ಎಂದು ಹೇಳುತ್ತಿದ್ದಾರೆ. ಆದರೆ ದರ್ಶನ್ ಅವರನ್ನು ಈ ಹಿಂದೆ ಅದೇ ಜೈಲಿನಲ್ಲಿ ನೋಡಿದ್ದ ಅಧಿಕಾರಿಯೊಬ್ಬರ ಹೇಳಿಕೆ ಶಾಕಿಂಗ್ ಆಗಿದೆ. ‘ಈ ಹಿಂದೆಯೂ ಸಹ ದರ್ಶನ್ ತಪ್ಪು ಮಾಡಿ ಜೈಲು ಸೇರಿದ್ದರು, ಆಗ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಹೇಳಿದ್ದರು. ಆದರೆ ಅವರಲ್ಲಿ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದಿದ್ದಾರೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಇದು ಎರಡನೇ ಬಾರಿ. 2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್ ಒಂದು ತಿಂಗಳ ಬಳಿಕ ಹೊರ ಬಂದಿದ್ದರು. ಆಗ ಜೈಲಧಿಕಾರಿ ಆಗಿದ್ದ ಸತೀಶ್ ಅವರ ಬಳಿ ಮಾತನಾಡಿದ್ದ ದರ್ಶನ್, ‘ಹೆಂಡತಿ ಬಳಿ ಕ್ಷಮೆ ಕೇಳ್ತೀನಿ, ಮತ್ತೆಂದೂ ಹೀಗೆ ಮಾಡುವುದಿಲ್ಲಇನ್ಮುಂದೆ ಇಂತಹ ತಪ್ಪು ಮಾಡಲ್ಲ’ ಎಂದಿದ್ದರಂತೆ. ಆದರೆ ದರ್ಶನ್ ವರ್ತನೆಯಲ್ಲಿ…

Read More

ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ, ಎಸ್. ಸುಧೀಂದ್ರ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.  ಆತ್ಮಹತ್ಯೆ ಮಾಡಿಕೊಂಡ ತಿಂಗಳ‌ ಬಳಿಕ ಸಿಕ್ಕ  ಪತ್ರ ಆಧರಿಸಿ ಕೇಸ್  ದಾಖಲಾಗಿತ್ತು. ಇದೀಗ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಸೌಂದರ್ಯ ಜಗದೀಶ್ ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಗದೀಶ್ ಪವಿತ್ರಾಗೌಡಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿ ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್ ಹೇಳಿದ್ದರು. ಸೌಂದರ್ಯ ಜಗದೀಶ್  ಬ್ಲಾಕ್ ಮೇಲ್ ಗೆ ಒಳಗಾಗಿರುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ತಡೆ ನೀಡಬಾರದೆಂದು ಪತ್ನಿ ಶಶಿರೇಖಾ ಪರ ವಕೀಲರ ಮನವಿ ಮಾಡಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್‌ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ತಿಂಗಳು ಕಳೆದಿದೆ. ಘಟನೆಯ ಕುರಿತು ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಬಹುಭಾಷಾ ನಟ ಕಿಶೋರ್ ಮಾತನಾಡಿದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ತನಿಖೆ ನಡೆಯುತ್ತಿದೆ. ಹೈಪ್ರೊಫೈಲ್ ಕೇಸ್ ಆಗಿರೋದ್ರಿಂದ ಗಮನ ಕೊಟ್ಟು ತನಿಖೆ ಮಾಡುತ್ತಾರೆ. ಆಗಬಾರದ ಕೆಲಸ ಆಗೋಗಿದೆ ಬಗೆಹರಿಸಬೇಕು ಎಂದಿದ್ದಾರೆ ಕಿಶೋರ್. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಖಂಡಿತಾ ಪರಿಣಾಮ ಬಿರುತ್ತದೆ. ಇನ್ನು ಈ ಕೇಸ್ ತನಿಖೆ ಹಂತದಲ್ಲಿದೆ. ಕೋರ್ಟ್‌ನಲ್ಲಿದೆ. ಹಾಗಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ಬಗ್ಗೆ ಮಾತಾಡೋದು ಸೂಕ್ತವಲ್ಲ. ರೇಣುಕಾಸ್ವಾಮಿ ದುಡಿಯುವ ವ್ಯಕ್ತಿಯಾಗಿದ್ದರು. ಅವರು ಇಲ್ಲ ಅಂದ್ಮೇಲೆ ಆ ಕುಟುಂಬ ಬೀದಿಗೆ ಬಂದ ಹಾಗೆ ಎಂದು ಕಿಶೋರ್ ಹೇಳಿದ್ದಾರೆ. ಬೇರೆ ನಟರ ಸಿನಿಮಾ ನೋಡಲ್ಲ ಎನ್ನುವ ದರ್ಶನ್ ಫ್ಯಾನ್ಸ್‌ಗೆ ಬಗ್ಗೆ ಮಾತನಾಡಿದ ನಟ, ಸಿನಿಮಾವನ್ನ ಸಿನಿಮಾವಾಗಿ ನೋಡುವ ಅಭ್ಯಾಸವನ್ನ ಪ್ರೇಕ್ಷಕರು ನಾವು ಬೆಳೆಸಿಕೊಳ್ಳಬೇಕು. ಅಭಿಮಾನಿಗಳನ್ನು ಕೇವಲ ಮನರಂಜನೆಗಾಗಿ…

Read More