Author: Author AIN

‘ಡೆವಿಲ್’ ಸಿನಿಮಾದ ಚಿತ್ರೀಕರಣದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದ ನಟ ದರ್ಶನ್ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಗುಣಮುಖರಾಗಿದ್ದು ಅಭಿಮಾನಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಕೈಯಿಂದ ಬ್ಯಾಂಡೇಜ್ ತೆಗೆದು ಅಭಿಮಾನಿಗಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದು ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಬ್ಯಾಂಡೇಜ್ ಇಲ್ಲದೇ ದರ್ಶನ್ ಕಾಣಿಸಿಕೊಂಡಿದ್ದಾರೆ. ಸರ್ಜರಿ ಬಳಿಕ ಚೇತರಿಸಿಕೊಂಡಿರುವ ದರ್ಶನ್ ಅಭಿಮಾನಿಗಳ ಜೊತೆ ಖುಷಿ ಖುಷಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಗುಣಮುಖರಾಗಿರುವ ದರ್ಶನ್‌ರನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ದರ್ಶನ್ ನಟನೆಯ ಬಹುನಿರೀಕ್ಷಿತ `ಡೆವಿಲ್’ ಸಿನಿಮಾ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಶೀಘ್ರದಲ್ಲೇ 2ನೇ ಹಂತದ ಶೂಟಿಂಗ್ ಆರಂಭವಾಗಲಿದೆ.

Read More

ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ. ಭಾರತದ ಜೊತೆಗೆ ಚೀನಾ, ರಷ್ಯಾ, ಜಪಾನ್‌, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾ ರಾಷ್ಟ್ರಗಳ ಪ್ರವಾಸಿಗಳಿಗೆ ಶುಲ್ಕರಹಿತವಾಗಿ ವೀಸಾ ಸೇವೆ ನೀಡಲಾಗುತ್ತದೆ ಎಂದು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ‘ವಿದೇಶಿಯರಿಗೆ 30 ದಿನ ಅವಧಿಯ ವೀಸಾಗಾಗಿ 50 ಡಾಲರ್ ಶುಲ್ಕ ವಿಧಿಸುವ ಹಾಗೂ ಭಾರತ ಸೇರಿ ಏಳು ರಾಷ್ಟ್ರಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ ನೀಡುವ ವ್ಯವಸ್ಥೆಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿಕೆಯು ಸ್ಪಷ್ಟಪಡಿಸಿದೆ.

Read More

ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೇ ಪತಿಯೇ ಆಕೆಯನ್ನು ಕೊಂದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಿಸೌರಿಯ ಮೆಡಿಕಲ್‌ ಸೆಂಟರ್‌ನಲ್ಲಿ ರೊನ್ನಿ ವಿಗ್ಸ್‌ ಎಂಬ ವ್ಯಕ್ತಿ ಆತನ ಪತ್ನಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ವೆಚ್ಚ ಭರಿಸಲು ಆತನಿಂದ ಸಾಧ್ಯವಾಗಿಲ್ಲ. ಇತ್ತ ಪತ್ನಿ ಗುಣಮುಖರಾಗುವ ಸೂಚನೆಯೂ ಇರಲಿಲ್ಲ. ಇದರಿಂದ ಬೇಸರಗೊಂಡ ವಿಗ್ಸ್‌ ಆಸ್ಪತ್ರೆಯಲ್ಲೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ಆ ಬಳಿಕ ವಿಗ್ಸ್‌ ತಾವೇ ಪತ್ನಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಬಾಲಿವುಡ್ ಕಪಲ್ಸ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಕಂಪ್ಲೀಟ್ ಮಾಡಿರುವ ನಟಿ ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ. ಈ ಮಧ್ಯೆ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು. ಇತ್ತೀಚೆಗೆ ದೀಪಿಕಾ ಗರ್ಭಿಣಿ ಎಂಬ ಸುದ್ದಿ ಸಹ ವೈರಲ್ ಆಗಿದೆ. ಈಗ ನಟ ರಣವೀರ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿರುವ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಪದ್ಮಾವತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿ ಜನಮೆಚ್ಚುಗೆ ಗಳಸಿದ್ದಾರೆ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ 14 ನವೆಂಬರ್…

