ಗದಗ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗದಗ ನಗರದ ಫೀಲ್ಡ್ ಮಾರ್ಶಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಎತ್ತಿನ ಬಂಡಿ ಮೇಲೆ ಬೈಕ್ ನಿಲ್ಲಿಸಿ ಎತ್ತಿನ ಬಂಡಿ ಚಲಾಯಿಸಿ ವಿನೂತನವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಎತ್ತಿನ ಬಂಡಿಗೆ ಕಾರ್ ಕಟ್ಟಿ ಎಳೆಸಿ ರಾಜ್ಯ ಸರ್ಕಾರದ ವಿರುಧ್ಧ ಕಿಡಿಲಾರಿದ್ದು, ಅಣಕು ಶವ ಯಾತ್ರೆ ಮಾಡಿದರು. ಇನ್ನೂ ಕೈಯಲ್ಲಿ ಚಿಪ್ಪು ಹಿಡಿದು ಪ್ರತಿಭಟನೆ ಮಾಡಿದ್ದು,
ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನವಿರೋಧಿ ಸರ್ಕಾರ ಅಂತಾ ಧಿಕ್ಕಾರ ಕೂಗಿದರು. ಕೂಡಲೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಆಗ್ರಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.