ಹೊಸಕೋಟೆ: ತೋಟದಲ್ಲಿ ಕಟ್ಟಿಹಾಕಿದ್ದ ಪಿಟ್ ಬುಲ್ ನಾಯಿ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ಹೊಸಕೋಟೆ ತಾಲೂಕಿನ ಹಲಸಿನಕಾಯಿಪುರ ಗ್ರಾಮದಲ್ಲಿ ನಡೆದಿದೆ. ರಾಮಾಂಜಿ ಅನ್ನೋ ರೈತನಿಗೆ ಸೇರಿದ ನಾಯಿ ಇದಾಗಿದ್ದು, ಬೀನ್ಸ್,
ಟೊಮ್ಯಾಟೊ ಬೆಳೆಗಳನ್ನು ಜಿಂಕೆಗಳು ತಿಂದು ಹಾಕುತ್ತವೆ ಎಂದು ತೋಟದಲ್ಲಿ ಪಿಟ್ ಬುಲ್ ನಾಯಿಯನ್ನ ಕಟ್ಟಿಹಾಕಲಾಗಿತ್ತು. ರಾತ್ರಿ ಗ್ರಾಮದ ಸಮೀಪದಲ್ಲೇ ಇರುವ ಅರಣ್ಯ ವಲಯದಿಂದ ಆಗಮಿಸಿರೋ ಚಿರತೆ ನಾಯಿಯನ್ನ ಬಲಿ ಪಡೆದು ಎಸ್ಕೆಪ್ ಆಗಿದೆ ಎನ್ನಲಾಗಿದೆ.ಸದ್ಯ ಚಿರತೆ ಹಾವಳಿಯಿಂದ ಗ್ರಾಮದ ರೈತರಲ್ಲಿ ಆತಂಕ ಮನೆಮಾಡಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)