Author: Author AIN

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ ಅವಮಾನಿಸುತ್ತಿದ್ದರು, ಪಾತ್ರಗಳಿಗೆ ಆಯ್ಕೆ ಮಾಡುತ್ತಿರಲಿಲ್ಲ. ಕೊಟ್ಟ ಪಾತ್ರವನ್ನು ಸರಿಯಾಗಿ ನಿಭಾಯಿಸೋಕೆ ಬಿಡುತ್ತಿರಲಿಲ್ಲ. ಎಷ್ಟೋ ಸಲ ಮನೆಗೆ ಬಂದು ಅತ್ತಿದ್ದೇನೆ. ಈ ರಂಗಕ್ಕೆ ಯಾಕಾದರೂ ಬಂದೆ ಎಂದು ನೊಂದಿದ್ದೇನೆ. ಅಷ್ಟೊಂದು ಕಷ್ಟದಾಯಕ ಸಮಯವದು ಎಂದು ನೋವು ತೋಡಿಕೊಂಡಿದ್ದಾರೆ. ಕೆಲವು ನಟರ ತಮ್ಮ ಗರ್ಲ್ ಫ್ರೆಂಡ್ ಗಾಗಿ ನನ್ನ ಪಾತ್ರಗಳನ್ನು ಕಸಿದುಕೊಳ್ಳುತ್ತಿದ್ದರು. ಅದು ಮತ್ತೊಂದು ರೀತಿಯ ಹಿಂಸೆ ಆಗಿರುತ್ತಿತ್ತು. ಎಲ್ಲವನ್ನೂ ಸಂಯಮದಿಂದ ನಿಭಾಯಿಸಿಕೊಂಡು ಬಂದೆ. ನಂತರದ ದಿನಗಳಲ್ಲಿ ಅವೆಲ್ಲವೂ ದೂರವಾದವು. ಎಲ್ಲರೂ ನಾನು ಸುಖವಾಗಿ ಜೀವನ ನಡೆಸಿದೆ ಎಂದುಕೊಂಡಿದ್ದಾರೆ. ಅದೆಲ್ಲವೂ ಸುಳ್ಳು. ನಾನೂ ಕಷ್ಟ ಪಟ್ಟಿದ್ದೇನೆ ಎಂದು ಹೇಳಿದ್ದಾರೆ.

Read More

‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಶೋ ಮೂಲಕ ಖ್ಯಾತಿ ಘಳಿಸಿರುವ ನಟ ವಿನಯ್ ಗೌಡ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ವಿನಯ್ ಸಾಲು ಸಾಲು ಸಿನಿಮಾಗಳಿಗೆ ನಟಿಸಲು ಭರ್ಜರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ‘ಬಿಗ್ ಬಾಸ್’ ಅನೇಕರ ಬದುಕನ್ನು ಬದಲಿಸಿದೆ. ಇದರಲ್ಲಿ ವಿನಯ್ ಅವರ ಹೆಸರು ಸೇರ್ಪಡೆ ಆಗಿದೆ. ತಮಗೆ ಬಂದ ಸಿನಿಮಾ ಆಫರ್​ಗಳ ಬಗ್ಗೆ, ಬದುಕು ಬದಲಾದ ಬಗ್ಗೆ ವಿನಯ್ ಸಂತಸ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಬಳಿಕ ‘ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳವರೆಗೆ ನನ್ನನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬರ ಬಾಯಲ್ಲೂ ನನ್ನ ಹೆಸರು ಇದೆ’ ಎಂದಿದ್ದಾರೆ ವಿನಯ್. ವಿನಯ್ ಗೌಡ ಅವರು ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯಕ್ಕೆ ಅವರು ಕಿರುತೆರೆಯಲ್ಲಿ ಲೀಡ್​ರೋಲ್ ಮಾಡೋ ಆಲೋಚನೆಯಲ್ಲಿ ಇಲ್ಲ. ಅವರಿಗೆ ಕೈ ತುಂಬಾ ಸಿನಿಮಾ ಆಫರ್​ಗಳು ಸಿಕ್ಕಿವೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ…

