ಹುಬ್ಬಳ್ಳಿ:- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೇವರಾಜೇಗೌಡ ಬಂಧನದ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ಹುಡುಕಿಕೊಟ್ರೆ 1 ಲಕ್ಷ ಬಹುಮಾನ!.. ಅರೆ ಇದು ಸರ್ಕಾರದ ಆದೇಶ ಅಲ್ರಿ!?
ಸ್ವಾರ್ಥ ರಾಜಕಾರಣ, ಪಕ್ಷ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿದೆ. ವಿರೋಧಿಗಳನ್ನ ಮುಗಿಸೋದು ಸ್ಪಷ್ಟವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಪಾತ್ರದ ಬಗ್ಗೆ ಸಾಕ್ಷಿಯನ್ನು ಹೇಳಿದ ಕಾರಣ ದೇವರಾಜೇಗೌಡರ ಬಂಧನವಾಗಿದ್ದು, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಹಿಟ್ಲರ್ರನ್ನ ಮೀರಿಸೋ ಆಡಳಿತ ಇದೆ. ಇಡೀ ಕಿಡ್ನ್ಯಾಪ್ ಪ್ರಕರಣ ಪ್ರಶ್ನಾರ್ಥಕವಾಗಿದೆ. ಯಾಕೆ ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ರು, ಪ್ರಜ್ವಲ್ ರೇವಣ್ಣ ಅವರನ್ನ ಯಾಕೆ ಬಿಟ್ಟರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ದೇವರಾಜೇಗೌಡ ತಮಗಿರೋ ಮಾಹಿತಿಯನ್ನು ಎಲ್ಲಿ ಹೇಳಬಹುದು ಅನ್ನೋ ಕಾರಣಕ್ಕೆ ಅವರ ಬಂಧನವಾಗಿದೆ. ಎಸ್ಐಟಿ ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡ್ತಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.
ಇಂದು ಬೆಂಗಳೂರಿನಲ್ಲಿ ಸಭೆ ಇದೆ, ದೇವರಾಜೇಗೌಡ ಬಂಧನ ವಿಚಾರದ ಬಗ್ಗೆ ಮುಂದೇ ಏನ ಮಾಡಬೇಕು ಅನ್ನೋದರ ಕುರಿತು ಚರ್ಚೆ ಮಾಡುತ್ತೇವೆ. ಇಡೀ ಪ್ರಕರಣ ಮುಚ್ಚಿ ಹಾಕೋ ಷಡ್ಯಂತ್ರ ಇದೆ ಎಂದರು.
ಎಲ್ಲಿ ಡಿಕೆ ಶಿವಕುಮಾರ್ ಸಿಕ್ಕಿ ಹಾಕಿಕೊಳ್ತಾರೋ ಅನ್ನೋ ಕಾರಣಕ್ಕೆ ದೇವರಾಜೇಗೌಡರ ಬಂಧನವಾಗಿದೆ. ಯಾರನ್ನೋ ರಕ್ಷಣೆ ಮಾಡೋದು, ಒಂದು ಪಕ್ಷ ಅಥವಾ ಒಂದು ಕುಟುಂಬ ಮುಗಿಸೋ ಹುನ್ನಾರ ನಡೆದಿದೆ. ಪ್ರಜ್ವಲ್ ರೇವಣ್ಣ ಹೊರಗೆ ಹೋಗೋಕೆ ಯಾಕೆ ಬಿಟ್ಟಿರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು
ಡಿಕೆ ಶಿವಕುಮಾರ್ ವಿರುದ್ಧ ಮಾತಾಡಿದ್ರೆ, ಒಂದು ರೀತಿ ಹಲ್ಲೆ ಆಕ್ರಮಣ ನಡೆಯುತ್ತಿದೆ. ದೇವರಾಜೇಗೌಡ ಇನ್ನು ಹೆಚ್ಚಿನ ಮಾಹಿತಿ ನೀಡಬಹುದು ಅನ್ನೋ ಕಾರಣಕ್ಕೆ ಬಂಧನವಾಗಿದೆ. ಅವರ ಬಾಯಿ ಮುಚ್ಚಿಸೋಕೆ ಸಾಧ್ಯ ಇಲ್ಲ. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಎಸ್ಐಟಿ ಒಂದು ರೀತಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡೋ ತರಹ ಆಗ್ತಿದೆ ಎಂದು ಹೇಳಿದರು
![](https://ainlivenews.com/wp-content/uploads/2024/01/Ad-Banner-copy-scaled.jpg)