ಮಿಸ್ ಯೂನಿವರ್ಸ್ ಪಟ್ಟ ಪಡಿಬೇಕು ಅಂದರೆ ಅದು ಸುಮ್ಮನೆ ಮಾತನಲ್ಲ. ಅದರಲ್ಲೂ 60ರ ಹರೆಯದಲ್ಲಿ ಮಿಸ್ ಯುನಿವರ್ಸ್ ಕಿರಿಟ ತೊಟ್ಟು ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾರೆ ಈ 60 ವರ್ಷ ವಯಸ್ಸಿನ ಪತ್ರಕರ್ತೆ. 60 ವರ್ಷದ ಅರ್ಜೆಂಟೀನಾದ ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್ ಸೌಂದರ್ಯ ಸ್ಪರ್ಧೆಯ ಸ್ಟೀರಿಯೊಟೈಪ್ ಬ್ರೇಕ್ ಮಾಡಿ ಈಗ ವಿಶ್ವಾದ್ಯಂತ ಸುದ್ದಿಯಾಗಿದ್ದಾರೆ. ಬ್ಯೂನಸ್ ಐರಿಸ್ ಪ್ರಾಂತ್ಯದ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಉಳಿಸಿದ್ದಾರೆ ಈ 60ರ ಮಹಿಳೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾ ಮೂಲದ ರೋಡ್ರಿಗಸ್ ಕೇವಲ ಸೌಂದರ್ಯವತಿ ಮಾತ್ರವಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತೆ ಕೂಡಾ. ಇವರ ಗೆಲುವು ಸೌಂದಯ ಸ್ಪರ್ಧೆಗಳ ಪ್ರಮುಖ ಮಾನದಂಡವಾದ ವಯಸ್ಸನ್ನೇ ಲೆಕ್ಕಕ್ಕೆ ಇಲ್ಲದಂತೆ ಮಾಡಿ ಮೇಲುಗೈ ಸಾಧಿಸಿದೆ. ಅಂತಹ ಪ್ರತಿಷ್ಠಿತ ಸೌಂದರ್ಯ ಪ್ರಶಸ್ತಿಯನ್ನು ಪಡೆದ ತನ್ನ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೇ 2024 ರಂದು ನಡೆಯಲಿರುವ…
Author: Author AIN
ಸೀತಾ ರಾಮಂ ಸಿನಿಮಾದ ಬಳಿಕ ನಟಿ ಮೃಣಾಲ್ ಠಾಕೂರ್ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿಯನ್ನು ಡಿ-ಗ್ಲಾಮ್ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಬಯಸುತ್ತಾರೆ. ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಸ್ವತಃ ಮೃಣಾಲ್ ಠಾಕೂರ್ ಗೆ ಇಷ್ಟವಿಲ್ಲ. ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ಕಿಸ್ಸಿಂಗ್ ಅಥವಾ ಬೆಡ್ರೂಮ್ ದೃಶ್ಯಗಳಲ್ಲಿ ನಟಿಸಲು ಮೃಣಾಲ್ ಠಾಕೂರ್ ಹಿಂದೇಟು ಹಾಕುತ್ತಾರೆ. ಆ ರೀತಿಯ ಸೀನ್ಗಳು ಅವರಿಗೆ ಇಷ್ಟ ಇಲ್ಲ ಎಂಬುದು ಒಂದು ಕಾರಣ. ಪೋಷಕರು ಅನುಮತಿ ನೀಡುವುದಿಲ್ಲ ಎಂಬುದು ಮತ್ತೊಂದು ಕಾರಣ. ಹೌದು, ಅಂಥ ದೃಶ್ಯಗಳು ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳಲು ಮೃಣಾಲ್ ಠಾಕೂರ್ ಅವರ ತಂದೆ-ತಾಯಿ ಅನುಮತಿ ನೀಡುವುದಿಲ್ಲ. ಆ ವಿಚಾರವನ್ನು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ಇಂಥ ಸೀನ್ನಲ್ಲಿ ನಟಿಸುವಾಗ ಭಯ ಆಗುತ್ತಿತ್ತು ಎಂದು ಕೂಡ ಅವರು ಹೇಳಿದ್ದಾರೆ. ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಇದೆ ಎಂಬ ಕಾರಣಕ್ಕೆ ಮೃಣಾಲ್ ಠಾಕೂರ್ ಅವರು ಅನೇಕ ಆಫರ್ಗಳನ್ನು ಮಿಸ್ ಮಾಡಿಕೊಂಡಿದ್ದು ಉಂಟು. ಆದರೆ ಎಲ್ಲಿಯವರೆಗೂ ಅವಕಾಶಗಳನ್ನು…
