ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರ ಸೇರಿದಂತೆ 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಟೋಲ್ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಸಾವು ನೋವಿಗೆ ಆಹ್ವಾನದ ರೀತಿಯಲ್ಲಿ ಸರ್ವಿಸ್ ರಸ್ತೆ ಮೃತ್ಯುಕೂಪವಾಗಿದೆ. ಎಲ್ಲಿ ಏನ್ ಸಮಸ್ಯೆ ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಎಸ್. ಬೆಂಗಳೂರು ಹೊರವಲಯ ನೆಲಮಂಗಲ 17 ಜಿಲ್ಲೆ ಹಾಗೂ ಹೊರ ರಾಜ್ಯಕ್ಕೂ ಸಂಪರ್ಕವನ್ನ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಯನ್ನ ಒಳಗೊಂಡಿದೆ, ಈ ನಡುವೆ ನೆಲಮಂಗಲ ಟು ಬೆಂಗಳೂರಿನ ದಾಸರಹಳ್ಳಿಯ ವರೆಗೆ ಟೋಲ್ ಕಂಪನಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಂದಲ್ಲಿ ಎರಡು ಭಾಗದಲ್ಲಿ ಸರ್ವಿಸ್ ರಸ್ತೆಯನ್ನ ನಿರ್ಮಾಣ ಮಾಡಿದ್ದು, ಆದರೆ ಈ ಸರ್ವಿಸ್ ರಸ್ತೆಯ ಅಭಿವೃದ್ಧಿಗೆ ಮಾತ್ರ ಗಮನ ಕೊಡದೆ ಕೇವಲ ಟೋಲ್ ಹಣ ಪಡೆಯುವ ರಸ್ತೆಯ ಅಭಿವೃದ್ಧಿಗೆ ಮಾತ್ರ ಗಮನಕೊಡುತ್ತಿದೆ ಎಂದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
Bank holidays 2024 May: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್.! RBI ರಜಾಪಟ್ಟಿ ಹೀಗಿದೆ ನೋಡಿ
ಈ ಸರ್ವಿಸ್ ರಸ್ತೆಯಲ್ಲಿ ನೆಲಮಂಗಲದಿಂದ ದಾಸರಹಳ್ಳಿಯ ವರೆಗೆ ಎಲ್ಲಿ ನೋಡಿದರು ಮಣ್ಣಿನ ರಾಶಿರಾಶಿಯ ಗುಡ್ಡೆಗಳು ಕಾಣುತ್ತಿವೆ ಜೊತೆಗೆ ಕಸದ ತ್ಯಾಜ್ಯ ಕೂಡ ಸರ್ವಿಸ್ ರಸ್ತೆಯಲ್ಲಿ ಇದ್ದು ವಾಹನ ಸವಾರರಿಗೆ ಇದು ಮೃತ್ಯುಕೂಪವಾಗಿ ಅಪಘಾತ ಸಾವು ನೋವುಗಳಿಗೆ ಆಹ್ವಾನ ಮಾಡುವಂತಿದೆ ಎಂದು ಜನರು ಟೋಲ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ನೆಲಮಂಗಲ ಹಾಗೂ ದಾಸರಹಳ್ಳಿಯ ವರೆಗೆ ಸಾಕಷ್ಟು ಗುಂಡಿಗಳಿದ್ದು ಕೇವಲ ತ್ಯಾಪೆ ಮಾಡುವ ಕೆಲವನ್ನ ಟೋಲ್ ನಿರ್ವಹಣೆ ಮಾಡಿದ್ದು ಹಣ ಕಟ್ಟದೆ ಸರ್ವಿಸ್ ರಸ್ತೆಯಲ್ಲಿ ಸಂಚಾರವನ್ನ ಮಾಡುವ ಸವಾರರಿಗೆ ಪ್ರತಿನಿತ್ಯ ದೂಳು ಕಸದ ತ್ಯಾಜ್ಯದ ವಾಸನೆ, ಜೊತೆಗೆ ರಾಶಿರಾಶಿ ಮಣ್ಣಿನ ಗುಡ್ಡಗಳಿಂದ ನರಕದ ರೀತಿಯಲ್ಲಿ ಬಾಸವಾಗುತ್ತಿದೆ. ಪ್ರತಿನಿತ್ಯ ಈ ಸರ್ವಿಸ್ ರಸ್ತೆಯ ಅಕ್ಕಪಕ್ಕದ ನೂರಾರು ಗ್ರಾಮಗಳ ಜನರು ಈ ರೀತಿಯಲ್ಲಿ ಚಿತ್ರಹಿಂಸೆಯನ್ನ ಅನುಭವಿಸುತ್ತಿದ್ದು,
ಟೋಲ್ ಹಣ ಸಂಗ್ರಹ ಮಾಡು ಕಂಪನಿಯಾಗಲಿ ಇದರ ನಿರ್ವಹಣೆ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಇತ್ತ ಗಮನ ವರಿಸದೆ ಸರ್ವಿಸ್ ರಸ್ತೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಒಟ್ಟಾರೆ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ನಾನಾ ಸಮಸ್ಯೆಗಳಿಂದ ಸವಾರರ ಹಾಗೂ ನೂರಾರು ಗ್ರಾಮದ ಜನರಿಗೆ ಮೃತ್ಯುಕೂಪವಾಗಿದೆ. ಇನ್ನಾದರು ಜಾಣ ಕುರುಡುತನ ಬಿಟ್ಟು ಸರ್ವಿಸ್ ರಸ್ತೆಯನ್ನ ಅಭಿವೃದ್ಧಿಗೆ ಮುಂದಾಗುತ್ತ ಕಾದು ನೋಡಬೇಕಿದೆ..