Read More

ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಪೂಜಾ ಹೆಗ್ಡೆ ಸದ್ಯ ಒಪ್ಪಿಕೊಂಡ ಸಿನಿಮಾಗಳೆಲ್ಲಾ ಪ್ಲಾಪ್ ಆಗುತ್ತಿವೆ. ನಟಿಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು ಈ ಹಿನ್ನೆಲೆಯಲ್ಲಿ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ರು. ಆದರೆ ಪೂಜಾ ಹೆಗ್ಡೆ ನಟನೆಯ ಹಿಂದಿ ಸಿನಿಮಾವೂ ಸೈಲೆಂಟ್ ಆದ ಬಳಿಕ ಇದೀಗ ನಟಿ ಮತ್ತೆ ಟಾಲಿವುಡ್ ಗೆ ಮರಳಿದ್ದಾರೆ. ಮತ್ತೊಮ್ಮೆ ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಜೊತೆ ಪೂಜಾ ಹೆಗ್ಡೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ನಾಗಚೈತನ್ಯ ‘ತಾಂಡೇಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದ ಬಳಿಕ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ. ಹಿಂದಿ ಹಲವು ಬ್ಯುಸಿಯಿರುವ ಇರುವ ನಟಿ, ನಿರ್ದೇಶಕ ಕಾರ್ತಿಕ್ ದಂಡು ಬರೆದ ಕಥೆ ಕೇಳಿ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2024ರ ಅಕ್ಟೋಬರ್ ಶೂಟಿಂಗ್ ಶುರುವಾಗಲಿದೆ. 10 ವರ್ಷಗಳ ನಂತರ ಮತ್ತೆ ನಾಗಚೈತನ್ಯ ಜೊತೆ ಪೂಜಾ ಹೆಗ್ಡೆ ಕಾಣಿಸಿಕೊಳ್ತಿದ್ದಾರೆ.…

Read More

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ದುಬಾರಿ ವಸ್ತುಗಳನ್ನ ಬಳಸುವ ಮೂಲಕವೇ ಸದ್ದು ಮಾಡ್ತಿರ್ತಾರೆ. ಇತ್ತೀಚೆಗೆ ವಜ್ರಖಚಿತ ಮೊಬೈಲ್ ಬಳಕೆ ಮಾಡಿ ಸುದ್ದಿಯಾಗಿದ್ದ ನಟಿ ಇದೀಗ ಚಿನ್ನದ ಒಳ ಉಡುಪು ಧರಿಸಿ ಸದ್ದು ಮಾಡ್ತಿದ್ದಾರೆ. ಚಿನ್ನದ ಒಳ ಉಡುಪು ಧರಿಸಿ ಫೋಟೋಗೆ ಫೋಸ್ ಕೊಟ್ಟಿರುವ ನಟಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ತಾನು ಧರಿಸಿರುವ ಒಳ ಉಡುಪು ಚಿನ್ನದು ಎಂದು ಹೇಳಿಲ್ಲ. ನೆಟ್ಟಿಗರೇ ಇದು ಚಿನ್ನದ ಒಳ ಉಡುಪು ಎಂದು ಊಹಿಸಿದ್ದಾರೆ. ದುಬಾರಿ ವಸ್ತುಗಳ ಹೊರತಾಗಿ ಊರ್ವಶಿ ಕ್ರಿಕೆಟಿಗ ರಿಷಬ್ ಪಂತ್  ವಿಚಾರವಾಗಿ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ರಿಷಬ್ ಪಂತ್ ಹೈಟ್ ಬಗ್ಗೆ ಊರ್ವಶಿ ಟೀಕೆ ಮಾಡಿದ್ದರು. ಇದಕ್ಕೆ ಪಂತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದರು. ರಿಷಬ್ ಪಂತ್ ಜೊತೆ ಊರ್ವಶಿ ಈ…