ಬಹುಭಾಷಾ ನಟಿ ವರಲಕ್ಷ್ಮಿ ಶರತ್ಕುಮಾರ್ ಕಳೆದ ಮಾರ್ಚ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ವರಲಕ್ಷ್ಮಿ ಮದುವೆಯಾಗುತ್ತಿರುವ ಹುಡುಗ ನಿಕೋಲಯ್ ಸಚ್ದೇವ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನರು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಹಾಗಂತ ಅದಕ್ಕೆಲ್ಲ ವರಲಕ್ಷ್ಮಿ ಅವರು ಬೇಸರ ಮಾಡಿಕೊಂಡಿಲ್ಲ. ತಮ್ಮ ಭಾವಿ ಪತಿ ಸುಂದರವಾಗಿಯೇ ಇದ್ದಾರೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ಮುಂಬೈನಲ್ಲಿ ಗ್ಯಾಲರಿಸ್ಟ್ ಆಗಿರುವ ಹಾಗೂ ಪವರ್ ಲಿಫ್ಟರ್ ಆಗಿ ಗುರುತಿಸಿಕೊಂಡಿರುವ ನಿಕೋಲಯ್ ಸಚ್ ದೇವ್ ಜೊತೆ ವರಲಕ್ಷ್ಮಿ ಶರತ್ ಕುಮಾರ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ವಿತಾರ್ಥದ ಬಳಿಕ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡರು. ಆ ಫೋಟೋದಲ್ಲಿ ನಿಕೋಲಯ್ ಸಚ್ದೇವ್ ಅವರನ್ನು ನೋಡಿ ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ ಅವುಗಳಿಗೆಲ್ಲ ವರಲಕ್ಷ್ಮೀ ಶರತ್ಕುಮಾರ್ ತಲೆ ಕೆಡಿಸಿಕೊಂಡಿಲ್ಲ. ನಿಕೋಲಯ್ ಸಚ್ದೇವ್ ಅವರಿಗೆ ಈಗಾಗಲೇ ಮದುವೆ ಆಗಿ, ವಿಚ್ಛೇದನ ಕೂಡ ಆಗಿದೆ. ಇದೀಗ ವರಲಕ್ಷ್ಮಿ ಶರತ್ ಕುಮಾರ್ ಜೊತೆ ಎರಡನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ವರಲಕ್ಷ್ಮಿ ಮಾತನಾಡಿದ್ದಾರೆ. ‘ನನ್ನ…
ಟಾಲಿವುಡ್ ನಟಿ ಸಮಂತಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಯಾಮ್ಗೆ ಹಲವು ನಟ-ನಟಿಯರು ಬರ್ತ್ಡೇಗೆ ವಿಶೇಷವಾಗಿ ಶುಭಕೋರಿದ್ದಾರೆ. ಇದೀಗ ವಿಜಯ್ ದೇವರಕೊಂಡ ಸಮಂತಾಗೆ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತ್ಡೇ ಸಾಮಿ, ಸದಾ ಖುಷಿಯಾಗಿರಿ ಮತ್ತು ಆರೋಗ್ಯವಾಗಿರಿ ಎಂದು ವಿಜಯ್ ವಿಶೇಷವಾಗಿ ನಟಿಗೆ ಶುಭಕೋರಿದ್ದಾರೆ. ‘ಖುಷಿ’ ಸಿನಿಮಾ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಸಮಂತಾ ಜೊತೆ ಆತ್ಮೀಯವಾಗಿದ್ದ ಫೋಟೋಗಳನ್ನು ಶೇರ್ ಮಾಡಿ ಶುಭ ಹಾರೈಸಿದ್ದಾರೆ. ವಿಜಯ್ ಪೋಸ್ಟ್ಗೆ ಸ್ಯಾಮ್ ಕೂಡ ರಿಯಾಕ್ಟ್ ಮಾಡಿ, ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ, ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾದ ಸಮಂತಾ ಪುಷ್ಪ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡು ಸಖತ್ ಸದ್ದು ಮಾಡಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ…
ಪಶ್ಚಿಮ ಕಾಂಬೋಡಿಯಾದ ಸೇನಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 20 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ತಿಳಿಸಿದ್ದಾರೆ. ಪ್ರಧಾನಿ ಹನ್ ಮಾನೆಟ್ ಅವರು ಫೇಸ್ಬುಕ್ನಲ್ಲಿ ಘಟನೆಯನ್ನು ವರದಿ ಮಾಡಿದ್ದು, ಯೋಧರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 27, 2024 ರ ಶನಿವಾರ ಮಧ್ಯಾಹ್ನ ಕಂಪಾಂಗ್ ಸ್ಪ್ಯೂ ಪ್ರಾಂತ್ಯದ ಮಿಲಿಟರಿ ವಿಲೇಜ್ 3 ರಲ್ಲಿ ಸ್ಫೋಟ ಸಂಭವಿಸಿದೆ ಎಂದು ಕೇಳಿದಾಗ ನನಗೆ ಆಘಾತವಾಯಿತು. ಈ ಘಟನೆಯಲ್ಲಿ 20 ಸೈನಿಕರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು. ಘಟನೆಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ. ದುರಂತದಲ್ಲಿ ಮಡಿದ ಸೈನಿಕರ ಅಂತ್ಯಕ್ರಿಯೆಯ ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. ಘಟನೆಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ತಲಾ 20 ಮಿಲಿಯನ್ ಡಾಲರ್ ಹಾಗೂ ಗಾಯಗೊಂಡ ಸೈನಿಕರಿಗೆ 20 ಮಿಲಿಯನ್ ರಿಯೆಲ್ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ದಕ್ಷಿಣ ಚೀನಾದ ಗುವಾಂಗ್ಝೌನಲ್ಲಿ ಸುಂಟರಗಾಳಿಗೆ ಐವರು ಸಾವನ್ನಪ್ಪಿದ್ದು, 33 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಚೀನಾದ ಸುಮಾರು 19 ಮಿಲಿಯನ್ ಜನಸಂಖ್ಯೆಯ ಗುವಾಂಗ್ಝೌ ನಗರದಲ್ಲಿ 3 ತೀವ್ರತೆಯ ಚಂಡಮಾರುತಗಳು ಕಂಡುಬರುತ್ತಿವೆ. ಸುಂಟರಗಾಳಿಯಿಂದ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ, ಆದರೆ ಯಾವುದೇ ವಸತಿ ಮನೆಗಳು ಕುಸಿದಿಲ್ಲ. ಕ್ಸಿನ್ಹುವಾವನ್ನು ಉಲ್ಲೇಖಿಸಿ, ಬೈಯುನ್ ಜಿಲ್ಲೆಯ ಲಿಯಾಂಗ್ಟಿಯಾನ್ ಗ್ರಾಮದಲ್ಲಿ ಹವಾಮಾನ ಕೇಂದ್ರವಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆಯ ವೇಳೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ವಾರದ ಆರಂಭದಲ್ಲಿ ಗುವಾಂಗ್ಡಾಂಗ್ ನಲ್ಲಿ ಪ್ರವಾಹದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಸಿಎನ್ಎನ್ ವರದಿಯ ಪ್ರಕಾರ, ಏಪ್ರಿಲ್ 16 ರಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ.
ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ, ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಜಕಾರ್ತಾ ಸಮಯ ಶನಿವಾರ 23:29 ಕ್ಕೆ (1629 ಜಿಎಂಟಿ) ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಗರುತ್ ರೀಜೆನ್ಸಿಯ ನೈಋತ್ಯಕ್ಕೆ 151 ಕಿ.ಮೀ ದೂರದಲ್ಲಿ ಮತ್ತು 10 ಕಿ.ಮೀ ಆಳದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ. ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ಮತ್ತು ಹತ್ತಿರದ ಬ್ಯಾಂಟೆನ್ ಪ್ರಾಂತ್ಯ, ಮಧ್ಯ ಜಾವಾ, ಯೋಗಕರ್ತಾ ಮತ್ತು ಪೂರ್ವ ಜಾವಾ ಪ್ರಾಂತ್ಯಗಳಲ್ಲಿಯೂ ಭೂಕಂಪನದ ಅನುಭವವಾಗಿದೆ ಎಂದು ಅದು ಹೇಳಿದೆ. ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ, ಸುಕಬುಮಿ ಪಟ್ಟಣ ಮತ್ತು ತಾಸಿಕ್ಮಾಲಯ ಪಟ್ಟಣದಲ್ಲಿ 4 ಎಂಎಂಐ (ಮಾರ್ಪಡಿಸಿದ ಮರ್ಕಲ್ಲಿ ತೀವ್ರತೆ) ಮತ್ತು ಪಶ್ಚಿಮ ಜಾವಾ ಪ್ರಾಂತ್ಯದ ರಾಜಧಾನಿ ಬಾಂಡುಂಗ್ ನಗರದಲ್ಲಿ 3 ರಿಂದ 4 ಎಂಎಂಐನಲ್ಲಿ ಭೂಕಂಪದ ತೀವ್ರತೆ ಕಂಡುಬಂದಿದೆ ಎಂದು ಏಜೆನ್ಸಿ ತಿಳಿಸಿದೆ.
