ರಾಮನಗರ:- ಜೆಡಿಎಸ್ ನಲ್ಲಿ ಕಾರ್ಯಕರ್ತರು ಬಲಿಪಶು ಆಗುತ್ತಿದ್ದಾರೆ ಎಂದು ಮಾಗಡಿ ಬಾಲಕೃಷ್ಣ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಚನ್ನಪಟ್ಟಣದಲ್ಲಿ ನಿಖಿಲ್ ನಿಲ್ಲಿಸಬೇಕು ಎಂದು ಹೆಚ್ಡಿಕೆಗೆ ಅವರ ಹೋಂ ಮಿನಿಸ್ಟರ್ ಆದೇಶ ಆಗಿದೆ.
ಶಿಷ್ಯನ ಮುನಿಸು ಶಮನಗೊಳಿಸುವಲ್ಲಿ ಬಿಎಸ್ ವೈ ವಿಫಲ – ರೇಣುಕಾಚಾರ್ಯ ಮುಂದಿನ ನಡೆ ಏನು!?
ಚನ್ನಪಟ್ಟಣದಲ್ಲಿ ನಿಖಿಲ್ ನಿಲ್ಲಿಸುವ ಬಗ್ಗೆ ಮಾಹಿತಿ ಇದೆ. ಅವರ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಗೊತ್ತಾಗುತ್ತೆ. ಇವರನ್ನ ಒದ್ದು ಓಡಿಸೋಣ ಅಂತ ಅವರು, ಅವರನ್ನ ಒದ್ದು ಓಡಿಸೋಣ ಅಂತ ಇವರು ನಿಂತಿದ್ದಾರೆ. ಕೊನೆಗೆ ಕಾರ್ಯಕರ್ತರ ಕಥೆ ಏನಾಗುತ್ತೋ ಗೊತ್ತಿಲ್ಲ. ಇವರೇನೋ ಎಲ್ಲೋ ಹೋಗಿ ಅಡ್ಜಸ್ಟ್ ಆಗ್ತಾರೆ ಆದ್ರೆ ಕಾರ್ಯಕರ್ತರ ಕಥೆ ಏನು ಎಂದು ಪ್ರಶ್ನಿಸಿದರು
ಕಾರ್ಯಕರ್ತರು ನಿಜವಾಗಿಯೂ ಬಲಿಪಶು ಆಗುತ್ತಾರೆ. ಈಗಲೇ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಉಪ ಚುನಾವಣೆ ನಡೆದರೆ ಯೋಗೇಶ್ವರ್ಗೆ ಟಿಕೆಟ್ ಸಿಗಲ್ಲ. ಈಗಲೇ ಅವರ ಕಾರ್ಯಕರ್ತರು ಕಾಂಗ್ರೆಸ್ ಬರಬೇಕು. ನಿಮ್ಮ ನಾಯಕರು ಬಂದರೂ ಒಳ್ಳೆಯದೇ. ಈಗಲೇ ಬಂದರೆ ನಿಮ್ಮಲ್ಲೇ ಯಾರಾದ್ರೂ ಎಂಎಲ್ಎ ಆಗಬಹುದು ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಆಹ್ವಾನ ನೀಡಿದ್ದಾರೆ.