Read More

ದಕ್ಷಿಣದ ಖ್ಯಾತ ನಟ ಶರತ್ ಕುಮಾರ್ ಪುತ್ರಿ ನಟಿ ವರಲಕ್ಷ್ಮಿ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಶಬರಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ನಟಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದನ್ನು ನೆನಪಿಸಿಕೊಂಡರೆ, ಈಗಲೂ ಹಿಂಸೆ ಅನಿಸುತ್ತದೆ ಎಂದಿದ್ದಾರೆ. ಶಬರಿ ಸಿನಿಮಾದಲ್ಲಿ ತಾಯಿಯು ತನ್ನ ಮಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವ ಕಥೆಯನ್ನು ಆಧರಿಸಿದೆ. ಈ ಸಮಯದಲ್ಲಿ ವರಲಕ್ಷ್ಮಿ ಲೈಂಗಿಕ ದೌರ್ಜನ್ಯದ ಕುರಿತಾದ ಮಾತುಗಳನ್ನು ಆಡಿದ್ದಾರೆ. ತಮ್ಮ ಜೀವನದಲ್ಲೇ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ನಾನು ಈ ಹಿಂದೆ ಇಂತಹ ಸಿನಿಮಾ ಮಾಡಿಲ್ಲ. ಈ ಚಿತ್ರದಲ್ಲಿ ನಾನು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ತಾಯಿ ತನ್ನ ಮಗಳನ್ನು ಹೇಗೆ ರಕ್ಷಿಸುತ್ತಾಳೆ ಎಂಬುದು ಈ ಚಿತ್ರದ ಕಥಾವಸ್ತು. ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ ಹಲವು ದೃಶ್ಯಗಳು ಈ ಚಿತ್ರದಲ್ಲಿದೆ. ನಾನು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಅಘಾತ. ಇಂತಹ ಘಟನೆ ನಡೆದಾಗ…

Read More

ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟ ಕಂ ಮಾಡೆಲ್ ಸಾಹಿಲ್ ಖಾನ್ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವೇಷ ಬದಲಿಸಿಕೊಂಡು ನಾಲ್ಕು ದಿನಗಳ ಕಾಲ ಪ್ರಯಾಣ ಮಾಡಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಿರೀಕ್ಷಣಾ ಜಾಮೀನು ವಜಾ ಆಗುತ್ತಿದ್ದಂತೆಯೇ ಗುರುತು ಸಿಗದಂತೆ ವೇಷ ಬದಲಿಸಿಕೊಂಡು 1800 ಕಿಲೋ ಮೀಟರ್ ಪ್ರಯಾಣ ಮಾಡಿದ್ದು ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನಾ ಕಡೆಗಳಲ್ಲಿ ನಟ ಸಾಹಿಲ್ ಪ್ರಯಾಣಿಸಿದ್ದು ಕೊನೆಗೂ ಹೈದರಾಬಾದ್ ನಲ್ಲಿ ಇರುವು ಸುಳಿವು ಸಿಕ್ಕಿತ್ತು. ಪೊಲೀಸರು ಪತ್ತೆ ಮಾಡುತ್ತಿದ್ದಂತೆಯೇ ಛತ್ತೀಸ್ ಗಢಕ್ಕೆ ಹಾರಿದ್ದ ನಟನನ್ನು ಕೊನೆಗೂ ಛತ್ತೀಸ್ ಗಢದ ಜಗದಲ್ ಪುರದ ಹೋಟೆಲ್ ವೊಂದರಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಹಿಲ್ ಖಾನ್ ನನ್ನು ಪೊಲೀಸರು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಮಹಾದೇವ್ ಬೆಟ್ಟಿಂಗ್ ಆಪ್ ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದರು.…