ನಟಿ ಶ್ರುತಿ ಹಾಸನ್ ಹಾಗೂ ಶಾಂತನು ಹಜಾರಿಕಾ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದು ಲಿವಿಂಗ್ ಟುಗೆದರ್ನಲ್ಲಿ ಇದ್ದರೆ ಎಂದು ಹೇಳಲಾಗುತ್ತಿತ್ತು. ಸದ್ಯ ಶಾಂತನು ಹಾಗೂ ಶ್ರುತಿ ಹಾಸನ್ ಪ್ರೇಮದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನಡೆದುಕೊಂಡಿರೋ ರೀತಿಯೇ ಈ ಅನುಮಾನಕ್ಕೆ ಕಾರಣವಾಗಿದೆ. ಶ್ರುತಿ ಹಾಸನ್ ಅವರು ಹಾಗೂ ಶಾಂತನು ಈ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಇಬ್ಬರೂ ಅನ್ಫಾಲೋ ಮಾಡಿಕೊಂಡಿದ್ದಾರೆ. ಜೊತೆಗೆ ಶಾಂತನು ಜೊತೆಗಿನ ಫೋಟೋಗಳನ್ನು ಶ್ರುತಿ ಹಾಸನ್ ಡಿಲೀಟ್ ಮಾಡಿದ್ದಾರೆ. ಇದರಿಂದ ಇವರ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರೋ ಓರಿ ಅಲಿಯಾಸ್ ಅವತ್ರಮಣಿ ಅವರು ಶಾಂತನು ಅವರನ್ನು ಶ್ರುತಿ ಹಾಸನ್ ಪತಿ ಎಂದು ಕರೆದಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ಸ್ಪಷ್ಟನೆ ನೀಡಿದ್ದ ಶ್ರುತಿ ಅವರು, ಇದು ಸುಳ್ಳು ಎಂದಿದ್ದರು. ಇವರು ಮದುವೆ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಹೀಗಿರುವಾಗಲೇ ಇವರ ಮಧ್ಯೆ ವೈಮನಸ್ಸು…
ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಅಂದುಕೊಂಡಷ್ಟು ಮಟ್ಟಿಗೆ ಹೆಸರು ಮಾಡಲಿಲ್ಲ. ಆದರೆ ಚಂದ್ರು ಉತ್ತಮವಾಗಿ ಬಿಸ್ನೆಸ್ ಮಾಡಿದೆ ಎಂದು ಹೇಳಿಕೊಂಡಿದ್ದರು. ‘ಕಬ್ಜಾಗೆ ಚಂದ್ರು ಓವರ್ ಹೈಪ್ ಕೊಟ್ಟರು’ ಎಂಬರ್ಥದಲ್ಲಿ ಶಿವಣ್ಣ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಟ್ರೋಲ್ ಪೇಜ್ಗಳಲ್ಲಿ ಬಳಕೆ ಮಾಡಿಕೊಂಡು ಕಬ್ಜ ಸಿನಿಮಾದ ಬಗ್ಗೆ ಶಿವಣ್ಣಗೆ ಅಸಮಾಧಾನ ಇದೆ ಎಂದೆಲ್ಲ ಸುದ್ದಿ ಹಬ್ಬಿಸಲಾಯಿತು. ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಇತ್ತೀಚೆಗೆ ಚಂದ್ರು ಅವರು ತಮ್ಮ ನಿರ್ಮಾಣದ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾ ಘೋಷಿಸಿದ್ದರು. ಇದರಲ್ಲಿ ‘ಫಾದರ್’ ಕೂಡ ಒಂದು. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸ್ತಿರೊ ಈ ಚಿತ್ರಕ್ಕೆ ಅಮೃತಾ ಅಯ್ಯಂಗಾರ್ ನಾಯಕಿ. ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಇದಕ್ಕೆ ಶಿವಣ್ಣ ಆಗಮಿಸಿ ಸಾಥ್ ನೀಡಿದ್ದು, ಆರ್ ಚಂದ್ರು ಬಗ್ಗೆ ಮೆಚ್ಚುಗೆಯ ಮಾತುಗಳನ್ನು…
ಸ್ಯಾಂಡಲ್ ವುಡ್ ನಟಿ, ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಹಸೆಮಣೆ ಏರುತ್ತಿದ್ದಾರೆ. ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ವರಿಸಲಿದ್ದಾರೆ. ಕೊಂಕಣಿ ಸಾಂಪ್ರದಾಯದಂತೆ ವಿವಾಹ ನಡೆಯಲಿದ್ದು, ಈ ಬಗ್ಗೆ ಮಾನ್ವಿತಾ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಮದುವೆ ಬಳಿಕ ಯಾವೆಲ್ಲ ಪ್ಲ್ಯಾನ್ ಹೊಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 1ಕ್ಕೆ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ತಿಳಿಸಿದ್ದಾರೆ. ಮಾನ್ವಿತಾ ಅವರದ್ದು ಲವ್ ಮ್ಯಾರೇಜ್ ಎನ್ನುವ ಗಾಸಿಪ್ ಇದೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ನಮ್ಮದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಮದುವೆ ಆಗುತ್ತಿದ್ದೇವೆ. ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್ ಟುಗೆದರ್…