ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.
ಭರದಿಂದ ಸಾಗುತ್ತಿದೆ ನಮ್ಮ ಮೆಟ್ರೋ ಚಾಲಕ ರಹಿತ ರೈಲು ಸಂಚಾರ ಸಿಗ್ನಲಿಂಗ್ ಟೆಸ್ಟ್!
ಕೆಟ್ಟ ಮೆಸೇಜ್ ಹಿನ್ನೆಲೆ ಆರ್ ಆರ್ ನಗರದ ವಿನಯ್ ಶೆಡ್ ಗೆ ರೇಣುಕಾಸ್ವಾಮಿಯನ್ನ ಕರೆತಂದಿದರು. ಆ ಬಳಿಕ ದರ್ಶನ್ ಹಾಗು ಪವಿತ್ರಗೌಡ ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ರೇಣುಕಸ್ವಾಮಿಗೆ ಪವಿತ್ರಾ ಗೌಡ ಮನಸೋ ಇಚ್ಚೆ ಚಪ್ಪಲಿಯಿಂದ ಹೊಡೆದಿದ್ದರು ಎನ್ನಲಾಗಿದೆ.
ದರ್ಶನ್ ಕೂಡ ಮನಸೋ ಇಚ್ಚೆ ರೇಣುಕಸ್ವಾಮಿಯ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಆ ಬಳಿಕ ಹಣ ಕೊಟ್ಟು ಊಟ ಮಾಡ್ಕೊಂಡ್ ಊರಿಗೆ ಹೋಗ್ತಾ ಇರ್ಬೇಕು. ಇನ್ನೊಂದು ಸಲ ಈ ರೀತಿಯ ಮೆಸೇಜ್ ಬಂದರೆ ಗತಿ ಕಾಣಿಸ್ತೀನಿ ಅಂತ ದರ್ಶನ್ ಅವಾಜ್ ಹಾಕಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಹಲ್ಲೆ ನಡೆಸಿದ ನಂತರ ನಟ ದರ್ಶನ್ ಹಾಗೂ ಪವಿತ್ರ ಗೌಡ ಶೆಡ್ ನಿಂದ ಹೊರ ಹೋಗಿದ್ದರು. ಆ ಬಳಿಕ ದರ್ಶನ್ ಶಿಷ್ಯರಿಂದ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪವನ್ ರಘು ಕಾರ್ತಿಕ್ ಸೇರಿದಂತೆ ಹಲವರಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿರುವ ಆರೋಪ ಕೇಳಿ ಬಂದಿದೆ. ರೇಣುಕಾಸ್ವಾಮಿಯ ಕಾಲು ಅಗಲಿಸಿ ಮರ್ಮಾಂಗಕ್ಕೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಗೋಡೆಗೆ ಮುಖ ಗುದ್ದಿ ಶಿಷ್ಯಂದಿರು ವಿಕೃತಿ ಮೆರೆದಿದ್ದಾರೆ. ಇದಾದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆಂದು ಪೊಲೀಸರ ಮುಂದೆ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.
ನಿಜವಾಗಿಯೂ ಇದು ನಡೆದಿರೋದ ಅಥವಾ ದರ್ಶನ್ ಹಾಗೂ ಪವಿತ್ರಗೌಡ ಬಚಾವ್ ಗೆ ಈ ರೀತಿ ಹೇಳಿದ್ರ ಅಂತ ತನಿಖೆ ನಡೆಯುತ್ತಿದೆ. ಸದ್ಯ ಬೆಳ್ಳಂಬೆಳಿಗ್ಗೆಯೇ ಪೊಲೀಸರು ಆರೋಪಿಗಳ ವಿಚಾರಣೆಗೆ ಮುಂದಾಗಿದ್ದಾರೆ.