Read More

ಡಿಜಿಟಲ್ ಇಂಡಿಯಾದ ಗುರಿ ತಲುಪಲು ಭಾರತಕ್ಕೆ ಬಲಿಷ್ಠ 3 ಟೆಲಿಕಾಂ ಕಂಪನಿಗಳ ಅಗತ್ಯವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ. ವೊಡಾಫೋನ್ ಐಡಿಯಾ ಎಫ್‌ಪಿಒ ಪಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇದು ಸಣ್ಣ ಬೆಳವಣಿಗೆಯಲ್ಲ, ಉತ್ತಮವಾದ ವಿಚಾರವಾಗಿದ್ದು, ಸಹಜವಾಗಿ ರಾಷ್ಟ್ರಕ್ಕೆ ಕನಿಷ್ಠ ಮೂರು ಟೆಲಿಕಾಂ ಆಪರೇಟರ್‌ಗಳ ಅಗತ್ಯವಿದೆ ಎಂದಿದ್ದಾರೆ. ಇದು ಭಾರತ ಸರ್ಕಾರದ ಆಶಯವಾಗಿತ್ತು, ಆದರೆ ಕುಮಾರ್ ಮಂಗಲಂ ಬಿರ್ಲಾ ಅವರು ದಾರಿ ತೋರಿಸದ ಹೊರತು ಇದೆಲ್ಲವೂ ಆಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ ” ಎಂದು ಹೇಳಿದ್ದಾರೆ. ವೊಡಾಫೋನ್ ಈ ವಾರದ ಆರಂಭದಲ್ಲಿ ಮಾರುಕಟ್ಟೆಯಲ್ಲಿ 18,000 ಕೋಟಿ ರೂ. ಏರಿಕೆ ಕಂಡಿದೆ. ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಲೇ ಇದೆ ಮತ್ತು ಡಿಜಿಟಲೀಕರಣದ ಬೆನ್ನೆಲುಬಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು. “ನನ್ನ ಪ್ರಕಾರ ಡಿಜಿಟಲ್ ಜೀವನ ವಿಧಾನವಾಗಿದೆ, ಮತ್ತು ದೇಶದಲ್ಲಿ ಇರುವ ಅವಕಾಶಗಳೊಂದಿಗೆ, ನಮ್ಮ ಸ್ವಂತ ಹೂಡಿಕೆದಾರರು ಇಲ್ಲದಿದ್ದರೆ, ಈ ವಲಯವು ವಿದೇಶಿ ಹೂಡಿಕೆದಾರರಿಗೆ…

Read More

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಸಿಂಹಪ್ರಿಯಾ ಜೋಡಿ ಮರ್ಸಿಡೀಸ್ ಬೆಂಜ್​ ಜಿಎಲ್​ಇ 450 ಡಿ ಕಾರು ಖರೀದಿಸಿದ್ದು, ಸಖತ್ ಐಷಾರಾಮಿ ಆಗಿದೆ. ಕಾರನ್ನು ಖರೀದಿಸೋ ಸಂದರ್ಭದ ವಿಡಿಯೋ ಮಾಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೋರೂಂನಲ್ಲಿ ಸಖತ್ ಅದ್ದೂರಿಯಾಗಿ ಡೆಕೋರೇಟ್ ಮಾಡಲಾಗಿತ್ತು. ಮೊದಲು ಕಾರನ್ನೇರಿದ ಹರಿಪ್ರಿಯಾ ಅವರು ಕಾರನ್ನು ಓಡಿಸಿದರು. ಬೆಂಗಳೂರಿನಲ್ಲಿ ಈ ಕಾರಿನ ಬೆಲೆ 1.20-1.40 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದರಲ್ಲಿ 1993 ಸಿಸಿ ಹಾಗೂ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್​ಮೀಷನ್​ನ ಈ ಕಾರು ಹೊಂದಿದೆ. ಚಂದನವನದ ಚೆಲುವೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಮದುವೆಯಾದ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಅನೇಕ ಸ್ಯಾಂಡಲ್​ವುಡ್​ ಗಣ್ಯರು  ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ರು.

