ಯಲಹಂಕ:- ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಜರುಗಿದೆ. ಬೆಂಕಿ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ರಾಜಾನುಕುಂಟೆಯ ರಕ್ಷಾ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದೆ.
ಸಿಎಂ, ಡಿಸಿಎಂ ಸಾಹೇಬ್ರೆ ಹುಷಾರ್, ಮುಂದೆ ನಿಮ್ಮ ಸಿಡಿ ಬರಬಹುದು – ರಮೇಶ್ ಜಾರಕಿಹೊಳಿ ಹೊಸ ಬಾಂಬ್!
ಅಗ್ನಿ ಕಾಣಿಸಿಕೊಂಡ ಕೂಡಲೆ ಆಸ್ಪತ್ರೆಯಿಂದ ಜನ ಮತ್ತು ಸಿಬ್ಬಂದಿ ಹೊರಬಂದಿದ್ದಾರೆ. ಒಂಬತ್ತು ಜನ ಅಡ್ಮಿಟ್ ಮೂರು ಜನ ಐ ಸಿ ಯು ನಲ್ಲಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಗ್ನಿ ದುರಂತದಲ್ಲಿ ಕಟ್ಟಡವನ್ನು ಸಂಪೂರ್ಣ ದಟ್ಟ ಹೊಗೆ ಆವರಿಸಿದೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ.