ಭದ್ರಾವತಿ: ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯಲ್ಲಿ ಪದೇ ಪದೇ ಎತ್ತಿ ಹಾಕಿ ಸ್ಪೋಟಿಸಲು ಮುಂದಾದ ಪಾನಮತ್ತ ಯುವಕ. ಗ್ಯಾಸ್ ಸಿಲಿಂಡರ್ ನಿಂದಲೇ ಮನೆ ಬಾಗಿಲು ತೆಗೆದು ಕಾಲೊನಿ ನಿವಾಸಿಗಳನ್ನು ಕೆಲ ಕಾಲ ಆತಂಕದಲ್ಲಿಟ್ಟ ದುರಳ.. ಹೌದು ಭದ್ರಾವತಿಯ ಆ ಕಾಲೊನಿ ಪಾಲಿಗೆ ತಪ್ಪಿದ ಭಾರಿ ದುರಂತವೇ ಸರಿ. ಪಾನಮತ್ತ ಯುವಕನೊಬ್ಬ ತುಂಬಿದ ಗ್ಯಾಸ್ ಸಿಲಿಂಡರ್ ನ್ನು ರಸ್ತೆಯ ಮದ್ಯೆ ದಲ್ಲಿ ಎತ್ತಿಹಾಕಿ ಸ್ಪೋಟಿಸಲು ಮುಂದಾಗಿದ್ದಾನೆ. ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಈ ಘಟನೆ ನಡೆದಿದ್ದು,
ತಡವಾಗಿ ಬೆಳಕಿಗೆ ಬಂದಿದೆ. ಮಂಜ ಎಂಬಾತ ಪಾನಮತ್ತನಾಗಿ ಕುಡಿದು ಸಿಲಿಂಡರ್ ಸ್ಪೋಟಿಸಲು ಮುಂದಾದ ಯುವಕನಾಗಿದ್ದಾವೆ. ಮಂಜ ರಾತ್ರಿ ಸಂದರ್ಭದಲ್ಲಿ ಅವಾಚ್ಯವಾಗಿ ಬೈಯುತ್ತಾ ಗ್ಯಾಸ್ ಸಿಲಿಂಡರ್ ಎತ್ತಿಹಾಕುವ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಈತ ಗ್ಯಾಸ್ ಸಿಲಿಂಡರ್ ಎತ್ತಿ ಹಾಕುತ್ತಿದ್ದ ಸಂದರ್ಭದಲ್ಲಿ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ. ಹೆಣ್ಣು ಮಕ್ಕಳಾದಿಯಾಗಿ ಹೊರಬಂದ ಸಂದರ್ಭದಲ್ಲಿ ಈತ ಬೈಯ್ಯುತ್ತಿದ್ದ ಮಾತುಗಳನ್ನು ಅವರು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಗ್ಯಾಸ್ ಸಿಲಿಂಡರ್ ನಿಂದಲೇ ಮನೆಬಾಗಿಲು ಮುರಿದು ಪ್ರವೇಶ
ಮೂಲತಃ ಮಂಜ ವಾಸವಾಗಿರುವ ಮನೆ ಲಾರೆನ್ಸ್ ಎಂಬುವರಿಗೆ ಸೇರಿದ್ದಾಗಿದೆ. ಇವರು ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದು, ಮನೆಯನ್ನು ಮಂಜ ಎಂಬವರಿಗೆ ಒಂದು ಲಕ್ಷಕ್ಕೆ ಲೀಸ್ ಗೆ ಕೊಟ್ಟಿದ್ದಾರೆ. ಬಾಲ್ಯದಿಂದಲೂ ಗೊತ್ತಿದ್ದ ವ್ಯಕ್ತಿಯಾಗಿದ್ದರಿಂದ ಮನೆ ಲೀಸ್ ಗೆ ನೀಡಿದ್ದರು. ಲಾರೆನ್ಸ್ ಹೊರ ರಾಜ್ಯಗಳಿಗೆ ಹೋಗುತ್ತಿದ್ದರಿಂದ ಭದ್ರಾವತಿಯತ್ತ ಬಾರದೆ ಒಂದು ವರ್ಷವೇ ಕಳೆದು ಹೋಗಿದೆ. ಈ ಸಂದರ್ಭವನ್ನೇ ಲಾಭ ಮಾಡಿಕೊಳ್ಳಲು ಮುಂದಾದ ಮಂಜ,
ಮನೆಯನ್ನು ಲಪಟಾಯಿಸಲು ಮುಂದಾದ. ಮನೆ ನನಗೆ ಸೇರಿದ್ದು, ಮನೆ ಮಾಲೀಕ ಬಂದರೆ ಕತ್ತು ಕಡಿಯುವುದಾಗಿ ಕುಡಿದ ಮತ್ತಿನಲ್ಲಿ ಕೇರೆಯಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾನೆ. ಈ ವಿಷಯ ಲಾರೆನ್ಸ್ ಗೆ ಗೊತ್ತಾಗಿದ್ದು, ಅವರು ಮಂಜನಿಂದ ಮನೆಯನ್ನು ವಾಪಸ್ಸು ಮಾಡಿಕೊಡಿ ಎಂದು ಅವಲೊತ್ತು ಕೊಂಡಿದ್ದಾರೆ. ಮಂಜ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿರುವುದಕ್ಕೆ ಕಾಲೋನಿಯ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಿಸುವ ಮಟ್ಟಿಗೆ ಮಂಜ ಮುಂದುವರೆದಿದ್ದು, ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಬೇಕಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)