Read More

ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಆಕೆಯ ವಿಮೆ ಹಣ ಪಡೆದು ಜೀವಂತ ವ್ಯಕ್ತಿಯ ಗಾತ್ರದ ಸೆಕ್ಸ್ ಆಟಿಕೆ ಖರೀದಿಸಿದ್ದ ಘಟನೆ ಅಮೇರಿಕಾದಲ್ಲಿ ನಡೆದಿದೆ. ಕಾಲ್ಬಿ ಟ್ರಿಕಲ್ ಎಂಬ ವ್ಯಕ್ತಿ ತನ್ನ ಪತ್ನಿ ಕ್ರಿಸ್ಟನ್ ಟ್ರಿಕಲ್ ನ್ನು ಹತ್ಯೆ ಮಾಡಿದ್ದು, ಬಳಿಕ 911 ಗೆ ಕರೆ ಮಾಡಿ ಆಕೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದ. ಪತ್ನಿಯ ಸಾವಿನಿಂದ ಬಂದ ವಿಮೆ ಹಣದಿಂದ 2000 ಡಾಲರ್ ( 1,66,805 ರೂಪಾಯಿ) ಮೌಲ್ಯದ ಜೀವಂತ ವ್ಯಕ್ತಿಯ ಗಾತ್ರದಲ್ಲಿರುವ ಸೆಕ್ಸ್ ಆಟಿಕೆಯನ್ನು ಖರೀದಿಸಿದ್ದಾನೆ. ಹಣ ಪಡೆದ 2 ದಿನಗಳಲ್ಲಿ ಕಾಲ್ಬಿ ಟ್ರಿಕಲ್ ಸೆಕ್ಸ್ ಆಟಿಕೆ ಖರೀದಿಸಿದ್ದಾನೆ. ಪೊಲೀಸ್ ಅಧಿಕಾರಿಗಳು ಈ ಘಟನೆಯಲ್ಲಿ ಮಹಿಳೆಯ ಸಾವಿನ ಹಿಂದೆ ಪತಿಯ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ಪ್ರಕಾರ ಟ್ರಿಕಲ್ ಸುಮಾರು 8 ತಿಂಗಳಲ್ಲಿ $120,000 ವಿಮಾ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾನೆ. ಜೀವಂತ ವ್ಯಕ್ತಿಯ ಗಾತ್ರದ ಲೈಂಗಿಕ ಗೊಂಬೆಯನ್ನು ಖರೀದಿಸುವುದರ ಹೊರತಾಗಿ, ಟ್ರಿಕಲ್ ವೀಡಿಯೋ…

Read More

ಮಧ್ಯ ಮೆಕ್ಸಿಕೊದ ಮಾಲಿನಾಲ್ಕೊ ಬಳಿ ತೀರ್ಥಯಾತ್ರೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದು, 31 ಜನರು ಗಾಯಗೊಂಡಿದ್ದಾರೆ. ಕ್ಯಾಪುಲಿನ್-ಚಲ್ಮಾ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ರಾಜ್ಯ ಪೊಲೀಸರು ಈ ಬಗ್ಗೆ ಕಾರ್ಯಾಚಾರಣೆಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯ ಮೆಕ್ಸಿಕನ್ ಭದ್ರತಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ವೈದ್ಯಕೀಯ ಘಟಕಗಳು ಸಹ ಘಟನಾ ಸ್ಥಳಕ್ಕೆ ಧಾವಿಸಿದವು. ಚಾಲಕ ಹೇಗೆ ನಿಯಂತ್ರಣ ಕಳೆದುಕೊಂಡನು ಎಂಬುದು ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಗ್ವಾನಾಜುವಾಟೊ ರಾಜ್ಯದ ಯಾತ್ರಾರ್ಥಿಗಳು ಮೆಕ್ಸಿಕೊ ನಗರದ ನೈಋತ್ಯದಲ್ಲಿರುವ ಕ್ರಿಶ್ಚಿಯನ್ ಅಭಯಾರಣ್ಯದ ಸ್ಥಳವಾದ ಚಲ್ಮಾಗೆ ಪ್ರಯಾಣಿಸುತ್ತಿದ್ದರು. ಈ ಅಭಯಾರಣ್ಯವು ಮೆಕ್ಸಿಕೊದ ಯಾತ್ರಾರ್ಥಿಗಳಿಗೆ ಪ್ರಮುಖ ತಾಣಗಳಲ್ಲಿ ಒಂದಾಗಿದ್ದು ಅಪಘಾತಗೊಂಡ ಬಸ್ ಅಲ್ಲಿಗೆ ತೆರಳುತ್ತಿತ್ತು ಎನ್ನಲಾಗಿದೆ.

Read More