Read More

ದೇಶದ ಪ್ರತಿಷ್ಠಿತ ಫ್ಯಾಶನ್‌ ನೆಟ್‌ವರ್ಕ್‌ ಸಂಸ್ಥೆಯ ಮಾಲೀಕನ ಮಗಳು. ಸಿಮೆಂಟ್‌, ಕೆಮಿಕಲ್‌, ರಿಟೇಲ್‌, ಫೈನಾನ್ಶಿಯಲ್‌ ಸರ್ವೀಸ್‌ ಸೇರಿದಂತೆ ದೇಶದ ಸಕಲ ಕ್ಷೇತ್ರಗಳಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ , 2023ರಲ್ಲಿ ದೇಶದ 9ನೇ ಅತ್ಯಂತ ಶ್ರೀಮಂತ ಕುಮಾರ ಮಂಗಲಂ ಬಿರ್ಲಾ ಅವರ ಹಿರಿಯ ಪುತ್ರಿ ಅನನ್ಯಾ ಬಿರ್ಲಾ ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ತಂದೆಯ ವಾಣಿಜ್ಯ ಉದ್ಯಮಗಳನ್ನು ನೋಡಿಕೊಳ್ಳುವ ಹಾಗೂ ಅದರ ಬಗ್ಗೆ ಗಮನ ನೀಡುವ ಸಲುವಾಗಿ ತನ್ನ ಇಷ್ಟದ ಸಂಗೀತ ಕ್ಷೇತ್ರವನ್ನು ಬಿಡುತ್ತಿರುವುದಾಗಿ ಅನನ್ಯಾ ಬಿರ್ಲಾ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ‘ಇದು ನನ್ನ ಅತ್ಯಂತ ಕಠಿಣ ನಿರ್ಧಾರ. ನಾನು ನಡೆಸುವ ಮತ್ತು ನಿರ್ಮಿಸುತ್ತಿರುವ ಎರಡೂ ವ್ಯವಹಾರಗಳನ್ನು ಸಮತೋಲನಗೊಳಿಸುವ ಹಂತವನ್ನು ನಾನು ತಲುಪಿದ್ದೇನೆ. ಆದರೆ, ಇನ್ನು ಮುಂದೆ ಸಂಗೀತವು ನನಗೆ ಅಸಾಧ್ಯವಾಗುತ್ತಿದೆ ಮತ್ತು ನಾನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನನ್ನ ಮೇಲೆ ಟೋಲ್ ತೆಗೆದುಕೊಳ್ಳುತ್ತಿದೆ. ಇಷ್ಟು ವರ್ಷಗಳಿಂದ ನಾನು ಬಿಡುಗಡೆ ಮಾಡಿದ ಸಂಗೀತ ಆಲ್ಬಂಗೆ ನೀವು ತೋರಿಸಿದ ಎಲ್ಲಾ ಪ್ರೀತಿಗೆ…

Read More

ಟಾಲಿವುಡ್ ಬ್ಯೂಟಿ ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿತ್ತು. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದರು. ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್​ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ನಟಿ ತಿಳಿಸಿದ್ದಾರೆ. ಮಾರ್ಫ್​ ಮಾಡಿದ ಅರೆ ಬೆತ್ತಲೆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು, ಅದು ಸಮಂತಾ ಅವರ ಫೋಟೋ ಎಂದು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಸಮಂತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಕೋಟ್​ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್​ ಇದಾಗಿದೆ.…

Read More

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ಸದ್ಯ ಹೊರ ಬಂದಿರುವ ‘ಬಿಗ್‌ ಬಾಸ್‌’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಮತ್ತು ರಾಜಕೀಯದ ಕುರಿತು ನಟಿ ಪ್ರತಿಕ್ರಿಯಿಸಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಇದೀಗ ಅಭಿಮಾನಿಗಳ ಜೊತೆ ಪ್ರಶ್ನಾವಳಿ ಮಾಡಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನೀವು ಯಾವಾಗ ಮದುವೆಯಾಗುತ್ತೀರಾ? ಎಂದು ಸೋನುಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ. ನಾನ್ನ ಮದುವೆ ಬಗ್ಗೆ ಪ್ಲ್ಯಾನ್ ಇಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ ಎಂದಿದ್ದಾರೆ. ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ಆಸಕ್ತಿ ಇತ್ತು. ಈಗ ಇಲ್ಲ, ಆದರೆ ರಾಜಕೀಯಕ್ಕೆ ಹೋಗಬೇಕು. ಅಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಪ್ಲ್ಯಾನ್ ಇದೆ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಸೋನು ಹೇಳಿದ್ದಾರೆ. ‘ಕ್ಯಾಡ್ಬರಿಸ್’ ಎಂಬ ಸಿನಿಮಾದಲ್ಲಿ ಸೋನು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸ್ಪೆಷಲ್…

Read More

ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್‌ ಪುಟಿನ್‌ ಐದನೇ ಅವಧಿಗೆ ಹುದ್ದೆಗೆ ಏರಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿದ ನಂತರ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿರುವ ನಡುವೆ ತನ್ನ ಕೈಯಲ್ಲಿ ಎಲ್ಲಾ ಅಧಿಕಾರವನ್ನು ಕ್ರೋಢೀಕರಿಸಿಕೊಂಡು ಇಂದು ಐದನೇ ಅವಧಿಗೆ ತಮ್ಮ ರಾಜ್ಯಬಾರವನ್ನು ಶುರುಮಾಡಿದ್ದಾರೆ. ಈಗಾಗಲೇ ಸುಮಾರು ಕಾಲು ಶತಮಾನ ಅಧಿಕಾರದಲ್ಲಿದ್ದು, ಜೋಸೆಫ್‌ ಸ್ಟಾಲಿನ್‌ ನಂತರ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಪುಟಿನ್‌ಎಂದು ಇತಿಹಾಸ ದಾಖಲಾಗಿದ್ದು , ಹೊಸ ಸೇವಾ ಅವಧಿಯು 2030 ರವರೆಗೆ ಇರಲಿದೆ. ವಿಶ್ವ ಸಮರ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವಾಗಿ ಮಾರ್ಪಟ್ಟಿರುವ ಉಕ್ರೇನ್‌ನ 2022 ಆಕ್ರಮಣದ ನಂತರ, ರಷ್ಯಾ ಚೀನಾ, ಇರಾನ್‌ ಮತ್ತು ಉತ್ತರ ಕೊರಿಯಾದಂತಹ ದೇಶಗಳಿಗೆ ಬೆಂಬಲವಾಗಿ ನಂತಿದೆ. ಇನ್ನು ಆರು ವರ್ಷಗಳ ಅವಧಿಯಲ್ಲಿ 71ರ ಹರೆಯದ ಪುಟಿನ್‌ ದೇಶ-ವಿದೇಶಗಳಲ್ಲಿ ಏನು ಮಾಡಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ ಪ್ರಸ್ತುತ ತೆರಿಗೆಗಳನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು ಮತ್ತು ಹೆಚ್ಚಿನ ಜನರನ್ನು ಮಿಲಿಟರಿಗೆ ಸೇರಲು ಒತ್ತಡ ಹೇರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು…

Read More

ಕೇಪ್‌ ಕೆನವೆರಾಲ್‌ ನಿಂದ ಅಂತರಿಕ್ಷ ಯಾನ ಕೈಗೊಳ್ಳಬೇಕಿದ್ದ ತನ್ನ ಪ್ರಥಮ ಗಗನಯಾನಿ ಸಹಿತ ವ್ಯೋಮ ನೌಕೆಯ ಉಡಾವಣೆಯನ್ನು ರಾಕೇಟ್‌ನಲ್ಲಿನ ವಾಲ್ವ್ ವೊಂದರಲ್ಲಿ ದೋಷ ಕಂಡು ಬಂದ ಕಾರಣ ಬೋಯಿಂಗ್‌ ಸಂಸ್ಥೆ ಮುಂದೂಡಿಕೆಮಾಡಲಾಗಿದೆ. ಬೋಯಿಂಗ್‌ನ ಸ್ಟಾರ್‌ ಲೈನರ್‌ನ ಕ್ಯಾಪ್ಸೂಲ್‌ ಒಳಗೆ ನಾಸಾದ ಇಬ್ಬರು ಟೆಸ್ಟ್‌ ಪೈಲಟ್‌ಗಳು ಆಗ ತಾನೆ ಪ್ರವೇಶಿಸಿದ್ದರು. ಆದರೆ ಉಡಾವಣೆಗೆ ನಿಗದಿತ ಎರಡು ಗಂಟೆಗಳ ಮುನ್ನ ಕ್ಷಣಗಣನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಯುನೈಟೆಡ್‌ ಲಾಂಚ್‌ ಅಲಯೆನ್ಸ್ ಎಂಜಿನಿಯರ್‌ ಡಿಲ್ಲೋನ್‌ ರೈಸ್‌‍ ತಿಳಿಸಿದರು. ಕಂಪನಿಯ ಅಟ್ಲಾಸ್‌‍ ರಾಕೆಟ್‌ನಲ್ಲಿನ ಮೇಲು ಹಂತದಲ್ಲಿ ಆಮ್ಲಜನಕ ಪರಿಹಾರ ವಾಲ್ವ್ ನಲ್ಲಿ ಸಮಸ್ಯೆ ಕಂಡು ಬಂದಿತು ಎಂದು ರೈಸ್‌‍ ಹೇಳಿದರು.ಒಂದು ವಾರ ಅವಧಿಯ ವಾಸ್ತವ್ಯಕ್ಕಾಗಿ ಇಬ್ಬರು ಟೆಸ್ಟ್‌ ಪೈಲಟ್‌ಗಳನ್ನು ಈ ತಂಡವು ಯಾವಾಗ ಮತ್ತೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಯತ್ನಿಸಲಿದೆ ಎಂಬ ಬಗ್ಗೆ ತತ್‌ಕ್ಷಣದ ಮಾಹಿತಿ ಇಲ್ಲ. ಇದು ಬೋಯಿಂಗ್‌ನ ಪ್ರಥಮ ಸಿಬ್ಬಂದಿ ಸಹಿತ ವ್ಯೋಮನೌಕೆಯ ತಾಂತ್ರಿಕ ದೋಷದ ಕಾರಣ ಗಗನಯಾನದ ಇತ್ತೀಚಿನ ವಿಳಂಬವಾಗಿದೆ.ಸ್ಟಾರ್‌ಲೈನರ್‌ನ ಮಾನವ ರಹಿತ…

Read More

ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಟಿ ಸ್ಪರ್ಧಿಸುತ್ತಿದ್ದಾರೆ. ನಿತ್ಯ ಕಂಗನಾರ ಒಂದಲ್ಲ ಒಂದು ಹೇಳಿಕೆಗಳು ಸುದ್ದಿಯಾಗುತ್ತಲೆ ಇದೆ. ಇದೀಗ ‘ಇಂಡಸ್ಟ್ರಿಯಲ್ಲಿ ಅಮಿತಾಭ್ ಬಳಿಕ ಅತಿ ಹೆಚ್ಚು ಗೌರವಿಸಲ್ಪಟ್ಟ ನಟಿ ನಾನು ಎಂದು ಕಂಗನಾ ಹೇಳಿದ್ದು ಸದ್ಯ ಈಕೆಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ‘ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಅಥವಾ ಮಣಿಪುರಕ್ಕೆ ಹೋದಾಗ ಇಡೀ ದೇಶವೇ ಅಚ್ಚರಿ ವ್ಯಕ್ತಪಡಿಸುತ್ತದೆ. ನನಗೆ ಸಾಕಷ್ಟು ಪ್ರೀತಿ ಹಾಗೂ ಗೌರವ ಇದೆ ಎಂದು ಖುಷಿ ಆಗುತ್ತದೆ. ಅಮಿತಾಭ್ ಬಚ್ಚನ್ ಬಳಿಕ ಇಂಡಸ್ಟ್ರಿಯಲ್ಲಿ ಯಾರಿಗಾದರೂ ಸಾಕಷ್ಟು ಪ್ರೀತಿ, ಗೌರವ ಸಿಕ್ಕಿದೆ ಎಂದರೆ ಅದು ನನಗೆ ಮಾತ್ರ’ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಕಂಗನಾ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ‘ಕಂಗನಾ ಅವರ ಸೂಪರ್ ಹಿಟ್ ಸಿನಿಮಾ ಬಂದಿದ್ದು 2015ರಲ್ಲಿ. 9 ವರ್ಷಗಳಲ್ಲಿ 15 ಫ್ಲಾಪ್ ಸಿನಿಮಾ…

Read More